ವಿದ್ಯಾರ್ಥಿಗಳ ಬಸ್ ಪಾಸ್‍ಗೆ ಅರ್ಜಿ ಆಹ್ವಾನ
ರಾಯಚೂರು , 30 ಮೇ (ಹಿ.ಸ.) : ಆ್ಯಂಕರ್ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ವಿಭಾಗದಿಂದ 2025-26ನೇ ಸಾಲಿನ ವಿದ್ಯಾರ್ಥಿಗಳ ಬಸ್ ಪಾಸ್ ಪಡೆಯಲು ಸೇವಾಸಿಂಧು ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜೂನ್ 01 ರಿಂದ ಸೇವಾ ಸಿಂಧು ಪೋರ್ಟಲ್ URL:https://sevasindhuse rvices.karna
ವಿದ್ಯಾರ್ಥಿಗಳ ಬಸ್ ಪಾಸ್‍ಗೆ ಅರ್ಜಿ ಆಹ್ವಾನ


ರಾಯಚೂರು , 30 ಮೇ (ಹಿ.ಸ.) :

ಆ್ಯಂಕರ್ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ವಿಭಾಗದಿಂದ 2025-26ನೇ ಸಾಲಿನ ವಿದ್ಯಾರ್ಥಿಗಳ ಬಸ್ ಪಾಸ್ ಪಡೆಯಲು ಸೇವಾಸಿಂಧು ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಜೂನ್ 01 ರಿಂದ ಸೇವಾ ಸಿಂಧು ಪೋರ್ಟಲ್ URL:https://sevasindhuse rvices.karnataka.gov.in. ಮುಖಾಂತರ ಅಥವಾ ಕರ್ನಾಟಕ ಒನ್, ಗ್ರಾಮ-ಒನ್ ಕೇಂದ್ರಗಳಲ್ಲಿ 30 ರೂ ಸೇವಾ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳ ಆಯ್ಕೆ ಮಾಡಿದ ಕೌಂಟರಗೆ ನಿಗದಿತ ಪಾಸಿನ ಶುಲ್ಕವನ್ನು ನಗದು ಅಥವಾ ಕ್ರೆಡಿಟ್ ಕಾರ್ಡ ಡೆಬಿಟ್ ಕಾರ್ಡ ಅಥವಾ ಯುಪಿಐ ಮೂಲಕ ಪಾವತಿಸಿ ಪಾಸ್ ಪಡೆಯಬಹದಾಗಿದೆ.

ರಾಯಚೂರು, ಲಿಂಗಸೂಗೂರು, ಸಿಂಧನೂರು, ದೇವದುರ್ಗ, ಮಾನವಿ, ಮಸ್ಕಿ ಸೇರಿದಂತೆ ತಲಾ ಒಂದು ವಿತರಣೆ ಕೇಂದ್ರಗಳಿವೆ. ಹೆಚ್ಚಿನ ಮಾಹಿತಿಗಾಗಿ 9620369539 ಸಂಖ್ಯೆಗೆ ಸಂಪರ್ಕ ಮಾಡಬಹುದಾಗಿದೆ. ಬಸ್ ಪಾಸ್ ಕಾರ್ಡ್ ವಿವರ ಮುದ್ರಣಕ್ಕೆ ಸಂಭಂದಿಸಿದಂತೆ ದೂರುಗಳಿದಲ್ಲಿ 6364600850, ನಿಗಮದ ಕಾಲ್ ಸೆಂಟರ್ 6366423883, 08024410574, 8792662814, 8792662816 . 08022279954ಗೆ ಸಂಪರ್ಕ ಮಾಡಬಹುದಾಗಿದೆ ಎಂದು ನಿಗಮದ ವಿಭಾಗೀಯ ನಿಯಾಂತ್ರಣಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande