ಅಯೋಧ್ಯ, 28 ಮೇ (ಹಿ.ಸ.) :
ಆ್ಯಂಕರ್ : ರಾಮ ಜನ್ಮಭೂಮಿ ದೇವಾಲಯ ಸಂಕೀರ್ಣದ ಎಂಟು ಹೊಸ ದೇವಾಲಯಗಳಲ್ಲಿ ಜೂನ್ 3ರಿಂದ 5ರವರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದೆ ಎಂದು ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಮುನ್ನ ಜೂನ್ 2ರಂದು ಸರಯು ನದಿಯಿಂದ ಜಲ ಕಲಶ ಯಾತ್ರೆ ನಡೆಯಲಿದೆ.
ಮೂರು ದಿನಗಳ ಈ ಸಮಾರಂಭದಲ್ಲಿ, ದೇವಾಲಯಗಳು ಪರಸ್ಪರ ಕ್ಯಾಮೆರಾ ಹಾಗೂ ಪರದೆಯ ಮೂಲಕ ಸಂಪರ್ಕಿಸಲಾಗುವುದು. ಪೂಜೆಗಳು ಪ್ರತಿದಿನ ಬೆಳಿಗ್ಗೆ 6.30ಕ್ಕೆ ಆರಂಭವಾಗಲಿದ್ದು, ಜೂನ್ 5ರಂದು 11.25ಕ್ಕೆ ಸಮೂಹ ಪ್ರಾಣ ಪ್ರತಿಷ್ಠೆ ನಡೆಯಲಿದೆ. ವಿಶೇಷವೆಂದರೆ, ಎಲ್ಲ ದೇವಾಲಯಗಳಲ್ಲಿ ಪ್ರಾಣ ಪ್ರತಿಷ್ಠೆ ಏಕಕಾಲದಲ್ಲಿ ನಡೆಯಲಿದೆ.
ಶಿವ, ಗಣೇಶ, ಹನುಮಾನ್, ಸೂರ್ಯ, ಭಗವತಿ, ಅನ್ನಪೂರ್ಣೆ ಮತ್ತು ಶೇಷಾವತಾರ ಸೇರಿದಂತೆ ವಿವಿಧ ದೇವರುಗಳ ವಿಗ್ರಹಗಳು ಸ್ಥಾಪನೆಯಾಗಲಿವೆ. ಮೊದಲ ಮಹಡಿಯಲ್ಲಿ ಶ್ರೀ ರಾಮ ದರ್ಬಾರ್ ಕೂಡ ಸ್ಥಾಪಿಸಲಾಗುವುದು. ಭಕ್ತರಿಗೆ ಪ್ರವೇಶವನ್ನು ಮಿತಗೊಳಿಸಲಾಗುತ್ತಿದ್ದು, ಪ್ರತಿ ಗಂಟೆಗೆ 50 ಜನರಿಗೆ ಮಾತ್ರ ಅನುಮತಿ ಪತ್ರ ನೀಡಲಾಗಲಿದೆ ಎಂದು ಚಂಪತ್ ರಾಯ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa