ನವದೆಹಲಿ, 27 ಮೇ (ಹಿ.ಸ.) :
ಆ್ಯಂಕರ್ : ಭಾರತದ ರಕ್ಷಣಾ ಸ್ವಾವಲಂಬನೆ ಹಾಗೂ ದೇಶೀಯ ಏರೋಸ್ಪೇಸ್ ಉದ್ಯಮದ ಬಲವರ್ಧನೆಗೆ ಹೊಸ ಬಾಗಿಲು ತೆರೆದಿರುವಂತೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸುಧಾರಿತ ಮಧ್ಯಮ ಯುದ್ಧ ವಿಮಾನ ಯೋಜನೆಗೆ ಅಧಿಕೃತ ಅನುಮೋದನೆ ನೀಡಿದ್ದಾರೆ.
ಈ ಕುರಿತು ರಕ್ಷಣಾ ಇಲಾಖೆ ಮಾಹಿತಿ ನೀಡಿದ್ದು, ಯೋಜನೆಗೆ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಪ್ರಧಾನ ಆರ್ಕಿಟೆಕ್ಟ್ ಆಗಿ ನಿಂತಿದ್ದು, ದೇಶೀಯ ಕೈಗಾರಿಕಾ ಭಾಗಿತ್ವದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಿದೆ. ಸುಧಾರಿತ ಮಧ್ಯಮ ಯುದ್ಧ ವಿಮಾನವನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸುವ ಮಹತ್ವದ ಗುರಿ ಹೊಂದಿದ್ದು, ಇದು ನೂತನ ತಂತ್ರಜ್ಞಾನ, ಸುಧಾರಿತ ಸ್ಟೆಲ್ತ್ ಸಾಮರ್ಥ್ಯಗಳು ಹಾಗೂ ಸೂಪರ್ಸೋನಿಕ್ ವೇಗದ ಸಾಮರ್ಥ್ಯಗಳೊಂದಿಗೆ ಹೆಮ್ಮೆಯ ಯುದ್ಧ ವಿಮಾನವಾಗಲಿದೆ.
ಪ್ರಾರಂಭಿಕ ಹಂತದಲ್ಲಿ ಮೂಲ ಮಾದರಿಯ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಸ್ಥಳೀಯ ತಂತ್ರಜ್ಞಾನ, ಪರಿಣತಿ ಮತ್ತು ತಯಾರಿಕಾ ಶಕ್ತಿ ಬಳಸುವುದರ ಮೂಲಕ ಬಾಹ್ಯಾಶ್ರಯದ ಅವಲಂಬನೆ ಕಡಿಮೆಯಾಗಲಿದೆ. ಈ ಯೋಜನೆಯು ಭಾರತವನ್ನು ಆತ್ಮನಿರ್ಭರ ಬಾಹ್ಯಾಕಾಶ ವಲಯದತ್ತ ಮುನ್ನಡೆಯುವಂತೆ ಮಾಡಲಿದ್ದು, ಸ್ವದೇಶಿ ವಿಮಾನ ನಿರ್ಮಾಣದ ಕ್ಷೇತ್ರದಲ್ಲಿ ಭಾರತಕ್ಕೆ ಗರಿಷ್ಠ ತಂತ್ರಜ್ಞಾನ ನಿರ್ವಹಣಾ ಸಾಮರ್ಥ್ಯ ಒದಗಿಸಲಿದೆ.
ರಕ್ಷಣಾ ಕ್ಷೇತ್ರದಲ್ಲಿ ಈ ಯೋಜನೆಯ ಪ್ರಭಾವವು ಹೆಚ್ಚಿನ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ರಾಷ್ಟ್ರೀಯ ಸುರಕ್ಷತೆಗೆ ನೇರ ಕೊಡುಗೆ ನೀಡಲಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa