ಎಸ್ಸೆಸ್ಸೆಲ್ಸಿ ರಾಜ್ಯ ಸರಾಸರಿಗಿಂತ ಕಡಿಮೆ ಫಲಿತಾಂಶದ ಶಾಲೆಗಳಿಗೆ ನೋಟೀಸ್ ಜಾರಿ
ಎಸ್ಸೆಸ್ಸೆಲ್ಸಿ ರಾಜ್ಯ ಸರಾಸರಿಗಿಂತ ಕಡಿಮೆ ಫಲಿತಾಂಶದ ಶಾಲೆಗಳಿಗೆ ನೋಟೀಸ್ ಜಾರಿ
ಕೋಲಾರದ ಸ್ಕೌಟ್ಸ್ ಭವನದಲ್ಲಿ ಶೈಕ್ಷಣಿಕ ವರ್ಷಾರಂಭಕ್ಕೆ ಕೈಗೊಳ್ಳಬೇಕಾದ ಸಿದ್ದತೆಗಳು, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಆರಂಭದಿAದಲೇ ವಹಿಸಬೇಕಾದ ಕಲಿಕಾ ವಿಧಾನದ ಕುರಿತು ಚರ್ಚಿಸಲು ಕರೆದಿದ್ದ ಜಿಲ್ಲೆಯ ಸರ್ಕಾರಿ,ಅನುದಾನಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಶಾಲಾ ಶಿಕ್ಷಣ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿದರು.


ಕೋಲಾರ, ೨೪ ಮೇ (ಹಿ.ಸ) :

ಆ್ಯಂಕರ್ : ಎಸ್ಸೆಸ್ಸೆಲ್ಸಿ ಫಲಿತಾಂಶ ರಾಜ್ಯ ಸರಾಸರಿಗಿಂತ ಕಡಿಮೆ ಬಂದ ಶಾಲೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ೨೦೨೫-೨೬ನೇ ಶೈಕ್ಷಣಿಕ ವರ್ಷದ ಆರಂಭಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಿ ಮತ್ತು ಮುಂದಿನ ವರ್ಷದಲ್ಲಿ ಜಿಲ್ಲೆ ೧೦ನೇ ಸ್ಥಾನದೊಳಗೆ ಬರುವಂತಾಗಲು ಕ್ರಿಯಾಯೋಜನೆ ರೂಪಿಸಿ ಕ್ರಮವಹಿಸಿ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮುಖ್ಯಶಿಕ್ಷಕರಿಗೆ ತಾಕೀತು ಮಾಡಿದರು.

ಸ್ಕೌಟ್ಸ್ ಭವನದಲ್ಲಿ ಶೈಕ್ಷಣಿಕ ವರ್ಷಾರಂಭಕ್ಕೆ ಕೈಗೊಳ್ಳಬೇಕಾದ ಸಿದ್ದತೆಗಳು, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಆರಂಭದಿAದಲೇ ವಹಿಸಬೇಕಾದ ಕಲಿಕಾ ವಿಧಾನದ ಕುರಿತು ಚರ್ಚಿಸಲು ಕರೆದಿದ್ದ ಜಿಲ್ಲೆಯ ಸರ್ಕಾರಿ,ಅನುದಾನಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರೀಕ್ಷೆಯಷ್ಟು ಫಲಿತಾಂಶ ಬಾರದಿದ್ದರೂ ೨೦ನೇ ಸ್ಥಾನದಿಂದ ೧೪ನೇ ಸ್ಥಾನಕ್ಕೆ ಬಂದು ಸುಧಾರಣೆಯಾಗಿದೆ ಎಂದು ಮುಖ್ಯಶಿಕ್ಷಕರು ಹಾಗೂ ಶಿಕ್ಷಕರನ್ನು ಅಭಿನಂದಿಸಿದ ಅವರು, ರಾಜ್ಯಮಟ್ಟದಪೂರ್ವಸಿದ್ದತಾ ಪರೀಕ್ಷೆಯಲ್ಲಿ ಬಂದ ಫಲಿತಾಂಶ ಬಂದಿದ್ದರೆ ಜಿಲ್ಲೆ ೧೦ನೇಸ್ಥಾನದೊಳಗೆ ಇರುತ್ತಿತ್ತು ಎಂದರು.

ಜಿಲ್ಲೆಯಲ್ಲಿ ಒಂದು ಖಾಸಗಿ ಶಾಲೆ ಹಾಗೂ ಒಂದು ಅನುದಾನಿತ ಶಾಲೆಗೆ ಶೂನ್ಯ ಫಲಿತಾಂಶ ಬಂದಿದೆ, ಒಟ್ಟಾರೆ ರಾಜ್ಯ ಸರಾಸರಿ ಶೇ.೬೬ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ೫೪ ಸರ್ಕಾರಿ, ೩೪ ಅನುದಾನಿತ ಶಾಲೆ ಮುಖ್ಯಶಿಕ್ಷಕರಿಗೆ ನೋಟೀಸ್ ನೀಡುತ್ತಿದ್ದು, ನೀವು ನಿಮ್ಮ ಶಾಲೆಗಳಲ್ಲಿನ ಸಹಶಿಕ್ಷಕರಿಗೆ ನೋಟೀಸ್ ನೀಡಿ ಕಾರಣ ಪಡೆದು ಕ್ರೋಡೀಕರಿಸಿ ತಲುಪಿಸಿ ಎಂದರು.

೨೦೨೫-೨೬ರ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಅವರ ಶೈಕ್ಷಣಿಕ ಪ್ರಗತಿ ಆಧಾರದಲ್ಲಿ ವಿಂಗಡಿಸಿ, ಚೆನ್ನಾಗಿ ಓದುವ,ಸಾಧಾರಣ ಕಲಿಕೆ ಮತ್ತು ಹಿಂದುಳಿದ ಮಕ್ಕಳ ಪಟ್ಟಿ ಮಾಡಿಕೊಂಡು ಅವರ ಕಲಿಕಾಮಟ್ಟ ಸುಧಾರಣೆಗೆ ಆರಂಭದಿAದಲೇ ಕ್ರಮವಹಿಸಲು ಸೂಚಿಸಿದರು.

೨೦೨೫-೨೬ನೇ ಶೈಕ್ಷಣಿಕ ವರ್ಷ ಮೇ.೨೯ ರಿಂದ ಆರಂಭಗೊಳ್ಳುತ್ತಿದ್ದು, ಅದಕ್ಕೂ ಮುಂಚೆ ಶಾಲೆಗಳನ್ನು ಸ್ವಚ್ಚಗೊಳಿಸಿ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕೊಠಡಿ,ಪ್ರಯೋಗಾಲಯ ಸ್ವಚ್ಚತೆ ಸೇರಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಿ, ಅಗತ್ಯವಾದಲ್ಲಿ ಎಸ್‌ಡಿಎಂಸಿ ಸಹಕಾರ ಪಡೆಯಿರಿ ಎಂದರು.

ಶಾಲೆಯನ್ನು ಆಕರ್ಷಣೀಯವಾಗಿಸಿ ಎಂದ ಅವರು, ಪ್ರಾರಂಭದ ದಿನ ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಿ, ಸಿಹಿ ಊಟ ಬಡಿಸಿ, ಕಟ್ಟಡಗಳ ದುರಸ್ಥಿ ಕುರಿತು ಮಾಹಿತಿ ನೀಡುವುದರ ಜತೆಗೆ ಮಕ್ಕಳ ಸುರಕ್ಷತೆ ಕುರಿತು ಹಮನ ಹರಿಸಿ, ಡೆಸ್ಕ್ಗಳ ಕೊರತೆಯಿದ್ದರೆ ತಿಳಿಸಿ ಎಂದು ಸೂಚಿಸಿದರು.

ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಸಗೀರಾ ಅಂಜುA ಮಾತನಾಡಿ, ಈಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶ್ರೀನಿವಾಸಪುರ ಪ್ರಥಮ, ಕೋಲಾರ,ದ್ವಿತೀಯ, ಮಾಲೂರು ತೃತೀಯ, ಮುಳಬಾಗಿಲು ೪ನೇ, ಬಂಗಾರಪೇಟೆ ೫ ಹಾಗೂ ಕೆಜಿಎಫ್ ತಾಲ್ಲೂಕು ೬ನೇ ಸ್ಥಾನ ಪಡೆದಿದೆ ಎಂದ ಅವರು, ಈ ಬಾರಿ ಫಲಿತಾಂಶ ಮತ್ತಷ್ಟು ಸುಧಾರಣೆಗೆ ಶಾಲಾರಂಭದಿ0ದಲೇ ಕ್ರಮವಹಿಸಿ ಎಂದು ಕಿವಿಮಾತು ಹೇಳಿದರು.

ಈ ಬಾರಿ ಘಟಕವಾರು ಪರೀಕ್ಷೆ ನಡೆಸಿ, ವಿಶ್ಲೇಷಣೆ ಮಾಡಿ, ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಸುವುದನ್ನು ಅಭ್ಯಾಸ ಮಾಡಿಸಿ, ಪಠ್ಯಪುಸ್ತಕ ಓದಿಸಿ ಎಂದು ಸಲಹೆ ನೀಡಿ, ಈ ಸಂಬAಧ ತಂಡ ಶಾಲೆಗಳಿಗೆ ಬೇಟಿ ಪರಿಶೀಲನೆ ನಡೆಸಲಿದೆ ಎಂದರು.

ಶಿಕ್ಷಣಾಧಿಕಾರಿ ವೀಣಾ ಮಾತನಾಡಿ, ದಾಖಲಾತಿ ಆಂದೋಲನದ ಮೂಲಕ ಶಾಲೆ ಉಳಿಸಿ, ಜಡತ್ವ ಬಿಟ್ಟು, ಶಾಲಾ ಆಡಳಿತ ಮತ್ತು ಅಭಿವೃದ್ದಿಗೆ ಪೂರ್ವಸಿದ್ದತೆ ಮಾಡಿಕೊಳ್ಳಿ, ಶಾಲೆ ವಿಶೇಷತೆಗಳನ್ನೊಳಗೊಂಡ ಬುಕ್‌ಲೆಟ್ ತಯಾರಿಸಿಟ್ಟುಕೊಳ್ಳಿ, ಇಡೀ ಶಾಲೆ ಸಿಬ್ಬಂದಿ ಸಮನ್ವಯತೆಯಿಂದ ತಂಡವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಬಿಸಿಯೂಟದ ಅಡುಗೆ ಮನೆಯ ಶುಚಿತ್ವಕ್ಕೆ ಒತ್ತು ನೀಡಿ, ರಜೆಯಲ್ಲಿ ಆಹಾರ ಧಾನ್ಯಗಳಿಗೆ ಹುಳು,ಜಿರಲೆ,ಹಲ್ಲಿ ಸೇರಿದ್ದರೆ ಕೂಡಲೇ ಗಮನಹರಿಸಿ, ಅಡುಗೆ ಮನೆ ಸದಾ ಶುಚಿತ್ವದಿಂದ ಇರಬೇಕು, ಆಹಾರ ಧಾನ್ಯ ದಾಸ್ತಾನು ವಹಿ ಸಮರ್ಪಕವಾಗಿ ನಿರ್ವಹಿಸಿ ಎಂದು ತಾಕೀತು ಮಾಡಿದರು.

ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸೈಯದ ನಾಹಿದ್ ಫಾತಿಮಾ ಮಾತನಾಡಿ, ಮಕ್ಕಳ ಮಾಹಿತಿಯನ್ನು ಸ್ಯಾಟ್ಸ್ನಲ್ಲಿ ದಾಖಲಿಸುವಲ್ಲಿ ವಿಳಂಬವಾಗಿದೆ, ೨.೧೫ ಲಕ್ಷ ಪೈಕಿ ಕೇವಲ ೫೦೮೦೦ ಮಂದಿ ಹೆಸರು ದಾಖಲಿಸಲಾಗಿದೆ, ಶೇ.೨೩ ರಷ್ಟು ಮಾತ್ರ ಪ್ರಗತಿಯಿದ್ದು, ಇದು ಶೇ. ೧೦೦ ಆಗಬೇಕು ಎಂದರು.

ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕ ಶರಣಪ್ಪ ಜಮಾದಾರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಅಪಾರ್ ಐಡಿ ಅಫ್‌ಡೇಟ್ (ಆಟೋಮೆಟೆಡ್ ಪರಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟಿç) ಕೇವಲ ಶೇ.೬೦ ರಷ್ಟು ಮಾತ್ರ ಆಗಿದೆ, ಇದು ಶೇ. ೧೦೦ ಸಾಧನೆಯಾಗಬೇಕು ಎಂದರು.

ಸಭೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಮಧುಮಾಲತಿ ಪಡುವಣೆ, ರಾಮಚಂದ್ರಪ್ಪ, ಮಂಜುನಾಥ್ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರ ಸಮನ್ವಯಾಧಿಕಾರಿಗಳು, ಜಿಲ್ಲೆಯ ಎಲ್ಲಾ ಮುಖ್ಯಶಿಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು.

ಚಿತ್ರ ; ಕೋಲಾರದ ಸ್ಕೌಟ್ಸ್ ಭವನದಲ್ಲಿ ಶೈಕ್ಷಣಿಕ ವರ್ಷಾರಂಭಕ್ಕೆ ಕೈಗೊಳ್ಳಬೇಕಾದ ಸಿದ್ದತೆಗಳು, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಆರಂಭದಿ0ದಲೇ ವಹಿಸಬೇಕಾದ ಕಲಿಕಾ ವಿಧಾನದ ಕುರಿತು ಚರ್ಚಿಸಲು ಕರೆದಿದ್ದ ಜಿಲ್ಲೆಯ ಸರ್ಕಾರಿ,ಅನುದಾನಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಶಾಲಾ ಶಿಕ್ಷಣ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande