ಕೋಲಾರ, ಮೇ.೨೯ (ಹಿ.ಸ) ಆಂಕರ್ : ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಳ್ಳಿ ಗೋವಿಂದ ಗೌಡರು ಭ್ರಷ್ಟರ ಅಥವಾ ಇಲ್ಲವ ಎನ್ನುವ ವಿಚಾರಕ್ಕೂ ಮತ್ತು ಆಡಳಿತ ಮಂಡಳಿಯ ಚುನಾವಣೆಗೂ ಸಂಬAಧವಿಲ್ಲದ ವಿಷಯ. ಇನ್ನೊಬ್ಬರನ್ನು ಭ್ರಷ್ಟರು ಎಂದು ಹೇಳುವ ಯೋಗ್ಯತೆ ರಮೇಶ್ ಕುಮಾರ್ ಹಾದಿಯಾಗಿ ಜಿಲ್ಲೆಯಲ್ಲಿ ಇರುವ ಮತ್ತು ಜಿಲ್ಲೆಯ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ಯಾರಿಗಾದರೂ ಇದೆಯಾ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ನಿಮ್ಮಗಳಲ್ಲಿ ಯಾರಾದರೂ ನನಗೆ ಆಯೋಗ್ಯತೆ ಇದೆ ಎನ್ನುವುದಾದರೆ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಒಂದು ವೇದಿಕೆಯನ್ನು ಸೃಷ್ಟಿ ಮಾಡೋಣ ಅಲ್ಲಿಗೆ ಬನ್ನಿ ನಿಮ್ಮ ಯೋಗ್ಯತೆಯನ್ನು ಜನರ ಮುಂದೆ ಸಾಬೀತು ಮಾಡಿಕೊಳ್ಳಬಹುದು ಎಂದು ಕಾಂಗ್ರೆಸ್ ಮುಖಂಡ ಶೇಷಾಪುರ ಗೋಪಾಲ್ ಸವಾಲು ಹಾಕಿದ್ದಾರೆ.
ಗೋವಿಂದ ಗೌಡರು ಮಾಧ್ಯಮದೊಂದಿಗೆ ಮಾತನಾಡುವಾಗ ಎತ್ತಿರುವ ವಿಷಯಗಳ ಬಗ್ಗೆ ಜನತೆಯ ಮುಂದೆ ನಮ್ಮ ನಾಯಕರು ಸ್ಪಷ್ಟನೆಯನ್ನು ಕೊಟ್ಟು ತಾನು ಜನರ ನಾಯಕ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ರಾಜಕೀಯವಾಗಿ ಸಾರ್ವಜನಿಕ ಬದುಕನಿಂದ ಗತ್ಯಂತರವಿಲ್ಲದೆ ನಿವೃತ್ತಿ ಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ.
ಈ ತಿಂಗಳ ೨೮ ಬುಧವಾರದಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆ ಕೆಲವೊಂದು ಪ್ರಮುಖವಾದ ವಿಷಯಗಳನ್ನು ಜನರ ಮುಂದೆ ತಂದಿಟ್ಟಿದೆ. ಈ ವಿಷಯಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಮುಂದಿನ ರಾಜಕೀಯ, ಆಡಳಿತಾತ್ಮಕ ಮತ್ತು ಸಾಮಾಜಿಕ ಭವಿಷ್ಯ ರೂಪಿಸುವಲ್ಲಿ ಬಹಳಷ್ಟು ಮಹತ್ವವಾದ ಪಾತ್ರವನ್ನು ವಹಿಸುತ್ತವೆ ಎನ್ನುವುದು ನಿಸ್ಸಂದೇಹ.
ಮೊದಲನೇದಾಗಿ ಸುಮಾರು ಒಂದುವರೆ ದಶಕದಷ್ಟು ಕಾಲ ಬ್ಯಾಂಕಿನ ಆಡಳಿತ ಮತ್ತು ವ್ಯವಹಾರ ನೆನೆಗುದಿಗೆ ಬಿದ್ದಿದ್ದು ಜಿಲ್ಲೆಯಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘಗಳು ಕೆಲವೊಬ್ಬ ಪಟ್ಟಭದ್ರ ಹಿತಾಸಕ್ತಿಗಳ ಕೈ ಗೊಂಬೆಗಳಾಗಿ ರೈತರಿಗಾಗಿ ತನ್ನ ಉದ್ದೇಶಿತ ಕಾರ್ಯವನ್ನ ನಿಭಾಯಿಸುವಲ್ಲಿ ವಿಫಲವಾಗಿದ್ದವು. ೨೦೧೩ರ ನಂತರ ಬ್ಯಾಲಳ್ಳಿ ಗೋವಿಂದ ಗೌಡರ ನೇತೃತ್ವದಲ್ಲಿ ಈ ಸಂಸ್ಥೆ ಮುಂದಿನ ೧೦ ವರ್ಷಗಳಲ್ಲಿ ರಾಜ್ಯದಲ್ಲೇ ಒಂದು ಶ್ರೇಷ್ಠವಾದ ರೈತರ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು ಜಿಲ್ಲೆಯ ಪ್ರತಿಯೊಬ್ಬ ರೈತನಿಗೂ ಒಂದು ಆಶಾದೀಪವಾಗಿತ್ತು.
ಚುನಾವಣೆಯ ಫಲಿತಾಂಶದ ನಂತರ ಬ್ಯಾಲಳ್ಳಿ ಗೋವಿಂದಗೌಡರು ಮಾಧ್ಯಮದೊಂದಿಗೆ ಮಾತನಾಡುತ್ತ, ಈ ಬ್ಯಾಂಕನ್ನು ಜಿಲ್ಲೆಯ ರಾಜಕೀಯ ನಾಯಕರುಗಳು ತಮ್ಮ ಸ್ವಾರ್ಥ ರಾಜಕೀಯ ಬೆಳವಣಿಗೆಗಾಗಿ ಯಾವ ರೀತಿ ದುರುಪಯೋಗ ಪಡಿಸಿಕೊಂಡರು ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ಜನರ ಮುಂದೆ ತಂದಿರುವ ಕೆಲವೊಂದು ವಿಷಯಗಳು ಈ ಜಿಲ್ಲೆಯ ಸಾಮಾಜಿಕ, ಆಡಳಿತಾತ್ಮಕ ಹಾಗೂ ರಾಜಕೀಯ ಸ್ಥಿತಿಗಳ ಮೇಲೆ ಆಘಾತಕಾರಿಯಾದ ಪರಿಣಾಮಗಳನ್ನು ಬೀರುವುದು ಕನ್ನಡಿಯಲ್ಲಿ ನೋಡಿದಷ್ಟು ಸ್ಪಷ್ಟವಾಗಿ ಕಾಣುತ್ತಿದೆ. ಜಿಲ್ಲೆಯ ಹಾಗೂ ರಾಜ್ಯದ ಆಡಳಿತ ಚುಕ್ಕಾಣೆಯನ್ನ ಹಿಡಿದು ಜಿಲ್ಲೆಯ ಮತ್ತು ಶ್ರೀನಿವಾಸಪುರ ಬಯಲು ಸೀಮೆಯ ಜನರ ಬದುಕನ್ನ ಸುಧಾರಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿಭಾಯಿಸುತ್ತಾರೆ ಎಂಬ ಆಶಯದೊಂದಿಗೆ ಇದ್ದ ಜನರ ಮುಂದೆ ಆ ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ಬೆತ್ತಲೆಯಾಗಿ ನಿಂತಿರುವುದು ನಾವು ನೋಡಬಹುದು. ನಾನು ಈ ವ್ಯಕ್ತಿಯ ಸ್ವಾರ್ಥತೆಯ ಕೇಂದ್ರವಾದ ವ್ಯಕ್ತಿತ್ವವನ್ನು ಜಿಲ್ಲೆಯ ಜನರ ಮುಂದೆ ತರುವ ಬಹಳಷ್ಟು ಪ್ರಯತ್ನಗಳನ್ನು ಫಲಪ್ರದವಾಗಿ ಮಾಡಿದ್ದರೂ ನೆನ್ನೆಯ ದಿನ ಗೌಡರು ಜನರ ಮುಂದೆ ತಂದಿರುವ ವಿಷಯಗಳು ಅತ್ಯಂತ ಗಂಭೀರವಾಗಿವೆ.
ಲೋಕಾಯುಕ್ತರು ಯಾವುದೇ ವಿಷಯಗಳಲ್ಲಿ ತನಿಖೆಯನ್ನು ಮಾಡುವ ಅಧಿಕಾರ ಅವರಿಗೆ ಇದೆ. ಆದರೆ ತನಿಖೆಯನ್ನು ಮಾಡುವಾಗ ನಿಸ್ಪಕ್ಷಪಾತವಾಗಿರಬೇಕು. ಆದರೆ ಇಲ್ಲಿ ಶ್ರೀನಿವಾಸಪುರ ಕ್ಷೇತ್ರದಲ್ಲಿ ಜನರಿಂದ ತಿರಸ್ಕೃತವಾಗಿರುವ ಒಬ್ಬ ಜನಪ್ರತಿನಿಧಿ ಲೋಕಾಯುಕ್ತರ ಕರ್ತವ್ಯದಲ್ಲಿ ಯಾವ ರೀತಿ ಪದೇ ಪದೇ ಹಸ್ತಕ್ಷೇಪ ಮಾಡುವುದನ್ನು ಸಾಕ್ಷಿಗಳ ಸಮೇತ ಜನರ ಮುಂದೆ ಗೌಡರು ತಂದಿದ್ದಾರೆ.
ನನಗೆ ಗೊತ್ತಿರುವ ಹಾಗೆ ಡಿಸಿಸಿ ಬ್ಯಾಂಕಿನ ಅವ್ಯವಹಾರಗಳು ಎಂದು ಆರೋಪಿಸಿರುವ ವಿಚಾರಗಳ ಬಗ್ಗೆ ಲೋಕಾಯುಕ್ತ ತನಿಖೆ ಮಾಡಬೇಕಾ ಅಥವಾ ಬೇಡವಾ ಎನ್ನುವ ವಿಚಾರ ಮಾನ್ಯ ಕರ್ನಾಟಕ ಹೈಕೋರ್ಟಿನ ಅಂಗಳದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಆದರೂ ಸಹ ಲೋಕಾಯುಕ್ತ ಅಧಿಕಾರಿಗಳ ಮೇಲೆ ಒತ್ತಡ ತಂದು ಅವರನ್ನು ತಪ್ಪು ದಾರಿಗೆ ಎಳೆದು ತನಿಖೆಗೆ ಮುಂದಾಗಿದ್ದಾರೆ. ಎನ್ನುವುದು ಸಹ ಜಿಲ್ಲೆಯ ಜನರು ಗಮನಿಸಬೇಕಾದ ಒಂದು ವಿಷಯ. ಇದಕ್ಕೆ ಕಾರಣ ಬ್ಯಾಂಕಿಗೆ ನೇಮಿಸಿರುವ ಆಡಳಿತ ಅಧಿಕಾರಿಯ ಪಕ್ಷಪಾತ ಅಧಿಕಾರ ದುರುಪಯೋಗ ಧೋರಣೆ ಎನ್ನುವುದು ಸಹ ಗಂಭೀರವಾದ ವಿಷಯ.
ಇನ್ನೂ ಬ್ಯಾಂಕಿಗೆ ಹೊಸದಾಗಿ ನೇಮಿಸಲ್ಪಟ್ಟಿರುವ ಆಡಳಿತ ಅಧಿಕಾರಿಯ ಬಗ್ಗೆ ಹೇಳುವುದಾದರೆ ಅದು ಒಂದು ದೊಡ್ಡ ಕಥೆ. ಹಿರಿಯ ಐಎಎಸ್ ಅಧಿಕಾರಿ ಆದ ಆದಿತ್ಯ ಆಮ್ಲಾನ್ ವಿಶ್ವಾಸ್ ಎನ್ನುವ ಇವರು ಕಂದಾಯ ಇಲಾಖೆಯಲ್ಲಿ ಬೆಂಗಳೂರು ವಿಭಾಗದ ವಿಭಾಗಿಯ ಆಯುಕ್ತರು. ಇದೇ ವ್ಯಕ್ತಿ ಮಾನ್ಯ ರಮೇಶ್ ಕುಮಾರ್ ಅವರ ಅರಣ್ಯ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬAಧಿಸಿದAತೆ ೨೦೧೩ರಲ್ಲಿ ಹೈಕೋರ್ಟ್ ಕೊಟ್ಟ ನಿರ್ದೇಶನದಂತೆ ಜಂಟಿ ಸರ್ವೆ ಮತ್ತು ಮುಂದಿನ ಕ್ರಮ ೨೦೨೩ ವರೆಗೂ ನಡೆಯದೇ ಇದ್ದಾಗ ವಕೀಲರಾದ ಕೆವಿ ಶಿವಾರೆಡ್ಡಿ ಅವರು ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ನಿರ್ದೇಶನದಂತೆ ೬ ನವಂಬರ್ ೨೦೨೪ ಕ್ಕೇ ನಿಗದಿಯಾಗಿದ್ದ ಜಂಟಿ ಸರ್ವೆಯನ್ನು ರದ್ದು ಮಾಡಿ ನಂತರದ ದಿನಗಳಲ್ಲಿ ಕಾನೂನಿನ ಒತ್ತಡವನ್ನು ತಪ್ಪಿಸಿಕೊಳ್ಳಲಿಕ್ಕೆ ತನ್ನ ಇಷ್ಟದಂತೆ ಸರ್ವೆ ಕಮಿಟಿಯನ್ನ ರಚಿಸಿ ೩೧ ಡಿಸೆಂಬರ್ ೨೦೨೪ ರಂದು ಮಾನ್ಯ ಹೈಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ವ್ಯಕ್ತಿಯೇ ಆಗಿದ್ದಾರೆ. ಈ ವ್ಯಕ್ತಿ ಇಂತಹ ಒಂದು ನೀತಿ ಗೆಟ್ಟ ಕೆಲಸಕ್ಕೆ ಕೈ ಹಾಕಿದ್ದೆ ರಮೇಶ್ ಕುಮಾರ್ ರವರ ಕಾನೂನುಬಾಹಿರ ಜಮೀನು ಒತ್ತುವರಿ ಬಚಾವ್ ಮಾಡುವ ಪ್ರಯತ್ನ. ಇಂತಹ ವ್ಯಕ್ತಿಯನ್ನು ಡಿಸಿಸಿ ಬ್ಯಾಂಕಿನ ಆಡಳಿತ ಅಧಿಕಾರಿ ಮಾಡಿರುವುದೇ ಒಂದು ದೊಡ್ಡ ಅಕ್ರಮ. ಏಕೆಂದರೆ ಬ್ಯಾಂಕಿನ ಆಡಳಿತ ಅಧಿಕಾರಿ ಸಹಕಾರ ಇಲಾಖೆಯ ಜಂಟಿ ನಿರ್ದೇಶಕರುರವರ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಿರಿಯ ಐಎಎಸ್ ಅಧಿಕಾರಿಗಳಾದ ಇವರು ಆಡಳಿತ ಶ್ರೇಣಿಯಲ್ಲಿ ಸಹಕಾರ ಇಲಾಖೆಯ ಜಂಟಿ ನಿರ್ದೇಶಕರಿಗಿಂತಲೂ ಉನ್ನತ ಅಧಿಕಾರಿ ಆಗಿರುತ್ತಾರೆ.
ಕೋಲಾರ ಜಿಲ್ಲಾಧಿಕಾರಿಗಳಿಗೆ ಆಡಳಿತಾತ್ಮಕವಾಗಿ ಬಾಸ್ ಆಗಿರುವ ರೀಜನಲ್ ಕಮಿಷನರ್ ಈಗ ಡಿಸಿಸಿ ಬ್ಯಾಂಕಿನ ಆಡಳಿತ ಅಧಿಕಾರಿಯಾಗಿ ಕೆಲವೊಂದು ಸಮಯ ಕೋಲಾರ ಜಿಲ್ಲಾಧಿಕಾರಿಯ ಆಜ್ಞೆಗಳನ್ನು ಸಹ ಪಾಲನೆ ಮಾಡಬೇಕಾಗುತ್ತದೆ. ಇದು ಆಡಳಿತಾತ್ಮಕ ವಾಗಿ ಕಾನೂನುಬಾಹಿರ. ಆದರೂ ಸಹ ಆದಿತ್ಯ ಆಮ್ಲಾನ್ ವಿಶ್ವಾಸ ಎನ್ನುವ ಈ ಒಂದು ಅಧಿಕಾರಿ ತನ್ನ ಆಡಳಿತಾತ್ಮಕ ಘನತೆಯನ್ನು ಮರೆತು ಈ ಒಂದು ಜವಾಬ್ದಾರಿಯನ್ನು ವಹಿಸಿರುವುದು ಮಾನ್ಯ ರಮೇಶ್ ಕುಮಾರ್ ಅವರ ಕೆಲವೊಂದು ಇಚ್ಚೆಗಳನ್ನು ಪೂರ್ಣಗೊಳಿಸಲಿಕ್ಕೆ ಬಂದಿರುವುದು ಸ್ಪಷ್ಟವಾಗಿರುತ್ತದೆ.
ಕಳೆದ ಒಂದುವರೆ ವರ್ಷಗಳಿಂದ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆಗಳನ್ನು ನಡೆಸದೆ ಈ ದಿನ ಬ್ಯಾಂಕಿನ ವ್ಯವಹಾರ ಎಷ್ಟು ಅದೋಗತಿಗೆ ಹೋಗಿದೆ ಎನ್ನುವುದು ಜಿಲ್ಲೆಯ ರೈತರಿಗೆ ಮಾತ್ರ ಗೊತ್ತು. ಗೋವಿಂದ ಗೌಡರನ್ನು ಮುಗಿಸಲೇಬೇಕೆಂಬ ಒಂದು ಕಾರಣದಿಂದ ರೈತರ ಹಾಗೂ ಜಿಲ್ಲೆಯ ಹೆಣ್ಣು ಮಕ್ಕಳ ಜೀವನಕ್ಕೆ ಆಧಾರವಾದ ಒಂದು ಬ್ಯಾಂಕ್ ಅನ್ನು ಮುಗಿಸಲಿಕ್ಕೆ ಹೊರಟಿರುವ ಈ ವ್ಯಕ್ತಿಗಳಿಂದ ಜಿಲ್ಲೆಯ ಉದ್ಧಾರ ಆಗಲಿಕ್ಕೆ ಸಾಧ್ಯವೇ? ಯಾವಾಗ ಮಾನ್ಯ ಹೈಕೋರ್ಟ್ ಬ್ಯಾಂಕಿಗೆ ಚುನಾವಣೆ ನಡೆಸಲೇಬೇಕೆಂದು ಕಟಪ್ಪಣೆಯನ್ನು ಕೊಟ್ಟು ಚುನಾವಣಾ ದಿನಾಂಕವನ್ನು ನಿಗದಿ ಮಾಡಿದ ನಂತರ ಚುನಾವಣೆಯಲ್ಲಿ ಕಾನೂನು ರೀತಿಯ ಗೋವಿಂದಗೌಡರನ್ನು ಚುನಾವಣೆ ಎದುರಿಸುವ ಶಕ್ತಿ ಇಲ್ಲದ ಇವರುಗಳು ಲೋಕಾಯುಕ್ತ ಎನ್ನುವ ಒಂದು ವಾಮ ಮಾರ್ಗವನ್ನು ಹಿಡಿದಿರುವುದು ಎಷ್ಟು ಸಮಂಜಸ?.
ಇನ್ನೊAದು ವಿಷಯ ಗೋವಿಂದಗೌಡರು ಜನತೆಯ ಮುಂದೆ ತಂದಿರುವುದು ಇನ್ನೊಬ್ಬರ ತಾಯಿ ಅಥವಾ ಹೆಣ್ಣು ಮಕ್ಕಳನ್ನು ಲಘುವಾಗಿ ಮಾತನಾಡುವ ವಿಷಯ. ಇದು ನಿಜವಾಗಲೂ ಒಬ್ಬ ವ್ಯಕ್ತಿಯನ್ನು ತಮ್ಮ ಜನಪ್ರತಿನಿಧಿ ಎಂದು ಚುನಾಯಿಸಿರುವ ಪ್ರತಿಯೊಬ್ಬರು ತಲೆತಗ್ಗಿಸುವಂತ ವಿಷಯ. ಮಾನ್ಯ ರಮೇಶ್ ಕುಮಾರ್ ಅವರಿಗೆ ಸಂಬAಧಿಸಿದAತೆ ನಾನು ಈಗಾಗಲೇ ಕೆಲವೊಂದು ಬಾರಿ ಸಾರ್ವಜನಿಕವಾಗಿ ಈ ವಿಷಯದಲ್ಲಿ ಛೀಮಾರಿ ಆಗಿರುವುದನ್ನು ಎಲ್ಲರೂ ಗಮನಿಸಬಹುದು. ಈಗ ತನ್ನ ತಾಯಿಯ ಬಗ್ಗೆ ಗೌರವ ಇರುವ ಪ್ರತಿಯೊಬ್ಬ ಸ್ವಾಭಿಮಾನಿ ವ್ಯಕ್ತಿಯು ಇಂತಹ ವಿಷಯಗಳನ್ನು ಪಕ್ಷಾತೀತವಾಗಿ ಜಾತ್ಯಾತೀತವಾಗಿ ತೀವ್ರವಾಗಿ ಖಂಡಿಸಲೇಬೇಕು.
ಕಡೆದಾಗಿ ನಾನು ಜಿಲ್ಲೆಯ ಜನತೆಯ ಮುಂದೆ ಹೇಳಲೇಬೇಕಾದ ಪ್ರಮುಖವಾದ ವಿಷಯ ಎಂದರೆ ಶ್ರೀನಿವಾಸಪುರ ಕ್ಷೇತ್ರದ ಜನ ಈ ಒಂದು ವ್ಯಕ್ತಿಯನ್ನ ಏನೆಲ್ಲಾ ತ್ಯಾಗಗಳನ್ನು ಮಾಡಿ ರಾಜ್ಯಮಟ್ಟದ ನಾಯಕರನ್ನಾಗಿ ಬೆಳೆಸಿದ್ದು ಬಯಲು ಸೀಮೆಯ ಭಾಗವಾದ ಈ ಜಿಲ್ಲೆಯ ಜನತೆಯ ಬದುಕನ್ನು ಸುಧಾರಿಸುವಲ್ಲಿ ಇವರು ಯಶಸ್ವಿಯಾಗುತ್ತಾರೆ ಎಂದು. ಆದರೆ ಎಲ್ಲಾ ರಂಗಗಳಲ್ಲಿ ಈ ನಮ್ಮ ನಾಯಕರು ವಿಫಲಗೊಂಡಿದ್ದು ಮಾತ್ರವಲ್ಲದೆ ತನ್ನನ್ನು ಬಿಟ್ಟು ಜಿಲ್ಲೆ ಮತ್ತು ಶ್ರೀನಿವಾಸಪುರ ಕ್ಷೇತ್ರದಲ್ಲಿ ಯಾರೊಬ್ಬರೂ ನಾಯಕರಾಗಿ ಬೆಳೆಯ ಕೂಡದು ಎನ್ನುವುದನ್ನು ಬಹಳಷ್ಟು ವ್ಯವಸ್ಥಿತವಾಗಿ ನೋಡಿಕೊಂಡೇ ಬಂದಿದ್ದಾರೆ ಮತ್ತು ಬಹುಮಟ್ಟಿಗೆ ಯಶಸ್ವಿಯು ಸಹ ಆಗಿದ್ದಾರೆ.
ಗೋವಿಂದ ಗೌಡರು ಮಾಧ್ಯಮದೊಂದಿಗೆ ಮಾತನಾಡುವಾಗ ಎತ್ತಿರುವ ವಿಷಯಗಳ ಬಗ್ಗೆ ಜನತೆಯ ಮುಂದೆ ನಮ್ಮ ನಾಯಕರು ಸ್ಪಷ್ಟನೆಯನ್ನು ಕೊಟ್ಟು ತಾನು ಜನರ ನಾಯಕ ಎನ್ನುವುದನ್ನು ಸ್ಪಷ್ಟಪಡಿಸಬೇಕು ಇಲ್ಲದಿದ್ದರೆ ರಾಜಕೀಯವಾಗಿ ಸಾರ್ವಜನಿಕ ಬದುಕನಿಂದ ಗತ್ಯಂತರವಿಲ್ಲದೆ ನಿವೃತ್ತಿ ಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್