ಕಲಬುರಗಿ, 25 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕದಲ್ಲೂ ಕೊರೊನಾ ವೈರಸ್ ಪತ್ತೆಯಾಗಿದ್ದು,ನಮ್ಮ ಸರ್ಕಾರ ಕೊರೊನಾ ವಿಷಯದಲ್ಲಿ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ.ಆರೋಗ್ಯ ಇಲಾಖೆ ಕೂಡ ಚಿಕಿತ್ಸೆಗಾಗಿ ಕ್ರಮ ಕೈಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ: ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕರ್ನಾಟಕದಲ್ಲೂ ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಸುರಕ್ಷತೆ ಕೈಗೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ಕೈಪಿಡಿ ಬಿಡುಗಡೆ ಮಾಡಿದೆ. ಕರೋನಾ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.
ಅವಶ್ಯಕತೆ ಬಿದ್ರೆ ಕೋವಿಡ್ ವಾರ್ಡ್ ಗಳನ್ನು ಓಪನ್ ಮಾಡುತ್ತೇವೆ. ಆರ್ ಟಿಪಿಸಿಆರ್ ಟೆಸ್ಟ್ ಮಾಡಲು ಪ್ತೀಪ್ರೇಷನ್ ಮಾಡಿಕೊಳ್ತಿದ್ದಾರೆ.ನಮ್ಕ ಕಲಬುರಗಿಯಲ್ಲೂ ಕೂಡ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗ್ತಿದೆ.ಜನ ಕೊರೊನಾ ಬಗ್ಗೆ ಆತಂಕ ಪಡದೆ ಸುರಕ್ಷಾ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಹೇಳಿದರು.
ವೈದ್ಯಕೀಯ ಮೆಡಿಕಲ್ ಕಾಲೇಜ್, ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರಕ್ಕೆ ಅವಕಾಶ ನೀಡದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು,ನನ್ನ ಅವಧಿಯಲ್ಲಿ ಜನಔಷಧಿ ಹಾಗೂ ಮೆಡಿಕಲ್ ಸ್ಟೋರ್ ಇಡಲು ಅವಕಾಶ ಕೊಡಲಿಲ್ಲ.ಯಾಕಂದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಮೆಡಿಸೀನ್ ಕೊಡ್ತಿದ್ದೇವೆ.ಜನೌಷಧಿ ಕೇಂದ್ರ ಇದ್ರೆ ವೈದ್ಯರು ಪ್ರೀಷ್ಕ್ರೀಪ್ಷನ್ ಬರೆಯುತ್ತಾರೆ.ಹಾಗಾಗಿ ಜನಔಷಧಿ ಕೇಂದ್ರ ಹಾಗು ಮೆಡಿಕಲ್ ಸ್ಟೋರ್ ಗೆ ಅವಕಾಶ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Samarth biral