ಬಳ್ಳಾರಿ, 24 ಮೇ (ಹಿ.ಸ.) :
ಆ್ಯಂಕರ್ : ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ 2000ಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಕ್ಕಳಿಗೆ ಮೊದಲ ಅಕ್ಷರ ಬರೆಸಿದರು. ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗುರುಗಳ ಬಳಿ ತಾಯಿ ಸರಸ್ವತಿ ದೇವಿ ಕೃಪೆ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಇನ್ನೇನು ನಾಲ್ಕೈದು ದಿನ ಕಳೆದರೆ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು ಮಠದ ಬಳಿ ಒಂದೆಡೆ ಮಕ್ಕಳನ್ನು ಕರೆದುಕೊಂಡು ಪಾಲಕರು ಸಾಲಾಗಿ ನಿಂತು ಸ್ಲೇಟು, ಬಳಪ ಹಿಡಿದುಕೊಂಡು ಮೊದಲ ಅಕ್ಷರಗಳನ್ನ ಶ್ರೀಗಳಿಂದ ಬರೆಸಲು ಉತ್ಸುಕರಾಗಿದ್ದರು.
ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಕ್ಕಳ ಕೈ ಹಿಡಿದು ಓಂಕಾರ ಹಾಗೂ ಓಂ ಗವಿಸಿದ್ದೇಶ್ವರಾಯನಮಃ ಎಂದು ಬರೆಸುತ್ತ ಮೊದಲ ಅಕ್ಷರಭ್ಯಾಸ ಮಾಡಿಸಿದರು. ತಮ್ಮ ಮಕ್ಕಳೊಂದಿಗೆ ಆಗಮಿಸಿದ ಪೋಷಕರು ಶ್ರೀಗಳ ಹಸ್ತದಿಂದ ಅಕ್ಷರಾಭ್ಯಾಸ ಮಾಡಿಸಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ತಾಯಿ ಸರಸ್ವತಿಯಲ್ಲಿ ಪ್ರಾರ್ಥನೆ ಮಾಡಿದರು.
ಮಠಕ್ಕೆ 2 ಸಾವಿರಕ್ಕೂ ಅಧಿಕ ಜನ ಪೋಷಕರು ತಮ್ಮ ಮಕ್ಕಳನ್ನ ಕರೆದುಕೊಂಡು ಬಂದು ಶ್ರೀಗಳಿಂದ ಅಕ್ಷರಾಬ್ಯಾಸ ಮಾಡಿಸಿದರು. ಗವಿಮಠದ ಶ್ರೀ ಗಳ ಆಶಿರ್ವಾದ ಪಡೆದರು. ಶ್ರೀ ಗಳಿಂದ ಅಕ್ಷರಾಭ್ಯಾಸ ಮಾಡೀಸಿದ್ದು ತುಂಬಾ ಖುಷಿ ಯಾಗಿದೆ ಎಂದು ಪೋಷಕರು ಖುಷಿ ಹಂಚಿಕೊಂಡಿದ್ದಾರೆ.
ಮಕ್ಕಳು ತಮ್ಮ ತೊದಲು ನುಡಿಗಳಲ್ಲಿ ಸ್ವಾಮಿಗಳು ಸ್ಲೇಟಿನಲ್ಲಿ ಬರೆಸಿದರು. ಗಾ ನೋಡು ಅಂತ ತೋರಣಗಲ್ಲಿನ ಪ್ರಜಾÐ ಮತ್ತು ಕೊಪ್ಪಳದ ಭಾನು ಹೇಳಿದ್ದಾರೆ.
ಕೊಪ್ಪಳದ ಗವಿಮಠ ಶಿಕ್ಷಣಕ್ಕೆ ಹೆಸರುವಾಸಿಯಾದ ಮಠ, ಸಾವಿರಾರು ಮಕ್ಕಳು ಈ ಮಠದ ನೆರಳಲ್ಲಿ ವಿದ್ಯೆ ಕಲಿತಾರೆ. ಇಲ್ಲಿ ಸಾವಿರಾರು ಮಕ್ಕಳು ಉಜ್ವಲ ಭವಿಷ್ಯ ಕಟ್ಟಿಕೊಂಡಿದ್ದಾರೆ. ಇಂತಹ ಪವಿತ್ರ ಸ್ಥಳದಲ್ಲಿ ಪೂಜ್ಯ ಶ್ರೀಗಳ ಕೈಯಲ್ಲಿ ಮೊದಲ ಅಕ್ಷರ ಬರೆದ ಈ ಪುಠಾಣಿ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗ್ತಾರೆ ಸಮಾಜದ ಗಣ್ಯ ವ್ಯಕ್ತಿಗಳಾಗುತ್ತಾರೆ ಎನ್ನುವುದು ಈ ಪೋಷಕರ ನಂಬಿಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್