ಧಾರವಾಡ : ಅಂತಾರಾಜ್ಯ ಕಳ್ಳರ ಬಂಧನ
ಧಾರವಾಡ, 24 ಮೇ (ಹಿ.ಸ.) : ಆ್ಯಂಕರ್ : ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳತನನ ಮಾಡುತ್ತಿದ್ದ ತಮಿಳುನಾಡಿನ ತಿರುಚನಪಲ್ಲಿಯ ಮೂಲದ ಅಂತಾರಾಜ್ಯ ಮಹಿಳಾ ಆರೋಪಿಯಾದ 37 ವರ್ಷದ ಗುನಾ ಮೀನಾಚಿ ಸಕ್ತಿ, ಮತ್ತು ಮನೆಗಳ್ಳ
Arrest


Arrest


Arrest


ಧಾರವಾಡ, 24 ಮೇ (ಹಿ.ಸ.) :

ಆ್ಯಂಕರ್ : ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳತನನ ಮಾಡುತ್ತಿದ್ದ ತಮಿಳುನಾಡಿನ ತಿರುಚನಪಲ್ಲಿಯ ಮೂಲದ ಅಂತಾರಾಜ್ಯ ಮಹಿಳಾ ಆರೋಪಿಯಾದ 37 ವರ್ಷದ ಗುನಾ ಮೀನಾಚಿ ಸಕ್ತಿ, ಮತ್ತು ಮನೆಗಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಮೂಲದ ಆರೋಪಿಯಾದ 46 ವರ್ಷದ ಕಾಮೇಪಲ್ಲಿ ಶ್ರೀನಿವಾಸ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳು ಧಾರವಾಡ ಉಪನಗರ ಪೊಲೀಸ್ ಠಾಣೆಯ ಎರಡು ಪ್ರಕರಣಗಳು ಮತ್ತು ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯ ಒಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದರ ಬಗ್ಗೆ ತಿಳಿದು ಬಂದಿದ್ದು, ಬಂಧಿತರಿಂದ ಕಳ್ಳತನವಾಗಿದ್ದ 9.25 ಲಕ್ಷ ರೂ ಮೌಲ್ಯದ 100 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 750 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande