ಕೊಪ್ಪಳ, 26 ಮೇ (ಹಿ.ಸ.) :
ಆ್ಯಂಕರ್ : ಮೌಲಾನಾ ಅಬ್ದುಲ್ ಕಲಾಂ ಆಜಾದ್ ಎಜುಕೇಷನಲ್ ಮತ್ತು ವೆಲ್ಫೇರ್ ಟ್ರಸ್ಟ್, ಕೊಪ್ಪಳ ಹಾಗೂ ಹೈದೆರಾಬಾದ್ ನ ಮನು ಕೇಂದ್ರೀಯ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ಇಂದಿನ ಕಾರ್ಯಕ್ರಮದಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸೈಯದ್ ಫಾರ್ಹನ್ ನವಾಜ್ ವಿದ್ಯಾರ್ಥಿ ಹಾಗೂ ನಿವೃತ್ತಿಯಾಗುತ್ತಿರುವ ಶಿವಣ್ಣ ಸರ್ ನ್ನು ಅವರನ್ನು ಒಂದೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಶಿವಣ್ಣ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರು ಇದೇ ತಿಂಗಳು ಮೇ 31ನೇ ತಾರೀಕಿನಂದು ನಿವೃತ್ತಿಯಾಗುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಎಂಎಕೆ ಎಜುಕೇಶನಲ್ ಅಂಡ್ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷರಾದ ಪಾಶ ರೇಷ್ಮೆ, ಮನು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಕೋಆರ್ಡಿನೇಟರ್ ಡಾ.ಶಿವಬಸಪ್ಪ ಮಸ್ಕಿ , ಪರೀಕ್ಷೆಯ ಅಬ್ಸರ್ವರ್ ಲಿಯಾಕತ್, ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಶಫಿ ಸರ್ದಾರ್, ಹಿರಿಯ ಉಪನ್ಯಾಸಕರಾದ ಎಂ ಶಿವಣ್ಣ, ಮನು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಸ್ಥಾಪಕರಾದ ಶಬ್ಬೀರ್ ಅಹ್ಮದ್ ಮತ್ತು ಗೌಸ್ ಪಾಶ, ಕರಿಯಪ್ಪ ಹಾಗೂ ಅಧ್ಯಯನ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ