ಮೈಸೂರು, 25 ಮೇ (ಹಿ.ಸ.) :
ಆ್ಯಂಕರ್ : ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಲು ನನ್ನ ವೈಯಕ್ತಿಕ ಆಸೆ ಇಲ್ಲ ಎಂದು ಮೈಸೂರು ರಾಜವಂಶಸ್ಥರು ಹಾಗೂ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು,
ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ಅಂಬಾಸಿಡರ್ ಎಂದು ಪ್ರಚಾರ ಮಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ರಾಜಮನೆತನ ವಾಣಿಜ್ಯ ಉದ್ದೇಶಕ್ಕೆ ಸೇವೆ ಮಾಡುವುದಿಲ್ಲ. ಮೈಸೂರು ಸ್ಯಾಂಡಲ್ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕನ್ನಡಿಗರನ್ನು ರಾಯಭಾರಿಯಾಗಿ ನೇಮಿಸಬೇಕು, ಎಂದರು.
ನಟಿ ತಮನ್ನಾ ಭಾಟಿಯಾ ನೇಮಕವನ್ನು ಅವರು ವಿರೋಧಿಸಿ, ಸೋಪಿಗೆ ಹಿರೋಯಿನ್ನೇ ಏಕೆ? ಲಿಂಗಬೇಧ ಬೇಡ. ಇದು ಕನ್ನಡಿಗರ ಅವಮಾನ, ಎಂದು ಕಿಡಿಕಾರಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa