ಬಳ್ಳಾರಿ, 26 ಮೇ (ಹಿ.ಸ.) :
ಆ್ಯಂಕರ್ : 2025: 110/33/11ಕೆ.ವಿ ದೋಣಿಮಲೈ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬ್ಯಾಟರಿ ಮೆಂಟೆನೆನ್ಸ್ ತುರ್ತು ನಿರ್ವಹಣಾ ಕಾಮಗಾರಿಯನ್ನು ಆಯೋಜಿಸಲಾಗಿದೆ ಮೇ 28 ರಂದು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಂಡೂರು ಪಟ್ಟಣ ಸೇರಿದಂತೆ ಕೃಷ್ಣನಗರ ಗ್ರಾಮಪಂಚಾಯಿತಿ, ಸುಶೀಲಾನಗರ ಗ್ರಾಮಪಂಚಾಯಿತಿ, ಯಶವಂತನಗರ ಐಪಿಸೆಟ್ ಹಾಗೂ ಸಂಡೂರು ಪಟ್ಟಣ ಸೀನ್ ಬಸಪ್ಪ ಕ್ಯಾಂಪ್, ನಂದಿಹಳ್ಳಿ, ಕೋಮತೂರು ನಾರಾಯಣಪುರ ಮತ್ತು ರಣಜಿತ್ಪುರ, ಭುಜಂಗನಗರ ಗ್ರಾಮ ಪಂಚಾಯಿತ, ದೇವಗಿರಿ ಗ್ರಾಮಪಂಚಾಯತಿ, ನರಸಿಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪಂಚಾಯತಿಗಳಿಗೆ ಬರುವ ಗ್ರಾಮಗಳಲ್ಲಿ ಎನ್.ಜೆ.ವೈ ಮತ್ತು ಐ.ಪಿ.ಸೆಟ್ ಗ್ರಾಹಕರು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಸಂಡೂರು ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್