ಅನಧಿಕೃತ ಬಡಾವಣೆ ತಡೆಗೆ ಕ್ರಮವಹಿಸಿ : ಸಂತೋಷ ಲಾಡ್
ಧಾರವಾಡ, 27 ಮೇ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ನಡೆದ ಆಸ್ತಿ ಸಮೀಕ್ಷೆಯಲ್ಲಿ ಹೆಸ್ಕಾಂ ಹಾಗೂ ಎಚ್‌ಡಿಎಂಸಿ ಅಂಕಿ ಅಂಶಗಳಲ್ಲಿ ಹೊಂದಾಣಿಕೆ ಇಲ್ಲದೆ ಆದಾಯ ನಷ್ಟವಾಗುತ್ತಿದೆ. ಪ್ರತಿ ಆಸ್ತಿಗೆ ತೆರಿಗೆ ವಿಧಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂ
Meeting


ಧಾರವಾಡ, 27 ಮೇ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ನಡೆದ ಆಸ್ತಿ ಸಮೀಕ್ಷೆಯಲ್ಲಿ ಹೆಸ್ಕಾಂ ಹಾಗೂ ಎಚ್‌ಡಿಎಂಸಿ ಅಂಕಿ ಅಂಶಗಳಲ್ಲಿ ಹೊಂದಾಣಿಕೆ ಇಲ್ಲದೆ ಆದಾಯ ನಷ್ಟವಾಗುತ್ತಿದೆ. ಪ್ರತಿ ಆಸ್ತಿಗೆ ತೆರಿಗೆ ವಿಧಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಅನಧಿಕೃತ ಸೈಟ್‌ಗಳ ಸಂಖ್ಯೆ 45 ಸಾವಿರದಷ್ಟಿದ್ದು, ಈ ಮೂಲಕ ಮೂಲಸೌಕರ್ಯಗಳಲ್ಲಿ ತೊಂದರೆ ಉಂಟಾಗಿದೆ. ಲೀಜ್ ಆಸ್ತಿಗಳ ನಿಯಮಬಾಹಿರ ಮಾರಾಟ, ಅನಧಿಕೃತ ಪಿಜಿಗಳು, ಹಾಗೂ ಕೃಷಿ ಭೂಮಿಯ ಅಕ್ರಮ ರೂಪಾಂತರ ತೀವ್ರ ಸಮಸ್ಯೆಯಾಗಿದ್ದು, ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಅವಳಿ ನಗರದಲ್ಲಿ ಕುಡಿಯುವ ನೀರಿನ ಬಾಕಿ 149 ಕೋಟಿ ರೂಪಾಯಿಗೆ ಏರಿದೆ. ಈ ಬಾಕಿ ವಸೂಲಿಗೆ ಒನ್ ಟೈಮ್ ಸೆಟ್ಲಮೆಂಟ್ ಯೋಜನೆಗೆ ಪ್ರಸ್ತಾವನೆ ನೀಡಲು ಸಲಹೆ ನೀಡಿದರು. ಪಿಜಿ ಮಾಲೀಕರಿಗೆ ನೋಟಿಸ್ ನೀಡಿ, ಮಾಹಿತಿ ಸಂಗ್ರಹಿಸಿ, ನಿಯಮ ಉಲ್ಲಂಘನೆಯಾದಲ್ಲಿ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande