ಮಲಬಾರ್ ಗ್ರೂಪ್ ಕಂಪನಿಯಿAದ ಸಿಎಸ್‌ಆರ್ ಯೋಜನೆಯಲ್ಲಿ ೧೫೦ ಕೋಟಿ ರೂಪಾಯಿಗಳನ್ನು ಮಂಜೂರು
ಮಲಬಾರ್ ಗ್ರೂಪ್ ಕಂಪನಿಯಿAದ ಸಿಎಸ್‌ಆರ್ ಯೋಜನೆಯಲ್ಲಿ ೧೫೦ ಕೋಟಿ ರೂಪಾಯಿಗಳನ್ನು ಮಂಜೂರು
ಮಲಬಾರ್ ಗೋಲ್ಡ್ ಕಂಪನಿಯಿAದ ವಿಶ್ವ ಹಸಿವು ಮುಕ್ತ ದಿನ ಆಚರಣೆ ಕೋಲಾರದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು ಚಾಲನೆ ನೀಡಿದರು.


ಕೋಲಾರ, ಮೇ ೨೮ (ಹಿ.ಸ) :

ಆ್ಯಂಕರ್ : ಜಿಲ್ಲೆಯ ಕೈಗಾರಿಕೆಗಳಲ್ಲಿ ದುಡಿಯುವ ಮಹಿಳೆಯರ ಹಿತದೃಷ್ಟಿಯಿಂದ ಮಲಬಾರ್ ಗೋಲ್ಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಿಳಾ ಹಾಸ್ಟೆಲ್ ಅನ್ನು ಸಿ.ಎಸ್.ಆರ್ ಅಡಿಯಲ್ಲಿ ಮಾಡಿದರೆ ಉತ್ತಮ ಕಾರ್ಯಕ್ಕೆ ಕೈ ಹಾಕಿದಂತೆ ಆಗುತ್ತದೆ ಎಂದು ಸಂಸದ ಎಂ ಮಲ್ಲೇಶ್ ಬಾಬು ಸಲಹೆ ನೀಡಿದರು.

ನಗರದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಸಿವು ಮುಕ್ತ ದಿನ ಆಚರಣೆ ಕಾರ್ಯಕ್ರಮದಲ್ಲಿ ನಿರ್ಗತಿಕರಿಗೆ ಉಚಿತ ಊಟ ನೀಡುವ ಆಟೋಗೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ಪ್ರತಿಯೊಂದು ತಾ ಲೂಕುಗಳಿಂದ ಕೈಗಾರಿಕೆಗಳಿಗೆ ದುಡಿಮೆಗಾಗಿ ಪ್ರತಿನಿತ್ಯ ಬರುವ ಮಹಿಳೆಯರಿಗೆ ಪ್ರಯಾಣ ಮಾಡುವುದು ಕಷ್ಟವಾಗಿದೆ. ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣವಾದರೆ ಮಹಿಳಾ ಸಬಲೀಕರಣಕ್ಕೆ ಮಲಬಾರ್ ಗೋಲ್ಡ್ ಡೈಮಂಡ್ ಸಂಸ್ಥೆ ಹೆಚ್ಚು ಒತ್ತು ನೀಡಿದಂತೆ ಆಗುತ್ತದೆ ಎಂದರು.

ಪುರುಷ ಸಮಾಜದಲ್ಲಿ ಮಹಿಳೆಯರು ಸಹ ಕೈಗಾರಿಕಾ ವಲಯದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ. ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೂ ಸಹ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು ನುಡಿದರು.

ಮಲಬಾರ್ ಗೋಲ್ಡ್ ಸಂಸ್ಥೆ ಸಾಮಾಜಿಕ ಕಾರ್ಯಗಳ ಜೊತೆಗೆ ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳಿಗೆ ಹೆಚ್ಚು ಹೊತ್ತು ನೀಡಬೇಕು ಎಂದು ಸಲಹೆ ನೀಡಿದರು. ಗ್ರಾಮಗಳಲ್ಲಿ ಸೋಲಾರ್ ಬೀದಿ ದ್ವೀಪ, ಗ್ರಾಮಗಳ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಆದ್ಯತೆಯಾಗಬೇಕು ಎಂದರು.

ಜೆಡಿಎಸ್ ಮುಖಂಡ ಹಾಗೂ ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ಮಲಬಾರ್ ಗೋಲ್ಡ್ ಸಂಸ್ಥೆ ದೇಶ ವಿದೇಶಗಳಲ್ಲಿ ಉತ್ತಮ ಸಂಸ್ಥೆಯಾಗಿದ್ದು ಲಾಭದ ಹಣದಲ್ಲಿ ಸಮಾಜದ ಅಭಿವೃದ್ಧಿಗೆ ನಾನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಮಾದರಿ ಸಂಸ್ಥೆಯಾಗಿದೆ

ಕೋಲಾರ ಜಿಲ್ಲೆಯಲ್ಲಿ ನಿರ್ಗತಿಕರಿಗೆ ಊಟವನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯ ಶ್ಲಾಘನೀಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಮಲಬಾರ್ ಗೋಲ್ಡ್ ಸಂಸ್ಥೆ ದೇಶದ ೨೦ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಚಾರವಾಗಿದೆ. ಅದರೆ ಕೆಲ ಸಂಸ್ಥೆಗಳು ಕೋಟ್ಯಾಂತರ ರೂಗಳ ಲಾಭದಲ್ಲಿ ಇದ್ದರೂ ಸಹ ಬಂದ ಲಾಭದ ಹಣದಲ್ಲಿ ಹೊರದೇಶಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ, ಮಲಬಾರ್ ಸಂಸ್ಥೆ ಸಿಇಓ ಅವರು ಬಡವರ ಪರವಾಗಿ ನಿಲ್ಲುವ ಮೂಲಕ ಸಂಸ್ಥೆಯು ಖ್ಯಾತಿಯನ್ನು ಪಡೆದಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ. ಮುನಿರಾಜು ಮಾತನಾಡಿ ಹಸಿವು ಮುಕ್ತ ಜಗತ್ತು ಯೋಜನೆಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ೨ ಶೂನ್ಯ ಹಸಿವಿಗೆ ಹೊಂದಿಕೊAಡಿದ್ದು, ಮಲಬಾರ್ ಗ್ರೂಪ್‌ನ ಒಂದು ಹೊಸ ಉಪಕ್ರಮವಾಗಿದ್ದು, ಅಗತ್ಯವಿರುವವರಿಗೆ ದೈನಂದಿನ ಪೌಷ್ಟಿಕ ಆಹಾರವನ್ನು ಒದಗಿಸಲು ಮತ್ತು ಹಸಿವಿನ ವಿರುದ್ಧದ ಜಾಗತಿಕ ಹೋರಾಟಕ್ಕೆ ಕೊಡುಗೆ ನೀಡಲು ಮೀಸಲಾಗಿರುವುದು ಉತ್ತಮ ಬೆಳವಣಿಗೆ ಎಂದರು.

ಮಲಬಾರ್ ಗ್ರೂಪ್ ಭಾರತದ ೧೬೭ ಸ್ಥಳಗಳಲ್ಲಿ ಪ್ರತಿದಿನ ಸುಮಾರು ೬೦ ಸಾವಿರ ಊಟದ ಪೊಟ್ಟಣಗಳನ್ನು ಪೂರೈಸಿದೆ. ಒಟ್ಟು ೨.೫೪ ಕೋಟಿ ಊಟಗಳನ್ನು ನೀಡಿದೆ. ಕಳೆದ ವರ್ಷ ಈ ಯೋಜನೆಯನ್ನು ಅಂತರರಾಷ್ಟ್ರೀಯವಾಗಿ ಜಾಂಬಿಯಾಕ್ಕೆ ವಿಸ್ತರಿಸಲಾಯಿತು. ಮಲಬಾರ್ ಗ್ರೂಪ್‌ನ ಜವಾಬ್ದಾರಿಯುತ ವ್ಯವಹಾರ ಮಾದರಿಯನ್ನು ರಚಿಸುವ ನಮ್ಮ ಧ್ಯೇಯದೊಂದಿಗೆ ಹೊಂದಿಕೆಯಾಗುತ್ತದೆ. ಈ ಕಾರ್ಯಕ್ರಮದ ಸಮಯದಲ್ಲಿ ೧೮ ಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್‌ನೊಂದಿಗೆ ಮಹತ್ವಾಕಾಂಕ್ಷೆಯ ಕರ್ನಾಟಕ ವಾರ್ಷಿಕ ಸಿಎಸ್‌ಆರ್ ಯೋಜನೆಯನ್ನು ಹೆಮ್ಮೆಯಿಂದ ಅನಾವರಣಗೊಳಿಸಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ನಗರಸಭೆ ಸದಸ್ಯ ಮಂಜುನಾಥ್, ಕೋಚಿಮಲ್ ಮಾಜಿ ನಿರ್ದೇಶಕ ಡಿ. ವಿ. ಹರೀಶ್, ಬಿಜೆಪಿ ಮುಖಂಡ ಸ. ಮಾ. ಬಾಬು, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯ ಅಲ್ತಾಫ್, ಸಂಸ್ಥೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಚಿತ್ರ : ಮಲಬಾರ್ ಗೋಲ್ಡ್ ಕಂಪನಿಯಿAದ ವಿಶ್ವ ಹಸಿವು ಮುಕ್ತ ದಿನ ಆಚರಣೆ ಕೋಲಾರದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande