ಲತೇಹಾರ, 26 ಮೇ (ಹಿ.ಸ.) :
ಆ್ಯಂಕರ್ : ಜಾರ್ಖಂಡ್ನ ಲತೇಹಾರ್ ಜಿಲ್ಲೆಯ ಮಹುವಾದನ್ರ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ 5 ಲಕ್ಷ ರೂ. ಬಹುಮಾನ ಹೊಂದಿದ್ದ ನಕ್ಸಲೈಟ್ ಮನೀಶ್ ಯಾದವ್ ಹತ್ಯೆಯಾಗಿದ್ದಾರೆ. 10 ಲಕ್ಷ ರೂ. ಬಹುಮಾನ ಹೊಂದಿದ್ದ ಮತ್ತೊಬ್ಬ ನಕ್ಸಲೀಯ ಕುಂದನ್ ಖಾರ್ವಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ದೌನಾ ಮತ್ತು ಕರಮ್ಖಾಡ್ ಗ್ರಾಮಗಳ ನಡುವಿನ ಕಾಡಿನಲ್ಲಿ ಭಾನುವಾರ ರಾತ್ರಿ 2 ಗಂಟೆಗೆ ಆರಂಭವಾದ ಎನ್ಕೌಂಟರ್ ಇಂದು ಬೆಳಿಗ್ಗೆವರೆಗೆ ಮುಂದುವರಿದಿದ್ದು, ಈ ವೇಳೆ ನಕ್ಸಲರು ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿದಾಳಿ ನಡೆಸಿದರು. ಎನ್ಕೌಂಟರ್ನಲ್ಲಿ ಮನೀಶ್ ಯಾದವ್ ಮೃತಪಟ್ಟಿದ್ದು ಮತ್ತು ಎರಡು ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa