ವಿಕಸಿತ ಭಾರತಕ್ಕಾಗಿ ರಾಜ್ಯಗಳು ಕೈಜೋಡಿಸಲಿ : ಪ್ರಧಾನಿ ಮೋದಿ
ನವದೆಹಲಿ, 24 ಮೇ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಭಾರತ ಮಂಟಪದಲ್ಲಿ ನಡೆದ ನೀತಿ ಆಯೋಗದ ಹತ್ತನೇ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದರು. ಅವರು ದೇಶದ ವೇಗದ ಅಭಿವೃದ್ಧಿಗಾಗಿ 'ಟೀಂ ಇಂಡಿಯಾ' ಎಂಬ ತತ್ವದೊಂದಿಗೆ ಕೇಂದ್ರ ಮತ್ತು ರಾಜ್ಯಗಳು ಒಟ್ಟಿಗೆ ಕೆಲಸ ಮಾ
Pm


ನವದೆಹಲಿ, 24 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಭಾರತ ಮಂಟಪದಲ್ಲಿ ನಡೆದ ನೀತಿ ಆಯೋಗದ ಹತ್ತನೇ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದರು. ಅವರು ದೇಶದ ವೇಗದ ಅಭಿವೃದ್ಧಿಗಾಗಿ 'ಟೀಂ ಇಂಡಿಯಾ' ಎಂಬ ತತ್ವದೊಂದಿಗೆ ಕೇಂದ್ರ ಮತ್ತು ರಾಜ್ಯಗಳು ಒಟ್ಟಿಗೆ ಕೆಲಸ ಮಾಡಬೇಕೆಂದು ಹೇಳಿದ್ದಾರೆ.

ಈ ವರ್ಷದ ಸಭೆಯ ಥೀಮ್ ವಿಕಸಿತ ಭಾರತಕ್ಕಾಗಿ ವಿಕಸಿತ ರಾಜ್ಯಗಳು @2047 ಎಂಬುದು. ಮೋದಿ ಅವರು ಪ್ರತಿಯೊಂದು ರಾಜ್ಯವೂ ವಿಕಸಿತವಾದಾಗ ಮಾತ್ರ ಭಾರತವು ಸಂಪೂರ್ಣವಾಗಿ ವಿಕಸಿತ ರಾಷ್ಟ್ರವಾಗಲಿದೆ ಎಂದು ಹೇಳಿದರು.

ಪ್ರತಿಯೊಂದು ರಾಜ್ಯವು ಕನಿಷ್ಠ ಒಂದು ಆಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಬೇಕೆಂದು ತಿಳಿಸಿದರು ಮತ್ತು ಒಂದು ರಾಜ್ಯ ಒಂದು ಜಾಗತಿಕ ಗಮ್ಯಸ್ಥಾನ ಎಂಬ ಸಂದೇಶ ನೀಡಿದರು.

ಶಹರೀಕರಣದ ವೇಗ ಹೆಚ್ಚುತ್ತಿರುವುದರಿಂದ ಭವಿಷ್ಯಮುಖಿ ನಗರಗಳ ನಿರ್ಮಾಣ, ಮಹಿಳಾ ಉದ್ಯೋಗ ಭಾಗವಹಿಸಿಕೆ, ಹಾಗೂ ಸ್ಥಿರ ಅಭಿವೃದ್ಧಿಗೆ ನವೀನತೆಯ ಅಗತ್ಯ ಇರುವುದನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande