ಭೋಪಾಲ್, 28 ಮೇ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದ ಗುಣಾ ಮತ್ತು ಬೆಂಗಳೂರಿನ ನಡುವೆ ನೇರ ರೈಲು ಸೇವೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಈ ಹೊಸ ರೈಲು ಕಾರ್ಯಾರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಬುಧವಾರ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಂಧಿಯಾ, ತಮ್ಮ ವಿಶೇಷ ಮನವಿಗೆ ಸ್ಪಂದಿಸಿ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಈ ಸೇವೆಗೆ ಅನುಮೋದನೆ ನೀಡಿದರೆಂದು ತಿಳಿಸಿದ್ದಾರೆ. ರೈಲು ಸಂಖ್ಯೆ 11085/11086 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಗುಣಾ, ಅಶೋಕನಗರ ಮತ್ತು ಶಿವಪುರಿ ಮೂಲಕ ಗ್ವಾಲಿಯರ್ಗೆ ಸಂಚರಿಸಲಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಗುಣಾ ಮೂಲದ ಯುವಕರ ಬೇಡಿಕೆಯನ್ನು ಈ ರೈಲು ಪೂರೈಸಲಿದ್ದು, ಕಳೆದ ಕೆಲ ವರ್ಷಗಳಿಂದ ಇರುವ ಸಂಪರ್ಕದ ಕೊರತೆಯನ್ನು ನೀಗಿಸಲಿದೆ. ಈ ಹೊಸ ನೇರ ರೈಲು ಸಂಪರ್ಕವು ಸಮಯ ಮತ್ತು ಪ್ರಯಾಣ ವೆಚ್ಚವನ್ನು ಉಳಿತಾಯ ಮಾಡಲಿದೆ. ಜೊತೆಗೆ, ಗುಣಾ ಪ್ರದೇಶದ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa