ತುಮಕೂರು, 29 ಮೇ (ಹಿ.ಸ.) :
ಆ್ಯಂಕರ್ : ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಿಂದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಡಿ. ನಾಗೇನಹಳ್ಳಿ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು.
ಪ್ರಾಸ್ತಾವಿಕ ಭಾಷಣ ಮಾಡಿದ ಡಾ. ಲೋಗಾ ನಂದ ಅವರು ಜಲ ಸಂರಕ್ಷಣಾ ಆಂದೋಲನದಲ್ಲಿ ರೈತರು ನೀಡಿದ ಸಹಕಾರವನ್ನು ಸ್ಮರಿಸಿ ಧನ್ಯವಾದ ಹೇಳಿದರು. ಈ ಅಭಿಯಾನ ಮುಂಗಾರುಪೂರ್ವ ಅವಧಿಯಲ್ಲಿ ದೇಶವ್ಯಾಪಿಯಾಗಿ ಎರಡು ವಾರಗಳ ಕಾಲ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಡಾ. ತುಷಾರ್ ಕಾಂತಿ ಬೆಹರಾ (ಭಾರತೀಯ ತೋಟಗಾರಿಕಾ ಸಂಸ್ಥೆ) ಅವರು ರೈತರ ಬೆಂಬಲಕ್ಕೆ ಸರ್ಕಾರ ಈ ಅಭಿಯಾನ ಆರಂಭಿಸಿರುವುದಾಗಿ ಹೇಳಿದರು. ಸಮತೋಲಿತ ಗೊಬ್ಬರ ಬಳಕೆ, ಪೋಷಕಾಂಶ ಅಭಾವ ನಿವಾರಣೆ, ಮತ್ತು ಫಲವತ್ತತೆಯ ಉದ್ದೀಪನ ಕುರಿತಂತೆ ಬೆಂಬಲ ಸೂಚಿಸಿದರು.
ನೈಸರ್ಗಿಕ ಕೃಷಿಕ ನಾಗರಾಜು ಅವರು ತಮ್ಮ 15 ವರ್ಷಗಳ ಅನುಭವ ಹಂಚಿಕೊಂಡರು. ಬಹು ಮಹಡಿ ಬೆಳೆ ಪದ್ಧತಿಯಿಂದ ಆದಾಯ ಹೆಚ್ಚಳ ಸಾಧ್ಯವೆಂದು ತಿಳಿಸಿದರು.
ಕೃಷಿ ಅಧಿಕಾರಿ ವೆಂಕಟೇಶ್ ಅವರು ನವೀನ ತಂತ್ರಜ್ಞಾನಗಳ ಪ್ರಸಾರ ಹಾಗೂ ಕೃಷಿ ಇಲಾಖೆಯ ಬಿತ್ತನೆ ಸಹಾಯದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ತರಕಾರಿ ಬೀಜಗಳ ವಿತರಣೆ, ಡ್ರೋಣ್ ತಂತ್ರಜ್ಞಾನ ಉಪಯೋಗ, ಮತ್ತು ಜಲ ಸಂರಕ್ಷಣೆಯ ಕುರಿತು ಪ್ರಾತ್ಯಕ್ಷಿಕೆಗಳು ಜರುಗಿದವು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa