ರಾಯಚೂರು, 28 ಮೇ (ಹಿ.ಸ.) :
ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡಗಳಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ನಡಿ 3 ವರ್ಷಗಳ ಅವಧಿಗೆ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಡೇ-ನಲ್ಮ್ ಯೋಜನೆಯಡಿ ನೋಂದಾಯಿತ ಎಸ್ಹೆಚ್ಜಿ ಅರ್ಹ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಎಸ್ಹೆಚ್ಜಿ ಅರ್ಹ ಸದಸ್ಯರು ಸ್ವ-ಸಹಾಯ ಗುಂಪಿನ ಸದಸ್ಯರು ಆಗಿರಬೇಕು. (ಗುಂಪಿನ ಪಾಸ್ ಬುಕ್,) ಆಧಾರ ಕಾರ್ಡ್, ಗುರುತಿನ ಚೀಟಿ, ರೇಷನ್ ಕಾರ್ಡ್, 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು.
ಡೇ-ನಲ್ಮ್ ಎಂ.ಐ.ಎಸ್ ಎಸ್ಹೆಚ್ಜಿ ನೋಂದಾಣಿಯಾದವರು ಅರ್ಜಿ ನಮೂನೆಯನ್ನು ಕಚೇರಿಯ ಆರೋಗ್ಯ ಶಾಖೆ ಅಥವಾ ಡೇ-ನಲ್ಮ್ ಶಾಖೆಯಿಂದ ಪಡೆದುಕೊಂಡು ಜೂನ್ 29ರ ಸಂಜೆ 5 ಗಂಟೆಯೊಳಗಾಗಿ ಮಹಾನಗರ ಪಾಲಿಕೆ ಜೋನಲ್ ಕಚೇರಿಗೆ ಸಲ್ಲಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್