ಆಪರೇಷನ್ ಸಿಂಧೂರ್ ಭಾರತೀಯ ಸಂಸ್ಕೃತಿಯ ಪ್ರತೀಕ : ಪ್ರಧಾನಿ ಮೋದಿ
ದಾಹೋಡ್, 26 ಮೇ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನ ದಾಹೋಡ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ, ಆಪರೇಷನ್ ಸಿಂಧೂರ್ ಸೇನೆಯ ದಾಳಿ ಅಲ್ಲ, ಅದು ಭಾರತದ ಸಂಸ್ಕಾರ ಮತ್ತು ಭಾವನೆಗಳ ಪ್ರಬಲ ಪ್ರತಿಬಿಂಬ ಎಂದು ಹೇಳಿದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್
Pm


ದಾಹೋಡ್, 26 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನ ದಾಹೋಡ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ, ಆಪರೇಷನ್ ಸಿಂಧೂರ್ ಸೇನೆಯ ದಾಳಿ ಅಲ್ಲ, ಅದು ಭಾರತದ ಸಂಸ್ಕಾರ ಮತ್ತು ಭಾವನೆಗಳ ಪ್ರಬಲ ಪ್ರತಿಬಿಂಬ ಎಂದು ಹೇಳಿದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ತಂದೆಯೊಬ್ಬನನ್ನು ಮಕ್ಕಳ ಮುಂದೆ ಹತ್ಯೆ ಮಾಡಿದ್ದನ್ನು ಸ್ಮರಿಸಿ. “ಈ ದುರಂತದಿಂದ 140 ಕೋಟಿ ಭಾರತೀಯರ ರಕ್ತ ಕುದಿಯುತ್ತಿತ್ತು,ಹೀಗಾಗಿ ಸೈನಿಕರಿಗೆ ಮುಕ್ತವಾಗಿ ಕಾರ್ಯಚರಣೆ ನಡೆಸಲು ಅವಕಾಶ ನೀಡಿದ್ದೆವು,” ಎಂದು ಮೋದಿ ತಿಳಿಸಿದರು.

ಪ್ರಧಾನ ಮಂತ್ರಿ ತಮ್ಮ 2014ರ ಪ್ರಮಾಣ ವಚನ ದಿನದ ನೆನಪಿನಲ್ಲಿ ಮಾತನಾಡುತ್ತಾ, ಕಳೆದ 10 ವರ್ಷಗಳಲ್ಲಿ ದೇಶವು ಭಾರೀ ಬದಲಾವಣೆಯನ್ನು ಕಂಡಿದೆ, ಭಾರತೀಯರು ಈಗ ಅಭಿವೃದ್ಧಿ ಭಾರತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಸುಮಾರು ₹27,000 ಕೋಟಿ ಮೌಲ್ಯದ ರೈಲ್ವೆ, ರಸ್ತೆಗಳು, ನೀರು ಪೂರೈಕೆ ಮತ್ತು ನಗರ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ದಾಹೋಡ್‌ನಲ್ಲಿ ನಿರ್ಮಿತ ವಿದ್ಯುತ್ ಎಂಜಿನ್ ದೇಶಕ್ಕೆ ಸಮರ್ಪಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande