ವಿದ್ಯಾರ್ಥಿಗಳಿಂದ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸ್ಥಿತಿಗತಿ ಕುರಿತು ಕ್ಷೇತ್ರಾಧ್ಯಯನ
ಗದಗ, 28 ಮೇ (ಹಿ.ಸ.) ಆ್ಯಂಕರ್:- ಗದಗನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕಲಾ ವಿಭಾಗದ ಅಂತಿಮ ವರ್ಷದ ಅರ್ಥಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಂದ ಬೀದಿಬದಿ ವ್ಯಾಪಾರಸ್ಥರ ಆರ್ಥಿಕ ಸ್ಥಿತಿಗತಿ ಕುರಿತು ಕ್ಷೇತ್ರಾಧ್ಯಯನ ಹಮ್ಮಿಕೋಳ್ಳಲಾಗಿತ್ತು.
ಪೋಟೋ


ಗದಗ, 28 ಮೇ (ಹಿ.ಸ.)

ಆ್ಯಂಕರ್:- ಗದಗನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕಲಾ ವಿಭಾಗದ ಅಂತಿಮ ವರ್ಷದ ಅರ್ಥಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಂದ ಬೀದಿಬದಿ ವ್ಯಾಪಾರಸ್ಥರ ಆರ್ಥಿಕ ಸ್ಥಿತಿಗತಿ ಕುರಿತು ಕ್ಷೇತ್ರಾಧ್ಯಯನ ಹಮ್ಮಿಕೋಳ್ಳಲಾಗಿತ್ತು.

ವ್ಯಾಪಾರಸ್ಥರ ಆರ್ಥಿಕ ಸ್ಥಿತಿಗತಿ ಕುರಿತು ಕ್ಷೇತ್ರಾಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸಲು ಗದುಗಿನ ಭೂಮರಡ್ಡಿ ವೃತ್ತದ ಹತ್ತಿರವಿರುವ ಬೀದಿಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ವಿವಿಧ ಹಳ್ಳಿಗಳ ಹಾಗೂ ಸ್ಥಳಿಯ ಗದುಗಿನ ವಿವಿಧ ವ್ಯಾಪಾರಸ್ಥರು ಇಂದಿನ ಅಧುನಿಕ ಯುಗದಲ್ಲಿ ಬೀದಿಬದಿ ವ್ಯಾಪಾದೊಂದಿಗಿನ ಆರ್ಥಿಕ ಬದುಕಿನ ಸಂಬಂದಗಳನ್ನು ಕುರಿತು ಮಾಹಿತಿ ನೀಡಿದರು ನಂತರ ನಮ್ಮ ವಿದ್ಯಾರ್ಥಿಗಳು ವಿಷಯಕ್ಕೆ ಸಂಬಂದಿಸಿದಂತೆ ತಾವೇ ತಯಾರಿಸಿದ ಪ್ರಶ್ನಾವಳಿಗಳ ಮೂಲಕ ವ್ಯಾಪಾರಸ್ಥರೊಂದಿಗೆ ಚರ್ಚೆ ಮಾಡುತ್ತಾ ವ್ಯಾಪಾರದ ಗುಣಮಟ್ಟ, ಸರಕು, ಆದಾಯ, ಅವರ ಸಮಸ್ಯೆಗಳು ಹಾಗೂ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಕುರಿತು ಮಾಹಿತಿ ಸಂಗ್ರಹಿಸಿದರು.

ಈ ಕ್ಷೆತ್ರಾಧ್ಯಯನ ಕಾರ್ಯದಲ್ಲಿ ಪ್ರೊ ವನಜಾಕ್ಷಿ ಸೂಡಿ ಹಾಗೂ ಪ್ರೊ ಶ್ವೇತಾ ಸಿ ಅವರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande