ಹೊಸಪೇಟೆ, 30 ಮೇ (ಹಿ.ಸ.) :
ಆ್ಯಂಕರ್ : ಸಂಜೀವಿನಿ ಎನ್ಆರ್ಎಲ್ಎಂ ಯೋಜನೆಯಡಿಯಲ್ಲಿ ಹಂಪಿಯಲ್ಲಿ ಸ್ಥಾಪಿಸುವ ಅಕ್ಕ ಕೆಫೆ ಮೊಬೈಲ್ ಕ್ಯಾಂಟಿನ್ನಲ್ಲಿ ಕನಿಷ್ಟ 5 ವರ್ಷ ಕ್ಯಾಂಟೀನ್ ವಿಭಾಗದಲ್ಲಿ ಅನುಭವವಿರುವ ಶುಚಿರುಚಿಯಾದ ಆಹಾರ ತಯಾರಿಸಲು ಆಸಕ್ತಿ ಇರುವ ಅರ್ಹ ಸ್ವ-ಸಹಾಯ ಗುಂಪುಗಳಿಂದ ಅರ್ಜಿಯನ್ನು ಅಹ್ವಾನಿಸಲಾಗಿದೆ.
ಆಸಕ್ತಿ ಇರುವ ಹೊಸಪೇಟೆ ತಾಲೂಕಿನ ಹಂಪಿ ಹಾಗೂ ಬುಕ್ಕಸಾಗರ ಗ್ರಾಪಂ ವ್ಯಾಪ್ತಿಯ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಸಲ್ಲಿಸಬಹುದು.
ಜೂ.5 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಯೋಜನಾ ನಿರ್ದೇಶಕರ ವಿಭಾಗ ಕಲಾವತಿ ಜಿಲ್ಲಾ ವ್ಯವಸ್ಥಾಪಕರು (ಕೌಶಲ್ಯ) ಮೊ.9538740865 ಇವರನ್ನು ಸಂಪರ್ಕಿಸಬಹುದು ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೋಹಮ್ಮದ್ ಅಕ್ರಮ್ ಅಲಿ ಷಾ ತಿಳಿಸಿದ್ದಾರೆ.
.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್