ಶಿವಮೊಗ್ಗ : ದೇಸಿ ಬೆಳೆಗಳಿಗೆ ಬೀಜ ಬ್ಯಾಂಕ್ ಸ್ಥಾಪನೆ
ಶಿವಮೊಗ್ಗ, 25 ಮೇ (ಹಿ.ಸ.) : ಆ್ಯಂಕರ್ : ಶಿವಮೊಗ್ಗ ಜಿಲ್ಲೆಯಲ್ಲಿ ಕಣ್ಮರೆಯಾಗುತ್ತಿರುವ ದೇಸಿ ತಳಿಗಳ ಸಂರಕ್ಷಣೆಗೆ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಪ್ರಕಟಿಸಿದೆ. ರೈತರು ತಮ್ಮ ಬಳಿ ಇರುವ ದೇಸಿ ತಳಿಗಳ (ಭತ್ತ, ರಾಗಿ, ಜೋಳ, ತೊಗರಿ ಮುಂತಾದವು) ವಿವರಗಳನ್ನು ಸಮೀ
ಶಿವಮೊಗ್ಗ : ದೇಸಿ ಬೆಳೆಗಳಿಗೆ ಬೀಜ ಬ್ಯಾಂಕ್ ಸ್ಥಾಪನೆ


ಶಿವಮೊಗ್ಗ, 25 ಮೇ (ಹಿ.ಸ.) :

ಆ್ಯಂಕರ್ : ಶಿವಮೊಗ್ಗ ಜಿಲ್ಲೆಯಲ್ಲಿ ಕಣ್ಮರೆಯಾಗುತ್ತಿರುವ ದೇಸಿ ತಳಿಗಳ ಸಂರಕ್ಷಣೆಗೆ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಪ್ರಕಟಿಸಿದೆ. ರೈತರು ತಮ್ಮ ಬಳಿ ಇರುವ ದೇಸಿ ತಳಿಗಳ (ಭತ್ತ, ರಾಗಿ, ಜೋಳ, ತೊಗರಿ ಮುಂತಾದವು) ವಿವರಗಳನ್ನು ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಾಯಿಸಬೇಕು. ಬೀಜ ಬ್ಯಾಂಕ್‌ಗೆ ನೀಡಲು ಅಗತ್ಯ ಪ್ರಮಾಣದ ದೇಸಿ ಬೀಜ ನೀಡುವ ಸಿದ್ಧತೆಯೊಂದಿಗೆ, ಸುಸ್ಥಿರ ಕೃಷಿಯಲ್ಲಿ ತೊಡಗಿರುವ ರೈತರಿಗೆ ಈ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande