ನವದೆಹಲಿ, 26 ಮೇ (ಹಿ.ಸ.) :
ಆ್ಯಂಕರ್ : ಒಳ್ಳೆಯ ದಿನಗಳ ಭರವಸೆ ನೀಡಿದ್ದ ಮೋದಿ ಸರ್ಕಾರದ ಆಡಳಿತ ದೇಶದ ಜನತೆಗೆ ಭಯಾನಕ ಕನಸಾಗಿ ಪರಿಣಮಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಖರ್ಗೆ ಅವರು ಸೋಮವಾರ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.
ಯುವಕರಿಂದ ರೈತರ ತನಕ, ಎಲ್ಲರಿಗೂ ಮೋಸ:
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಭರವಸೆಗಳು ಎಷ್ಟೊಂದು ಸುಳ್ಳಾಗಿದ್ದವೆಯೆಂಬುದನ್ನು ಒಂದೊಂದು ವಿಭಾಗದ ಮೂಲಕ ಖರ್ಗೆ ವಿವರಿಸಿದ್ದಾರೆ.
ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿದ್ದರೂ, ವಾಸ್ತವದಲ್ಲಿ ಕೋಟಿಗಟ್ಟಲೆ ಉದ್ಯೋಗಗಳು ಮಾಯವಾಗಿವೆ.
ರೈತರ ಆದಾಯ ದ್ವಿಗುಣಗೊಳ್ಳುವ ಬದಲು, ಅವರು ತಮ್ಮ ಹಕ್ಕುಗಳಿಗಾಗಿ ರಸ್ತೆಗೆ ಇಳಿದಾಗ ರಬ್ಬರ್ ಗುಂಡುಗಳನ್ನು ಎದುರಿಸಬೇಕಾಯಿತು.
ಮಹಿಳೆಯರ ಭದ್ರತೆ ಹದಗೆಟ್ಟಿದ್ದು, ಮೀಸಲಾತಿಗೆ ಷರತ್ತುಗಳನ್ನು ನಿಗದಿಪಡಿಸುವ ಮೂಲಕ ಅನ್ಯಾಯ ಮಾಡಲಾಗಿದೆ.
ದುರ್ಬಲ ವರ್ಗಗಳಾದ ಎಸ್ಸಿ/ಎಸ್ಟಿ/ಒಬಿಸಿ ಹಾಗೂ ಅಲ್ಪಸಂಖ್ಯಾತರು ಭೀಕರ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ; ರಾಜಕೀಯ ಹಾಗೂ ಆಡಳಿತಾತ್ಮಕ ಹಕ್ಕುಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಕಡಿಮೆಯಾಗಿದೆ.
ಆರ್ಥಿಕತೆ ಕುಸಿತಗೊಳ್ಳುತ್ತಿದ್ದರೆ, ಹಣದುಬ್ಬರ, ನಿರುದ್ಯೋಗ, ಬಳಕೆಯ ಸ್ಥಗಿತ, 'ಮೇಕ್ ಇನ್ ಇಂಡಿಯಾ' ವಿಫಲತೆ, ಹಾಗೂ ಅಸಮಾನತೆ ಪ್ರಮಾಣವು ಉಚ್ಛಶ್ರೇಣಿಗೆ ಏರಿದೆ.
ವಿದೇಶಾಂಗ ನೀತಿ ವಿಚಾರದಲ್ಲಿ ಭಾರತ ವಿಶ್ವಗುರು ಆಗಲಿದೆ ಎಂಬ ಮಾತುಗಳು ಕೇವಲ ಘೋಷಣೆಯಲ್ಲಿ ಉಳಿದು, ಹಲವು ರಾಷ್ಟ್ರಗಳೊಂದಿಗೆ ಸಂಬಂಧಗಳು ಹಾಳಾಗಿವೆ.
ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳ ಮೇಲೆ ಆರೆಸ್ಸೆಸ್ ಪ್ರಭಾವ ಹೆಚ್ಚಾಗಿದ್ದು, ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ದುರುಪಯೋಗಗೊಳ್ಳುತ್ತಿವೆ. ಸಂಸ್ಥೆಗಳ ಸ್ವಾಯತ್ತತೆ ನಾಶವಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
140 ಕೋಟಿ ಜನರ ಪ್ರತಿಯೊಂದು ವರ್ಗಕ್ಕೂ ತೊಂದರೆಗೀಡಾಗಿದೆ. ಇದು 11 ವರ್ಷಗಳ ಕಮಲದ ಆಡಳಿತದ ಯಥಾರ್ಥ ಚಿತ್ರ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa