ಗಾಂಧಿನಗರ, 27 ಮೇ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನವು ಭಾರತ ವಿರುದ್ಧ ಭಯೋತ್ಪಾದನೆ ಮುಖಾಂತರ ಯುದ್ಧವನ್ನೇ ನಡೆಸುತ್ತಿದೆ. ಇದನ್ನು ಪರೋಕ್ಷ ಯುದ್ಧವೆಂದು ಕರೆಯಲಾಗದು ಇದು ಯೋಜಿತ ಯುದ್ಧವಾಗಿದ್ದು, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ನಗರಾಭಿವೃದ್ಧಿ ವರ್ಷ 2025ಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ಅವರು,
1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸಿಂಧೂ ಜಲ ಒಪ್ಪಂದವನ್ನು ಉಲ್ಲೇಖಿಸುತ್ತಾ, ಈ ಒಪ್ಪಂದವು ಭಾರತಕ್ಕೆ ಅನೇಕ ರೀತಿಯಲ್ಲಿ ನಷ್ಟ ತರುವಂತಹ ಅಂಶಗಳನ್ನು ಹೊಂದಿದೆ ಎಂದು ತಿಳಿಸಿದರು. ಈ ಒಪ್ಪಂದದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ನದಿಗಳ ಅಣೆಕಟ್ಟುಗಳನ್ನು ಸ್ವಚ್ಛಗೊಳಿಸಲು ಕೂಡ ಅವಕಾಶವಿಲ್ಲ ಎಂದು ನಿರ್ಧರಿಸಲಾಗಿತ್ತು. 60 ವರ್ಷಗಳ ಕಾಲ ಅವುಗಳ ದ್ವಾರಗಳನ್ನು ತೆರೆಯಲಾಗಿಲ್ಲ. ನಾವು ಇತ್ತೀಚೆಗೆ ಸ್ವಲ್ಪ ತೆರೆದೆವು, ಸ್ವಲ್ಪ ಸ್ವಚ್ಛಗೊಳಿಸಿದಮಾತ್ರಕ್ಕೆ ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಯಿತು. ಇನ್ನೂ ನಾವು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿಲ್ಲ, ಆದರೆ ಅವರು ಈಗಾಗಲೇ ಭಯಭೀತರಾಗಿದ್ದಾರೆ, ಎಂದು ಹೇಳಿದರು.
ಪಾಕಿಸ್ತಾನ ಈ ಬೆಳವಣಿಗೆಯ ಬಗ್ಗೆ ತೀವ್ರ ಆತಂಕದಲ್ಲಿದೆ ಎಂಬುದಿರುವ ಪ್ರಧಾನಿ ಭಾರತ ಯಾರ ಮೇಲೂ ಆಕ್ರಮಣ ಮಾಡುವ ಆಸೆ ಹೊಂದಿಲ್ಲ, ಆದರೆ ತನ್ನ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಹಿಂದೆ ಸರಿಯುವುದಿಲ್ಲ, ಎಂದು ಮೋದಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa