ಕೊಪ್ಪಳ, 26 ಮೇ (ಹಿ.ಸ.) :
ಆ್ಯಂಕರ್ : ಕೊಪ್ಪಳ ತಾಲೂಕಿನ ಹಾಲಹಳ್ಳಿ ಗ್ರಾಮದ ಹಿರಿಯ ಮುಖಂಡ ಕೃಷಿಕ ಸಮಾಜದ ಮಾಜಿ ರಾಜ್ಯ ಪ್ರತಿನಿಧಿ,ಹಾಗೂ ರೈತ ಪರ ಹೋರಾಟಗಾರರು ಆದ ಶಂಕ್ರಪ್ಪ ಚವಡಿ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.
ಗಬ್ಬೂರು ಕೆರೆ ನಿರ್ಮಾಣ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸಿ ಯಶಸ್ವಿಯಾಗಿದ್ದ ಇವರು ಕೆರೆ ತುಂಬಿಸುವ ಯೋಜನೆಯಲ್ಲಿ ಗಬ್ಬೂರು ಕೆರೆ ತುಂಬಿಸುವ ಕನಸು ಹೊಂದಿದ್ದರು.
ಇವರ ನಿಧನಕ್ಕೆ ರೆಡ್ಡಿ ಸಮಾಜದ ಬಂಧುಗಳು ಹಾಗೂ ರೈತಾಪಿ ಜನರು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ