ಕೃಷಿಯಲ್ಲಿ ಸಂಯುಕ್ತ ಗೊಬ್ಬರ ಬಳಸಲು ರೈತರಿಗೆ ಮನವಿ
ಕೊಪ್ಪಳ, 29 ಮೇ (ಹಿ.ಸ.) : ಆ್ಯಂಕರ್ : ಈ ವರ್ಷ ಅವಧಿಗೆ ಮುನ್ನವೇ ಮಳೆ ಪ್ರಾರಂಭವಾಗಿದ್ದು, ಮುಂಗಾರು ಹಂಗಾಮು ಉತ್ತಮವಾಗಿ ಪ್ರಾರಂಭವಾಗಿದೆ. ಇಲ್ಲಿಯವರೆಗೆ ವಾಡಿಕೆ ಮಳೆ ಪ್ರಮಾಣ 75 ಮಿ.ಮೀ. ಆಗಿದ್ದು, ವಾಸ್ತವಿಕ ಮಳೆ 166 ಮಿ.ಮೀ. ಆಗಿದೆ. ಇದು ಸಾಮಾನ್ಯಕ್ಕಿಂತ ಶೇ.120 ಹೆಚ್ಚಾಗಿದೆ. ಮುಂಗಾರು ಹಂಗಾಮ
ಕೃಷಿಯಲ್ಲಿ ಸಂಯುಕ್ತ ಗೊಬ್ಬರ ಬಳಸಲು ರೈತರಿಗೆ ಮನವಿ


ಕೊಪ್ಪಳ, 29 ಮೇ (ಹಿ.ಸ.) :

ಆ್ಯಂಕರ್ : ಈ ವರ್ಷ ಅವಧಿಗೆ ಮುನ್ನವೇ ಮಳೆ ಪ್ರಾರಂಭವಾಗಿದ್ದು, ಮುಂಗಾರು ಹಂಗಾಮು ಉತ್ತಮವಾಗಿ ಪ್ರಾರಂಭವಾಗಿದೆ. ಇಲ್ಲಿಯವರೆಗೆ ವಾಡಿಕೆ ಮಳೆ ಪ್ರಮಾಣ 75 ಮಿ.ಮೀ. ಆಗಿದ್ದು, ವಾಸ್ತವಿಕ ಮಳೆ 166 ಮಿ.ಮೀ. ಆಗಿದೆ. ಇದು ಸಾಮಾನ್ಯಕ್ಕಿಂತ ಶೇ.120 ಹೆಚ್ಚಾಗಿದೆ. ಮುಂಗಾರು ಹಂಗಾಮು ಆಶಾದಾಯಕವಾಗಿರುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರೈತರು ಈಗಾಗಲೇ ಭೂಮಿ ಹದಗೊಳಿಸುವ ಕಾರ್ಯ ಹಾಗೂ ಕೃಷಿ ಬೆಳೆಗಳ ಬಿತ್ತನೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕೃಷಿ ಇಲಾಖೆಯು ಈ ವರ್ಷ 3.19 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಜಿಲ್ಲೆಯ ಮುಖ್ಯ ಬೆಳೆಗಳಾಗಿ ಮೆಕ್ಕೆಜೋಳ, ಭತ್ತ, ಸಜ್ಜೆ, ತೊಗರಿ, ಹೆಸರು, ಸೂರ್ಯಕಾಂತಿ, ಶೇಂಗಾ, ಹತ್ತಿ ಮತ್ತು ಸಿರಿಧಾನ್ಯ ಬೆಳೆಗಳಿಗೆ ಅಗತ್ಯವಿರುವ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಈಗಾಗಲೇ ವಿತರಿಸಲಾಗುತ್ತಿದೆ.

ಇದುವರೆಗೆ 9,703 ಕ್ವಿಂಟಲ್ ಬೀಜವನ್ನು ದಾಸ್ತಾನಿಕರಿಸಲಾಗಿದ್ದು, ರೈತರು ಬೀಜ ಪಡೆಯುವಾಗ ಕಡ್ಡಾಯವಾಗಿ ತಮ್ಮ ಫ್ರೂಟ್ ಐಡಿ ಸಂಖ್ಯೆ ನೀಡಬೇಕಾಗಿರುತ್ತದೆ. ಬೀಜ ವಿತರಣೆಯು ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ನಡೆಯುತ್ತಿದ್ದು, ಪ್ರತಿ ಲಾಟ್‍ನ ಬೀಜ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟ ಖಾತರಿಪಡಿಸಿ ವಿತರಿಸಲಾಗುತ್ತಿದೆ. ಖಾಸಗಿ ಅಂಗಡಿಗಳಲ್ಲಿ ಬೀಜ ಖರೀದಿ ಮಾಡಿದ ರೈತರು ಕಡ್ಡಾಯವಾಗಿ ಖರೀದಿ ಬಿಲ್ ಪಡೆಯಬೇಕು.

ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಹಂಗಾಮಿಗೆ 1.07 ಲಕ್ಷ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಈವರೆಗೆ 0.47 ಲಕ್ಷ ಟನ್ ದಾಸ್ತಾನಿಕರಣ ಹಾಗೂ 0.14 ಲಕ್ಷ ಟನ್ ವಿತರಣೆ ಮಾಡಲಾಗಿದೆ. ಉಳಿದ 0.33 ಲಕ್ಷ ಟನ್ ರಸಗೊಬ್ಬರ ದಾಸ್ತಾನಿನಲ್ಲಿದೆ. ಪ್ರಸ್ತುತ ಯೂರಿಯಾ – 12,692 ಟನ್, ಡಿ.ಎ.ಪಿ – 1,619 ಟನ್, ಎಂ.ಒ.ಪಿ – 2,099 ಟನ್, ಕಾಂಪ್ಲೆಕ್ಸ್ – 15,970 ಟನ್, ಎಸ್.ಎಸ್.ಪಿ – 708 ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ.

ಬಿತ್ತನೆ ಸಮಯದಲ್ಲಿ ರೈತರು ಹೆಚ್ಚಾಗಿ ಡಿ.ಎ.ಪಿ ರಸಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಇದರ ಬದಲಾಗಿ, ನ್ಯಾನೋ ಡಿ.ಎ.ಪಿ, 20:20:0:16, 10:26:26, 19:19:19 ಇತ್ಯಾದಿ ಸಂಯುಕ್ತ ರಸಗೊಬ್ಬರಗಳನ್ನು ಬಳಸಬಹುದಾಗಿದೆ. ರಸಗೊಬ್ಬರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಕೃಷಿ ಇಲಾಖೆ ಅಧಿಕಾರಿಗಳು ಎಲ್ಲಾ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳಿಗೆ ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮೂಲಕ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande