ರಾಯಚೂರು ವಿವಿ ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗೆ ಚಿನ್ನದ ಪದಕ
ರಾಯಚೂರು ವಿವಿ ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗೆ ಚಿನ್ನದ ಪದಕ
ರಾಯಚೂರು ವಿವಿ ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗೆ ಚಿನ್ನದ ಪದಕ


ರಾಯಚೂರು ವಿವಿ ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗೆ ಚಿನ್ನದ ಪದಕ


ರಾಯಚೂರು ವಿವಿ ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗೆ ಚಿನ್ನದ ಪದಕ


ರಾಯಚೂರು, 26 ಮೇ (ಹಿ.ಸ.) :

ಆ್ಯಂಕರ್ : ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೇ.26ರಂದು ನಡೆದ 14ನೇ ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಕೊಪ್ಪಳ ಜಿಲ್ಲೆಯ ದೇವಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ವಿವಿಯ ಸ್ನಾತಕ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿ ಪುಟ್ಟರಾಜು ಪೊಲೀಸ್ ಪಾಟೀಲ ಅವರು ಹಾಗೂ ಭೀಮರಾಯನಗುಡಿಯ ಬಿಎಸ್‍ಸಿ ಕಾಲೇಜಿನ ಸಾಗರ್ ಅವರು ತಲಾ 6 ಚಿನ್ನದ ಪದಕ ಮತ್ತು ರಾಯಚೂರಿನ ಬಿಎಸ್‍ಸಿ ಕಾಲೇಜಿನ ವಿದ್ಯಾರ್ಥಿ ಗಾಯತ್ರಿ ಅವರು 4 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಅತಿ ಹೆಚ್ಚು ಪದಕ ಪಡೆದ ಸಾಧನೆಗೆ ಪಾತ್ರರಾದರು.

ಪುಟ್ಟರಾಜು ಪೊಲೀಸ್ ಪಾಟೀಲ ಅವರು ಚಿನ್ನದ ಪದಕದ ಜೊತೆಗೆ ಎರಡು ನಗದು ಪ್ರಶಸ್ತಿ ಪಡೆದುಕೊಂಡರು. ರಾಯಚೂರಿನ ಬಿಎಸ್‍ಸಿ ಕಾಲೇಜಿನ ಲಾಲ್ ಸಾಬ್ ನದಾಫ್, ಶಿವರಾಜ ಸಜ್ಜನ್, ಅಜ್ಜಯ್ಯ, ಮೇಘ ಸಜ್ಜನ, ಪ್ರಸನ್ನ, ಅಂಬಿಕಾ, ಆಸೀಫ್ ಜಬೀನ್, ಮಲ್ಲೇಶ ಅವರು ತಲಾ 1 ಚಿನ್ನದ ಪದಕ ಗಿಟ್ಟಿಸಿದರು.

ಸ್ನಾತಕೋತ್ತರ ಪದವಿಯಲ್ಲಿ ಅನೋಫ್ ಮೇರಿ ಫೆಲಿಕ್ಸ್, ವಿಲ್ಸನ್ ಬ್ರೌನಿ, ಹರ್ಷಿನಿ ವಿ., ಅರ್ಪಿತಾ, ಆರ್.ಪಿ.ಪ್ರಗತಿ, ಶಿಲ್ಪ, ಅಮುದಲ ಸೆಮಂತಿಕ, ಆಂಡ್ರ್ಯೂಸ್ ಬೆನ್ನಿ ಸೀಸರ್, ಬಸವರಾಜ, ಕುಶಾಲಗೌಡ, ಅಭಿಲಾಷ ಭರತೇಶ್ ಯಲಗುದ್ರಿ, ಅನಿಲ್ ಸಿಎಸ್, ತುರ್ಪುನತಿ ಸೌಜನ್ಯ, ವಿದ್ಯಾಸಾಗರ್ ಹಾಗೂ ಅಕ್ಕಿಶೆಟ್ಟಿ ವೈಷ್ಣವಿ ಅವರು ತಲಾ 1 ಚಿನ್ನದ ಪದಕ ಪಡೆದರು.

ಇದೇ ಸಂದರ್ಭದಲ್ಲಿ ಕುಲಪತಿಗಳಾದ ಡಾ.ಎಂ ಹನುಮಂತಪ್ಪ, ಹಾಲಿ ಕುಲ ಸಚಿವರಾದ ಡಾ.ಕೆ.ಆರ್.ದುರುಗೇಶ್, ನಿರ್ಗಮಿತ ಕುಲ ಸಚಿವ ಡಾ.ಗುರುರಾಜ್ ಸುಂಕದ ಹಾಗೂ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರು ಸೇರಿದಂತೆ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande