ರಾಜಿ ಸಂಧಾನ ಕಡ್ಡಾಯ : ಸಿಪಿಸಿಗೆ ಕರ್ನಾಟಕದಿಂದ ಐತಿಹಾಸಿಕ ತಿದ್ದುಪಡಿ
ಬೆಂಗಳೂರು, 26 ಮೇ (ಹಿ.ಸ.) : ಆ್ಯಂಕರ್ : ನ್ಯಾಯದಾನ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸಿವಿಲ್ ಪ್ರಕ್ರಿಯಾ ಸಂಹಿತೆಗೆ ಐತಿಹಾಸಿಕ ತಿದ್ದುಪಡಿ ತಂದಿದ್ದು, ಇದಕ್ಕೆ ರಾಷ್ಟ್ರಪತಿಯವರ ಅಂಕಿತ ದೊರೆತಿದೆ. ಈ ತಿದ್ದುಪಡಿ ಜಾರಿಗೆ ಬರುವ ಮೂಲಕ ಕರ್ನಾಟಕವು ರಾಷ್ಟ್ರದಲ್ಲಿಯೇ ಪ್ರಥ
Hkp


ಬೆಂಗಳೂರು, 26 ಮೇ (ಹಿ.ಸ.) :

ಆ್ಯಂಕರ್ : ನ್ಯಾಯದಾನ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸಿವಿಲ್ ಪ್ರಕ್ರಿಯಾ ಸಂಹಿತೆಗೆ ಐತಿಹಾಸಿಕ ತಿದ್ದುಪಡಿ ತಂದಿದ್ದು, ಇದಕ್ಕೆ ರಾಷ್ಟ್ರಪತಿಯವರ ಅಂಕಿತ ದೊರೆತಿದೆ. ಈ ತಿದ್ದುಪಡಿ ಜಾರಿಗೆ ಬರುವ ಮೂಲಕ ಕರ್ನಾಟಕವು ರಾಷ್ಟ್ರದಲ್ಲಿಯೇ ಪ್ರಥಮ ರಾಜ್ಯವಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.

ಈ ತಿದ್ದುಪಡಿಯ ಪ್ರಕಾರ, ಯಾವುದೇ ಸಿವಿಲ್ ಪ್ರಕರಣ ದಾಖಲಾದ ಬಳಿಕ, ಮೊದಲಿಗೆ ಕಡ್ಡಾಯವಾಗಿ ರಾಜಿ ಸಂಧಾನದ ಪ್ರಯತ್ನ ಮಾಡಬೇಕಾಗುತ್ತದೆ. ಈ ಸಂಧಾನ ಪ್ರಕ್ರಿಯೆ ಎರಡು ತಿಂಗಳೊಳಗೆ ತಾರ್ಕಿಕ ಅಂತ್ಯಕ್ಕೆ ಬರಬೇಕು. ಸಾಧ್ಯವಾಗದಿದ್ದರೆ, ನ್ಯಾಯಾಲಯವೇ ವಿಚಾರಣೆಗೆ ಮುಂದಾಗಲಿದೆ.

ಪ್ರತಿ ಪ್ರಕರಣವನ್ನು ದಾಖಲಾದ ದಿನದಿಂದ 24 ತಿಂಗಳೊಳಗೆ ಇತ್ಯರ್ಥ ಮಾಡುವುದು ಈ ಹೊಸ ಕಾನೂನಿನ ಗುರಿ. ಈ ಮೂಲಕ ದಶಕಗಳಿಂದ ನಡೆಯುತ್ತಿದ್ದ ನ್ಯಾಯ ವಿಳಂಬಕ್ಕೆ ಕಡಿವಾಣ ಹಾಕಲಾಗುವುದು.

ಅದಲ್ಲದೆ, ಪ್ರಕರಣ ದಾಖಲಾಗುವ ಅಥವಾ ಮೊದಲ ವಿಚಾರಣೆಯ ದಿನವೇ ತೀರ್ಪು ದಿನಾಂಕ ನಿಗದಿಗೊಳ್ಳಬೇಕೆಂಬ ನಿಯಮವೂ ತಿದ್ದುಪಡಿಯಲ್ಲಿ ಸೇರಿದೆ. ಎಲ್ಲಾ ಹಂತಗಳಲ್ಲಿ ಕೇವಲ ಮೂರು ಮುಂದೂಡಿಕೆಗಳಷ್ಟೆ ಅವಕಾಶವಿದ್ದು, ಅದನ್ನು ಮೀರಿ ವಿಳಂಬವಾದರೆ, ಸಂಬಂಧಪಟ್ಟಪಕ್ಷದ ಹೇಳಿಕೆಗಳನ್ನು ಶೂನ್ಯವೆಂದು ಪರಿಗಣಿಸಲಾಗುತ್ತದೆ.

ಈ ತಿದ್ದುಪಡಿ ನ್ಯಾಯದಾನ ವ್ಯವಸ್ಥೆಗೆ ತ್ವರಿತತೆ ಮತ್ತು ಸುಧಾರಿತ ಆಡಳಿತ ತರಲಿದೆ. ಇದು ಕಕ್ಷಿದಾರರ ಆರ್ಥಿಕ ಮತ್ತು ಮಾನಸಿಕ ಭಾರವನ್ನು ತಗ್ಗಿಸಲಿದೆ ಎಂದು ಎಚ್.ಕೆ.ಪಾಟೀಲ ಹೇಳಿದರು.

ಈ ತಿದ್ದುಪಡಿ 2024 ಡಿಸೆಂಬರ್ 17 ರಂದು ವಿಧಾನಸಭೆ ಮತ್ತು 18 ರಂದು ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡಿದ್ದು, 2024 ಮೇ 19 ರಂದು ರಾಷ್ಟ್ರಪತಿಗಳ ಅಂಕಿತ ಪಡೆದು ಜಾರಿಗೆ ಬಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande