ಗದಗ, 25 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಾದ್ಯಂತ ಮೂರು-ನಾಲ್ಕು ದಿನಗಳಿಂದ ಸತತವಾಗಿ ಬಿದ್ದ ಮಳೆಗೆ, ಗದಗ ಜಿಲ್ಲೆಯ ಕೋಡಿಕೊಪ್ಪದ ರೈತ ದುಂಡಪ್ಪ ನಾಶಿಪುಡಿ ಕಟಾವು ಮಾಡಿದ ಶೇಂಗಾ ಕೊಳೆತು ಹೋಗಿದೆ.
ನೀರಾವರಿ ಜಮೀನಿನಲ್ಲಿ ಸಾಕಷ್ಟು ಸಂಕಷ್ಟಗಳ ನಡುವೆಯೇ ಶೇಂಗಾ ಬೆಳೆಯನ್ನು ಬೆಳೆಯಲಾಗಿತ್ತು. ಹಾಕಿದ ಬಂಡವಾಳ ಬಾರದಿದ್ದರೂ ದನಕರುಗಳಿಗೆ ಶೇಂಗಾ ಹೊಟ್ಟು ಸಿಗುತ್ತದೆ ಎಂಬ ಧೈರ್ಯದಲ್ಲಿದ್ದ ರೈತನಿಗೆ ಜಮೀನಿನಲ್ಲಿ ಶೇಂಗಾದೊಂದಿಗೆ ಬಳ್ಳಿಯೂ ಕೊಳೆಯುತ್ತಿರುವುದನ್ನು ಕಂಡು ಕಂಬನಿ ಮಿಡಿಯುತ್ತಿದ್ದಾನೆ.
ಒಂದೆಡೆ ಬೆಳೆ ಇಲ್ಲದೆ, ಮತ್ತೊಂದೆಡೆ ಜಾನುವಾರುಗಳಿಗೆ ಹೊಟ್ಟಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.
ಶೇಂಗಾ ಬೆಳೆಯನ್ನು ಒಂದೆಡೆ ಸಂಗ್ರಹಿಸಿ ಮಾಡಬೇಕು ಎನ್ನುವಷ್ಟರಲ್ಲಿ ಮಳೆ ಸುರಿದು ಶೇಂಗಾ ಬೆಳೆಯನ್ನು ಸಂಪೂರ್ಣ ಕೊಳೆತು ಹೋಗುವಂತೆ ಮಾಡಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತನದ್ದಾಗಿದೆ. ಹೀಗಾಗಿ ಸರ್ಕಾರ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP