ಕೋಲಾರ,ಮೇ.೨೯ (ಹಿ.ಸ) ಆಂಕರ್ : ಕಲೆ ಮತ್ತು ಸಂಸ್ಕೃತಿ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವಲ್ಲಿ ಇಂತಹ ಕನ್ನಡ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯವನ್ನು ನಮ್ಮ ಜಿಲ್ಲೆಯವರೇ ಆದ ಬ್ಯಾಡಬಲೆ ಕೆ. ಮುರಳಿ ರವರು ಕಲೆಯಲ್ಲೆ ತಮ್ಮನ್ನು ತಾವು ತೊಡಗಿಸಿಕೊಂಡು ಕಲೆಯ ರಸದೌತಣವನ್ನು ನೀಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಪ್ರೋತ್ಸಾಹ ಸದಾ ನೀಡುತ್ತೇವೆಂದರು ಸಮಾಜಸೇವಕ ಸಿ.ಎಂ.ಆರ್. ಶ್ರೀನಾಥ್ ಭರವಸೆ ನೀಡಿದರು.
ಬ್ಯಾಡಬಲೆಯ ಜನಪ್ರಿಯ ಶ್ರೀ ವಿಜಯಕೃಷ್ಣ ಕಲಾ ಸಂಘದಿ0ದ ಕೋಲಾರ ನಗರದ ಟಿ. ಚನ್ನಯ್ಯ ರಂಗಮAದಿರದಲ್ಲಿ ನನ್ನ ಗಂಡ ಬಲು ಬಂಡ ನಾಟಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ.ಸಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ. ಅಂತಹವರಲ್ಲಿ ನಮ್ಮ ಬ್ಯಾಡಬಲೆ ಕೆ.ಮುರಳಿ ಒಬ್ಬರು. ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ಇವರ ಕನ್ನಡ ಕಲಾ ಸೇವೆ ನಿರಂತರವಾಗಿ ಸಾಗಲೆಂದು ಆಶಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ.ರಾ.ರ.ಸಾ. ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಎನ್. ಶ್ರೀನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ. ಮುನಿರಾಜು, ಹುತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೋಟೆ ನಾರಾಯಣಸ್ವಾಮಿ, ಸಂಗಮೇಶ್, ಬಿ.ಎಸ್. ರಮೇಶ್ ಬಾಬು, ಟೊಮೋಟೊ ಮಂಡಿ ಮಾಲೀಕರಾದ ಬೈಚೇಗೌಡ್ರು, ಅಮರೇಶ್, ಚೌಡಪ್ಪ, ಕಲಾವಿದ ಮತ್ತಿಕುಂಟೆ ಕೃಷ್ಣ, ರಾಜಾರಾವ್, ಟೈಗರ್ ವೆಂಕಟೇಶ್ ಉಪಸ್ಥಿತರಿದ್ದರು.
ಚಲನಚಿತ್ರ ನಟ ನಟಿಯರಾದ ಡಿಂಗ್ರಿ ನಾಗರಾಜ್, ರೇಖದಾಸ್, ಮೂಗು ಸುರೇಶ್, ಮಂಡ್ಯ ಜಯರಾಂ, ಬ್ಯಾಡಬಲೆ ಕೆ.ಮುರಳಿ, ರಘುಪತಿ, ಮಹೇಶ್ವರಿ, ಮೈಸೂರು ಮಂಜುಳಾ, ರೇಖಾ ಮುಂತಾದವರು ನಾಟಕ ಪ್ರದರ್ಶಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್