ಕೋಲಾರ, ಮೇ ೨೮ (ಹಿ.ಸ) :
ಆ್ಯಂಕರ್ : ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ವಿಕಲಚೇತನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾಧನ್ ವೇತನವನ್ನು ನೀಡಲಾಗುವುದು. ಮೇ ೧೯ ರಿಂದ ಜುಲೈ ೧೮ರವರೆಗೆ ಕಾಲವಕಾಶ ನೀಡಲಾಗಿದೆ.
ಕರ್ನಾಟಕ ಮಾತ್ರವಲ್ಲಿ ೨೦ ರಾಜ್ಯಗಳಲ್ಲಿ ಸುಮಾರು ೫೦ ಸಾವಿರ ವಿದ್ಯಾರ್ಥಿಗಳಿಗೂ ಹೆಚ್ಚು ಮಂದಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ ೧೦ ಸಾವಿರ ದಿಂದ ೭೫ ಸಾವಿರ ರೂವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಮುಂದಿನ ವರ್ಷ ೧ ಲಕ್ಷದವರೆಗೆ ಉನ್ನತ ಶಿಕ್ಷಣದ ವಿದ್ಯಾರ್ಥಿ ವೇತನ ವಿತರಿಸುವ ಗುರು ಹೊಂದಿದೆ ಎಂದು ಸರೋಜಿನಿ ದಾಮೋದರನ್ ಫೌಂಡೇಶನ್ ಕಾರ್ಯಕ್ರಮದ ಸಂಯೋಜಕ ಜೆಸ್ವೀನ್ ತಿಳಿಸಿದರು.
ಕೋಲಾರದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಥಮ ಪಿ.ಯು.ಸಿ. ತರಗತಿಯ ಕರ್ನಾಟಕದ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಿ.ಜಿ.ವರೆಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸ ಬಹುದಾಗಿದೆ ಆಯ್ದ ವಿದ್ಯಾರ್ಥಿಗಳಿಗೆ ಅವರ ವೈಯಕ್ತಿಕ ಮತ್ತು ವ್ಯಕ್ತಿತ್ವ ವಿಕಸನ, ಕೌಶಲ್ಯತರಭೇತಿ ಮಾರ್ಗದರ್ಶನ ಮತ್ತು ವೃತ್ತಿ ಪರ ತರಭೇತಿ ನೀಡುವುದರ ಮೂಲಕ ಬೆಂಬಲವನ್ನು ನೀಡಲಾಗುವುದು, ಕಳೆದ ೨೦೧೪ ರಿಂದ ಪ್ರಾರಂಭವಾಗಿರುವ ವಿದ್ಯಾರ್ಥಿ ವೇತನವನ್ನು ಪಡೆದ ೧೫೦೦ ಕ್ಕೂ ಅಧಿಕ ಮಂದಿ ತಮ್ಮ ಆಯ್ಕೆಯ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಲು ಅನುವು ಮಾಡಿ ಕೊಟ್ಟಿದೆ ಎಂದರು.
ಆಯ್ಕೆ ವಿಧಾನವು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆಯನ್ನು ಬರೆಯ ಬೇಕಾಗುವುದು. ನಂತರ ಇಂಟರ್ವ್ಯೂ ಇರುತ್ತದೆ. ಆ ನಂತರದಲ್ಲಿ ಹೌಸ್ಶಿಪ್ ನಂತರದಲ್ಲಿ ಆಯ್ಕೆಯಾದವರಿಗೆ ಸ್ಕಾಲರ್ ಶಿಪ್ ನೀಡಲಾಗುವುದು. ಇದರ ಜೂತೆಯಲ್ಲಿ ಅರ್ಜಿದಾರರ ಕುಟುಂಬದ ಅದಾಯವಯ ೨ ಲಕ್ಷ ರೂ ಒಳಗೆ ಇರ ಬೇಕು, ಶೇ ೯೦ ರಷ್ಟು ಅಂಕಗಳನ್ನು ಪಡೆದಿರ ಬೇಕು, ಶೇ ೭೫ರಷ್ಟು ವಿಕಲಚೇತರರಾಗಿರ ಬೇಕು, ಅಂಕಪಟ್ಟಿಯನ್ನು , ಪಾಸ್ ಪೋರ್ಟ್ ಪೋಟೋಗಳನ್ನು ಸಲ್ಲಿಸ ಬೇಕು ಇದರೊಂದಿಗೆ ಶೇ ೭೫ರಷ್ಟು ವಿಕಲಚೇತನ ಹೊಂದಿರುವ ಧೃಢೀಕರಣದ ಪತ್ರದೊಂದಿಗೆ ಅರ್ಜಿಯನ್ನು ಸಲ್ಲಿಸ ಬೇಕಾಗುವುದು ಎಂದು ವಿವರಿಸಿದರು.
ಪಿಯುಸಿ ವಿದ್ಯಾರ್ಥಿಗೆ ವರ್ಷಕ್ಕೆ ೧೦ ಸಾವಿರ ರೂ ವಿತರಿಸಲಾಗುವುದು. ನಂತರ ಪದವಿ ಮುಂದುವರೆಸಲು ವರ್ಷಕ್ಕೆ ೧೫ ಸಾವಿರ ರೂ ಗಳಿಂದ ೭೫ ಸಾವಿರ ರೂಗಳ ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಯಾವೂದೇ ಜಾತಿ, ಧರ್ಮಗಳನ್ನು ನಾವು ಪರಿಗಣಿಸುವುದಿಲ್ಲ. ಬಡತನ ಕುಟುಂಬವಾಗಿರ ಬೇಕೆಂಬುವುದು ಹಾಗೂ ವಿಕಲಚೇತನ ಪ್ರತಿಭಾವಂತ ವಿದ್ಯಾರ್ಥಿಯಾಗಿರ ಬೇಕೆಂಬುವುದು ಮುಖ್ಯ ಆರ್ಹತೆಗಳಾಗಿದೆ. ಶಿಕ್ಷಣ ಮುಗಿದ ಮೇಲೆ ಉದ್ಯೋಗದ ತರಬೇತಿ ಶಿಬಿರಗಳನ್ನು ಮಾಡುವ ಮೂಲಕ ಸಾಮಾನ್ಯ ಜ್ಞಾನದ ಅರಿವು ಮೂಡಿಸಲಾಗುವುದು ಎಂದು ಹೇಳಿದರು,
ನಮ್ಮ ಈ ಸೇವಾ ನೆಟ್ ವರ್ಕನಲ್ಲಿ ಅನೇಕ ಸಂಸ್ಥೆಗಳ ಸಹಕಾರ ನೀಡುತ್ತಿದೆ. ಕಳೆದ ೨೦೧೪ರಲ್ಲಿ ಪ್ರಾರಂಭಿಸಿದ್ದು ೧೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ರಾಷ್ಟçದಲ್ಲಿಯೇ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಸುಮಾರು ೬೦೦ ಕ್ಕೂ ಹೆಡಚ್ಚು ಮಂದಿಗೆ ಉದ್ಯೋಗದ ಸೌಲಭ್ಯ ಲಭಿಸಿದೆ. ವಿದ್ಯಾರ್ಥಿ ವೇತನವು ನೇರವಾಗಿ ಫಲಾನುಭವಿ ವಿದ್ಯಾರ್ಥಿಯ ಖಾತೆಗೆ ಜಮೆಯಾಗಲಿದೆ. ಬಹುತೇಕ ಗ್ರಾಮೀಣಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ ೮೦ರಷ್ಟು ಹಾಗೂ ನಗರ ಪ್ರದೇಶದ ಶೇ ೨೦ ರಷ್ಟು ಅದ್ಯತೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸ್ವಷ್ಟನೆ ನೀಡಿದ ಅವರು ವಿವರಗಳಿಗೆ +೯೧೮೦೬೮೩೩೩೫೦೦ ರಲ್ಲಿ ಸಂಪರ್ಕಿಸ ಬಹುದಾಗಿದೆ ಎಂದರು
ಇದೊಂದು ಎಸ್.ಡಿ.ಎಫ್. ಲಾಭ ರಹಿತ ಸಂಸ್ಥೆಯಾಗಿದ್ದು ಕಳೆದ ೧೯೯೯ರಲ್ಲಿ ಎಸ್.ಡಿ. ಶಿಬುಲಾಲ್ ಇವರು ಇನ್ಘೋಸಿಸ್ ಮಾಜಿ ಸಿ.ಇ.ಓ. ಅಗಿದ್ದು ಈ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದಾರೆ. ಕುಮಾರಿ ಶಿಬುಲಾಲ್ ಅವರು ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಯೋಜಕಿ ಪವಿತ್ರಾ, ಕಲ್ಪನಾ ಹಾಗೂ ಸುಪ್ರಿಮ್ ಉಪಸ್ಥಿತರಿದ್ದು ಮಾತನಾಡಿದರು.
ಚಿತ್ರ : ಸರೋಜಿನಿ ದಾಮೋದರನ್ ಫೌಂಡೇಶನ್ ನಿಂದ ನೀಡಲಾಗುವ ವಿದ್ಯಾರ್ಥಿ ವೇತನದ ಬಗ್ಗೆ ಫೌಂಡೇಷನ್ನ ಸಂಯೋಜಕ ಜೆಸ್ವೀನ್ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್