ನಾಳೆಯಿಂದ ಗ್ರಂಥಾಲಯ ಮೇಲ್ವಿಚಾರಕರ ಧರಣಿ
ಗದಗ, 25 ಮೇ (ಹಿ.ಸ.) : ಆ್ಯಂಕರ್ : ಗ್ರಂಥಾಲಯ ಮೇಲ್ವಿಚಾರಕರು ಯಾವ ಇಲಾಖೆ ನೌಕರರು ಎಂದು ಪ್ರಶ್ನಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೇ. 26ರಂದು ರಾಜ್ಯದ ಎಲ್ಲ ಗ್ರಂಥಾಲಯ ಮೇಲ್ವಿಚಾರಕರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಗ್ರಂಥಾಲಯ ಮೇಲ್ವಿಚಾರಕ ಸಂಘದ ಗದಗ ಜಿಲ್ಲಾಧ್ಯಕ್ಷ ಗ
ಪೋಟೋ


ಗದಗ, 25 ಮೇ (ಹಿ.ಸ.) :

ಆ್ಯಂಕರ್ : ಗ್ರಂಥಾಲಯ ಮೇಲ್ವಿಚಾರಕರು ಯಾವ ಇಲಾಖೆ ನೌಕರರು ಎಂದು ಪ್ರಶ್ನಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೇ. 26ರಂದು ರಾಜ್ಯದ ಎಲ್ಲ ಗ್ರಂಥಾಲಯ ಮೇಲ್ವಿಚಾರಕರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಗ್ರಂಥಾಲಯ ಮೇಲ್ವಿಚಾರಕ ಸಂಘದ ಗದಗ ಜಿಲ್ಲಾಧ್ಯಕ್ಷ ಗವಿಸಿದ್ದಪ್ಪ ಹಳ್ಳಾಕರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗದಗ ಜಿಲ್ಲೆಯ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರು ಧರಣಿಯಲ್ಲಿ ಭಾಗಿಯಾಗಬೇಕು. ಗ್ರಂಥಾಲಯ ಮೇಲ್ವಿಚಾರಕರು ಕಳೆದ 25-30 ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ನಮ್ಮನ್ನೂ ಆರ್‌ಡಿಪಿಆರ್‌ ಇಲಾಖೆಗೆ ಸೇರಿಸಿದರು. ಅದನ್ನು ಪ್ರಶ್ನಿಸಿ ಗ್ರಾಮ ಪಂಚಾಯಿತಿಯವರು ಹೋರಾಟ ಮಾಡಿದರು. ಹಾಗಾದರೆ ನಾವು ಯಾವ ಇಲಾಖೆ ನೌಕರರು ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಸೇವಾ ನಿಯಮಾವಳಿ ತರುವುದರ ಮೂಲಕ ನಮಗೆ ಮುಂಬಡ್ತಿ ನೀಡಬೇಕು. ಇಲ್ಲವಾದರೆ ಮಾತೃ ಇಲಾಖೆಗೆ ಕಳಿಸಬೇಕು. ಸಂಘದ ರಾಜ್ಯಾಧ್ಯಕ್ಷ ಸತ್ಯನಾರಾಯಣ ನೇತೃತ್ವದಲ್ಲಿ ಹೋರಾಟ ಜರುಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕೆಂದು ಹೇಳಿದ್ದು, ಈ ಹೇಳಿಕೆಗೆ ಜಿಲ್ಲಾ ಉಪಾಧ್ಯಕ್ಷ ವಿರೇಶ ತಮ್ಮನಗೌಡರ, ಖಜಾಂಚಿ ಭಗವಂತ ತಾರಿಕೊಪ್ಪ, ಜಿಲ್ಲಾ ಸಂಚಾಲಕ ಹಾಲಪ್ಪ ಕೋರ್ಲಹಳ್ಳಿ, ಮುಂಡರಗಿ ತಾಲೂಕಾಧ್ಯಕ್ಷ ಪ್ರೇಮಜಿ ಪವಾರ, ಕಾರ್ಯದರ್ಶಿ ಅಂದಪ್ಪ ತುರ್ಕಾನಿ ಸಮ್ಮತಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande