ಸಂಡೂರು, 26 ಮೇ (ಹಿ.ಸ.) :
ಆ್ಯಂಕರ್ : ಸಂಡೂರು ಸಮೀಪದ ಜೈಸಿಂಗಪುರ ಹೊರ ವಲಯದಲ್ಲಿ ಸೋಮವಾರ ಬೆಳಗ್ಗೆ ಟಿಪ್ಪರ್ ಮತ್ತು ಕಾರಿಗೆ ಡಿಕ್ಕಿ ಆದ ಕಾರಣ, ಸ್ಥಳದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಮೃತರು ಲಕ್ಷ್ಮೀಪುರ ನಿವಾಸಿಗಳಾದ ಆಶಾ (28), ಜಯಲಕ್ಷ್ಮಿ (21) ಮತ್ತು ಒಬ್ಬ ಬಾಲಕ ಮತ್ತು ಬಾಲಕಿ ಸ್ಥಳದಲ್ಲೇ ಇದ್ದಾರೆ. ಕಾರಿನ ಚಾಲಕನಿಗೆ ತೀವ್ರ ಗಾಯಗಳಾಗಿದ್ದರೆ, ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲ ನೀಡದೇ ಆತನೂ ಮೃತಪಟ್ಟಿದ್ದಾನೆ.
ಕಾರು ಸಂಡೂರು ಪಟ್ಟಣದಿಂದ ಹೊಸಪೇಟೆ ಕಡೆ ಹೊರಟಿದ್ದು. ಕಬ್ಬಿಣದ ಅದಿರು ತುಂಬಿಸಿಕೊಂಡ ಲಾರಿಯು ಹೊಸಪೇಟೆ ಕಡೆಯಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಎದುರುಗಡೆ ಬಂದ ಕಾರಣ ಈ ಘಟನೆ ಸಂಭವಿಸಿದೆ.
ಸ್ಥಳಕ್ಕೆ ಸಂಡೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ. ಮೃತರ ಮೇಲ್ನೋಟಕ್ಕೆ ಗರ್ಭಿಣಿ ಎಂದು ಹೇಳಲಾಗಿದೆ, ಮೃತರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್