ಮುಂದುವರೆದ ರಾಜತಾಂತ್ರಿಕ ಸಂವಾದ ಅಭಿಯಾನ
ನವದೆಹಲಿ, 24 ಮೇ (ಹಿ.ಸ.) : ಆ್ಯಂಕರ್ : ಭಾರತದ ರಾಜತಾಂತ್ರಿಕ ಸಂವಾದ ಅಭಿಯಾನದ ಭಾಗವಾಗಿ ಇನ್ನೂ ಎರಡು ನಿಯೋಗಗಳು ವಿದೇಶಗಳಿಗೆ ತೆರಳಿದ್ದು, ಈಗಾಗಲೇ ಮೂರು ನಿಯೋಗಗಳು ಪ್ರವಾಸದಲ್ಲಿವೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ನಿಯೋಗ ಬಹ್ರೇನ್, ಕುವೈತ್, ಸೌದಿ ಅರೇಬಿಯಾ ಮತ್ತು ಅಲ್ಜೀರಿಯಾ ರಾಷ್ಟ್ರಗ
Delegation


ನವದೆಹಲಿ, 24 ಮೇ (ಹಿ.ಸ.) :

ಆ್ಯಂಕರ್ : ಭಾರತದ ರಾಜತಾಂತ್ರಿಕ ಸಂವಾದ ಅಭಿಯಾನದ ಭಾಗವಾಗಿ ಇನ್ನೂ ಎರಡು ನಿಯೋಗಗಳು ವಿದೇಶಗಳಿಗೆ ತೆರಳಿದ್ದು, ಈಗಾಗಲೇ ಮೂರು ನಿಯೋಗಗಳು ಪ್ರವಾಸದಲ್ಲಿವೆ.

ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ನಿಯೋಗ ಬಹ್ರೇನ್, ಕುವೈತ್, ಸೌದಿ ಅರೇಬಿಯಾ ಮತ್ತು ಅಲ್ಜೀರಿಯಾ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗ ಅಮೆರಿಕ, ಪನಾಮಾ, ಗಯಾನಾ, ಬ್ರೆಜಿಲ್ ಮತ್ತು ಕೊಲಂಬಿಯಾಕ್ಕೆ ತೆರಳಿದೆ.

ಈ ನಿಯೋಗಗಳು ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆ ನೀತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸುತ್ತಿವೆ. ಇದು ಭಾರತ ದೇಶೀಯ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಜಾಗತಿಕ ಭದ್ರತೆಗಾಗಿ ಕೈಗೊಂಡಿರುವ ಸರ್ವಪಕ್ಷೀಯ ರಾಜತಾಂತ್ರಿಕ ಕಾರ್ಯ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande