ಕೋಲಾರ, ೨೭ ಮೇ (ಹಿ.ಸ) :
ಆ್ಯಂಕರ್ : ಕೋಲಾರ ಚಿಕ್ಕಬಳ್ಳಾಪುರ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಮತ್ತೊಂದು ರಾಜಕೀಯ ಜಿದ್ದಾಜಿದ್ದಿಗೆ ನಿದರ್ಶನವಾಗಿದೆ. ಕಳೆದ ಒಂದು ವರ್ಷದಿಂದ ಮುಂದೂಡಲಾಗಿದ್ದ ಚುನಾವಣೆ ಈಗ ರಾಜಕೀಯ ಸಂಘರ್ಷದ ವೇದಿಕೆಯಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಒಡಕಿನ ಮನೆಯಾಗಿದೆ. ಕಳೆದ ಎರಡು ಅವಧಿಗೆ ಅಧ್ಯಕರಾಗಿದ್ದ ಬ್ಯಾಲಹಳ್ಳಿ ಗೋವಿಂದಗೌಡರನ್ನು ಬ್ಯಾಂಕಿನ ಆಡಳಿತ ಮಂಡಳಿಯಿ0ದ ದೂರವಿಡುವುದೇ ಕಾಂಗ್ರೆಸ್ನವರ ಮೊದಲ ಅಜೆಂಡಾ ಆಗಿದೆ. ಇದರ ಭಾಗವಾಗಿ ಕಾಂಗ್ರೆಸ್ನ ಒಂದು ಗುಂಪು ಭಾರತೀಯ ಜನತಾ ಪಕದೊಂದಿಗೆ ಒಳಒಪ್ಪ ಮಾಡಿಕೊಂಡಿದೆ. ಇದರಿಂದಾಗಿಯೇ ಕೋಲಾರ ಶಾಸಕ ಕೊತ್ತೂರ್ ಮಂಜುನಾಥ್ ಟಿ.ಎ.ಪಿ.ಸಿ ಎಂ.ಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆ.ಜಿ.ಎಫ್ ಟಿ.ಎ.ಪಿ.ಸಿಎಂಎಸ್ನಿ0ದ ಡಿಲಿಗೇಟ್ ಪಡೆದಿದ್ದ ಮಾಜಿ ಶಾಸಕ ಸಂಪ0ಗಿಯರ ಮಗ ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಒಂದು ವೇಳೆ ನವೀನ್ ಕುಮಾರ್ ಸ್ಪರ್ಧೆಯಲ್ಲಿ ಮುಂದುವರಿದಿದ್ದರೆ ಕೊತ್ತೂರು ಮಂಜುನಾಥ್ ತೀವ್ರವಾದ ಸ್ದರ್ಧೆ ಎದುರಿಸಬೇಕಾಗಿತ್ತು.
ಶತೃವಿನ ಶತೃ ಮಿತ್ರ ಎಂಬ ಮಾತಿದೆ.ಕೆ.ಜಿ.ಎಫ್ ವಿಧಾನ ಸಭಾ ಕೇತ್ರದಲ್ಲಿ ಶಾಸಕಿ ರೂಪ ಎದುರು ಎರಡು ಭಾರಿ ಸಂಪ0ಗಿ ಮಗಳು ಅಶ್ವಿನಿ ಎರಡು ಭಾರಿ ಸೋಲು ಅನಭವಿಸಿದ್ದರು. ರೂಪಕಲ ಕೆ.ಜಿ.ಎಫ್ ಗೆ ಪ್ರವೇಶ ಮಾಡಿದನಂತರ ಸಂಪ0ಗಿಯವರ ಜನಬಲ ಕುಸಿದಿದೆ. ಕೆ.ಜಿ. ವಿಧಾನ ಸಭಾ ಕೇತ್ರದಲ್ಲಿ ಬ್ಯಾಲಹಳ್ಲಿ ಗೋವಿಂದ ಗೌಡರು ಆಡಳಿತ ಮತ್ತು ಪಕದಲ್ಲಿ ಹಿಡಿತ ಹೊಂದಿದ್ದಾರೆ. ಹಲವಾರು ಪ್ರಮಖ ಆಡಳಿತ್ಮಾಕ ನಿರ್ದಾರಗಳನ್ನು ಗೋವಿಂದಗೌಡರು ತೆಗೆದುಕೊಳ್ಳತ್ತಾರೆ.
ಕೆ.ಜಿ.ಎಫ್ನ ಎಸ್ಪಿ ಕಛೇರಿಯನ್ನು ಮುಚ್ಚಲು ಮುಂದಾದಾಗ ಶಾಸಕಿ ರೂಪ ಅವರು ಹೋರಾಟ ನಡೆಸಿ ಉಳಿಸಿದರು. ಕೆಜಿಎಫ್ನ ಬೆಮೆಲ್ ಕಾರ್ಖಾನೆಯ ವಶದಲ್ಲಿದ್ದ ಹೆಚ್ಚುವರಿ ಭೂಮಿಯನ್ನು ವಾಪಸ್ ಪಡೆದು ಕೈಗಾರಿಕೆಗಳನ್ನು ಆರಂಭಿಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇರುವುದು ಶಾಸಕಿ ರೂಪ ಅವರಿಗೆ ವರದಾನವಾಗಿದೆ. ಇದರಿಂದಾಗಿ ಮಾಜಿ ಶಾಸಕ ಸಂಪ0ಗಿಯವರಿಗೆ ರಾಜಕೀಯವಾಗಿ ಹಿನ್ನಡೆ ಆಗಿದೆ. ಲೋಕಸಭಾ ಚುನಾವಣೆಯನಂತರ ಕೋಲಾರ ಕಾಂಗ್ರೆಸ್ ಒಡಕಿನ ಮನೆಯಾಗಿದೆ.
ವಿಧಾನ ಸಭಾ ಚುನವಣೆಯನಂತರ ಕಾಂಗ್ರೆಸ್ ಭಿನ್ನಮತೀಯ ಚಟುವಟಿಗಳು ತೀವ್ರಗೊಂಡಿವೆ. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಶಾಸಕಿ ರೂಪಕಲ ಶಶಿಧರ್ ಮತ್ತು ಎಲ್ ಸಿ ಅನಿಲ್ ಕುಮಾರ್ ಕೋಲಾರ ಶಾಸಕ ಕೊತ್ತೂರ್ ಮಂಜುನಾಥ್ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ತೀವ್ರತರವಾದ ಭಿನ್ನಾಬಿಪ್ರಯಗಳು ಮೂಡಿವೆ.
ಕೋಲಾರ ಡಿ.ಸಿ.ಸಿ.ಬ್ಯಾ0ಕ್ ನಿರ್ದೇಶಕರ ಚುನಾವಣೆಯಲ್ಲಿ ಭಿನ್ನಾಭಿಪ್ರಾಯ ಸ್ಪೋಟಗೊಂಡಿದೆ. ಬ್ಯಾಲಹಳ್ಲಿ ಗೋವಿಂದಗೌಡರು ಎರಡು ಭಾರಿ ಬ್ಯಾಂಕಿನ ಅಧ್ಯಕ್ಖರಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಕಾಂಗ್ರೆಸ್ ಶಾಸಕರಿಗೆ ರಾಜಕೀಯವಾಗಿ ಶಕ್ತಿ ತುಂಬಿದ್ದರು. ಗೋವಿಂದಗೌಡರು ಮತ್ತು ಅನಿಲ್ ಕುಮಾರ್ ನಡುವೆ ರಾಜಕೀಯವಾಗಿ ಮತ್ತು ವೈಯುಕ್ತವಾಗಿ ಒಳ್ಳೆ ಸಂಬ0ಧವಿತ್ತು. ಗೋವಿಂದಗೌಡರು ವಿಧಾನ ಪರಿಷತ್ ಚುನಾವಣೆಯ ಆಕಾಂಕ್ಖಿಯಾಗಿದ್ದರು.
ಆದರೆ ವಿಧಾನ ಪರಿಷತ್ ಚುನಾವ£ಣೆಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಕಾರಣ ಗೋವಿಂದಗೌಡರು ಅನಿಲ್ ಕುಮಾರ್ರವರಿಂದ ಅಂತರ ಕಾಯ್ದುಕೊಂಡರು. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸಿನಿ0ದ ಸ್ಪರ್ಧಿಸಲು ಗೋವಿಂದಗೌಡರು ಸಿದ್ದತೆ ನಡೆಸಿದ್ದರು. ಆದರೆ ಅನಿಲ್ ಕುಮಾರ್ ಮತ್ತು ರಮೇಶ್ ಕುಮರ್ ಷಡಂತ್ರ ನಡೆಸಿ ಕೊತ್ತೂರ್ ಮಂಜುನಾಥ್ರವರಿಗೆ ಕಾಂಗ್ರೆಸ್ ಟಕೆಟ್ ಕೊಡಿಸಿದರು. ಇದರಿಂದಾಗಿ ಗೋವಿಂದಗೌಡರು ತೀವ್ರ ನಿರಾಷೆ ಪಡಬೇಕಾಯಿತು. ಇದರಿಂದಾಗಿ ಅನಿಲ್ ಕುಮಾರ್ ವiತ್ತು ಗೋವಿಂದಗೌಡರ ನಡುವೆ ಭಿನ್ನಾಭಿಪ್ರಾಯಗಳು ತೀವ್ರಗೊಂಡವು.
ಎನೇ ಆಗಲಿ ಗೋವಿಂದಗೌಡರು ಮತ್ತೆ ಡಿ,ಸಿ,ಬ್ಯಾಂಕ್ ಮೆಟ್ಟಲು ಹತ್ತಬಾರದು ಎಂಬುದು ಅನಿಲ್ ಕುಮರ್ ರಮೇಶ್ ಕುಮಾರ್ ಹಾಗು ಕೊತ್ತೂರ್ ಮಂಜುನಾಥ್ ಷಡ್ಯಂತ್ರವಾಗಿದೆ. ಡಿ.ಸಿ ಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕಾಂಗ್ರೆಸ್ ಎದುರಾಳಿಯಾಗಿದೆ. ಗೋವಿಂದಗೌಡರು ಕಾಂಗ್ರೆಸ್ಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಮತ್ತೊಂದು ಕಡೆ ಶಾಸಕ ಎಸ್. ಎನ್. ನಾರಾಯಣಸ್ವಾಮಿ ಮತ್ತು ಶಾಸಕಿ ರೂಪ ಶಶಿಧರ್ ಸಹ ಅನಿಲ್ಕುಮರ್ ಗುಂಪಿನಿ0ದ ಅಂತರ ಕಾಯ್ದಕೊಂಡಿದ್ದಾರೆ. ಆಂತರಿಕವಾಗಿ ಪೆಟ್ಟು ಎದುರಿಸಲು ಅನಿಲ್ ಕುಮಾರ್ ರಮೇಶ್ ಕುಮಾರ್ ಹಾಗು ಕೊತ್ತುರ್ ಮಂಜುನಾಥ್ ಬಿ.ಜಿ.ಪಿ ,ಯೊಂದಿಗೆ ಕೈಜೋಡಿಸಿದ್ದಾರೆ. ರಾಜ್ಯ ಮತ್ತು ದೆಹಲಿಯಲ್ಲಿ ಬಿ.ಜೆ.ಪಿ ಯ ವಿರುಧ್ಧ ಮುಗಿಬೀಳುವ ಕಾಂಗ್ರೆಸ್ ಬಿ.ಜೆ.ಪಯೊಂದಿಗೆ ಕೈಜೋಡಿಸಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಒಳ ಒಪ್ಪಂದದಿ0ದಾಗಿ ಟಿಎಪಿಸಿಎಂಎಸ್ ಕ್ಷೇತ್ರದಿಂದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಅವಿರೋಧ ಆಯ್ಕೆಗೆ ಮಾಜಿ ಶಾಸಕ ವೈ. ಸಂಪ0ಗಿ, ಮಾಜಿ ಸಂಸದ ಮುನಿಸ್ವಾಮಿ ಪರೋಕ್ಷವಾಗಿ ಸಮ್ಮತಿ ಸೂಚಿಸಿದ್ದಾರೆ.
ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪನವರನ್ನು ಸೋಲಿಸಲು ಬಹಿರಂಗವಾಗಿ ಕಾಂಗ್ರೆಸ್ ಮುಖಂಡರು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ರವರಿಗೆ ಬೆಂಬಲ ಸೂಚಿಸಿದ್ದರು. ಹಿಂದಿನ ಋಣಭಾರ ತೀರಿಸಲು ಬಿಜೆಪಿರವರು ಕಾಂಗ್ರೆಸ್ನೊAದಿಗೆ ಕೈ ಜೋಡಿಸಿದ್ದಾರೆ.
ಸಂಪ0ಗಿ ಪುತ್ರ ನವೀನ್ ಕುಮಾರ್ ಚುನಾವಣಾ ಕಣದಿಂದ ಹಿಂದೆ ಸರಿಯಲು ದೊಡ್ಡ ಮೊತ್ತದ ಈಡಗಂಟು ನೀಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಹಣದ ಜೊತೆಗೆ ಒಂದು ಫಾರ್ಜುನರ್ ಕಾರ್ ಉಡುಗೊರೆ ಸರ್ಕಾರದಲ್ಲಿ ಅವರಿಗೆ ಅಗತ್ಯವಿರುವ ಕೆಲಸಗಳನ್ನು ಮಾಡಿಸಲು ಆಶ್ವಾಸನೆ ನೀಡಲಾಗಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ. ಇದ್ದ ಅವಕಾಶವನ್ನು ಬಿಜೆಪಿ ಮಾರಾಟ ಮಾಡಿ ಕಾಂಗ್ರೆಸ್ ಮುಂದೆ ಮಂಡಿ ಊರಿದೆ.
ಸಹಕಾರಿ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಪ್ರಮುಖ ಹಣಕಾಸು ಸಂಸ್ಥೆಯಾಗಿದೆ. ಈ ಸಂಸ್ಥೆಯ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಯಾವುದೇ ಸಿದ್ಧತೆ ನಡೆಸಿಲ್ಲ. ಕನಿಷ್ಠ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದಲ್ಲ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಂಗ್ರೆಸ್ನ ಅನಿಲ್ ಕುಮರ್, ಕೊತ್ತೂರು ಮಂಜುನಾಥ್, ರಮೇಶ್ ಕುಮಾರ್ ಸೂಚಿಸಿದ ಅಭ್ಯರ್ಥಿಗಳಿಗೆ ಬಿಜೆಪಿ ಬೆಂಬಲ ಸೂಚಿಸಿದೆ.
ಚಿತ್ರ : ಅನಿಲ್ ಕುಮಾರ್, ಕೊತ್ತೂರು ಮಂಜುನಾಥ್, ರಮೇಶ್ ಕುಮಾರ್, ಮುನಿಸ್ವಾಮಿ, ಸಂಪ0ಗಿ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್