ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ತೇಜೋವಧೆಗೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ತೇಜೋವಧೆಗೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ
ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೊತ್ತೂರು ಮಂಜುನಾಥ್ ರವರನ್ನು ಸಮರ್ಥಿಸಿಕೊಂಡರು.


ಕೋಲಾರ, ಮೇ.೨೪ (ಹಿ.ಸ) :

ಆ್ಯಂಕರ್ : ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಸಹಿಸದೇ ಶಾಸಕ ಕೊತ್ತೂರು ಮಂಜುನಾಥ್ ವಿರುದ್ದ ತೇಜೋವಧೆ ಮಾಡುವುದು ಹೂಹಳ್ಳಿ ಪ್ರಕಾಶ್ ಅವರ ಕಾಯಕವಾಗಿ ಬಿಟ್ಟಿದೆ ಅವರ ಊರಲ್ಲಿ ಕನಿಷ್ಠ ಗ್ರಾಮ ಪಂಚಾಯಿ ಸದಸ್ಯನಾಗಲಿ ಎಂದು ದರಕಾಸ್ತು ಸಮಿತಿ ಸದಸ್ಯ ಖಾದ್ರಿಪುರ ಬಾಬು ಸವಾಲು ಹಾಕಿದರು.

ಕೋಲಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಕೊತ್ತೂರು ಮಂಜುನಾಥ್ ಅವರ ವಿರುದ್ದ ವಯಕ್ತಿಕ ದ್ವೇಷದಿಂದ ಆರೋಪಗಳನ್ನು ಮಾಡಿದ್ದಾರೆ ಅವರಿಗೆ ಏನಾದರೂ ನೈತಿಕತೆ ಇದ್ದರೆ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟು ನ್ಯಾಯ ಪಡೆಯಲಿ ವಿನಾಕಾರಣ ಕೆಟ್ಟ ಪದಗಳ ಬಳಕೆ ಸರಿಯಲ್ಲ ಇದು ಇಲ್ಲಿಗೆ ನಿಲ್ಲಬೇಕು ಇಲ್ಲದೆ ಹೋದರೆ ಮುಂದೆ ನಮಗೂ ನಿಮ್ಮ ವಿರುದ್ದ ಮಾತನಾಡುವುದು ಬರುತ್ತದೆ ಎಂದು ಎಚ್ಚರಿಕೆ ನೀಡಿದರು

ರಾಜ್ಯದಲ್ಲಿ ಸಾಕಷ್ಟು ಶಾಸಕರು ಸಹಕಾರಿ ಸಂಸ್ಥೆಗಳ ಮೂಲಕವೇ ಬಂದಿದ್ದಾರೆ ಶಾಸಕರು ಸಹಕಾರಿ ಸಂಸ್ಥೆಗೆ ಸ್ಪರ್ಧೆ ಮಾಡಬಾರದು ಎಂದು ಹೇಳಲು ನೀವು ಯಾರು ಸ್ವಾಮಿ ಸಹಕಾರಿ ಸಂಸ್ಥೆಯಲ್ಲಿ ಲೂಟಿ ಮಾಡಿದವರ ವಿರುದ್ದ ಧ್ವನಿ ಎತ್ತಲಿ ಇನ್ನೂ ನಾಮಪತ್ರ ಸಲ್ಲಿಸಿದ್ದಾರೆ ಅವಾಗಲೇ ಲೆಕ್ಕ ಕೇಳಲು ಹೊರಟಿದ್ದಾರೆ ಸರ್ಕಾರದಿಂದ ಅನುದಾನ ತಂದು ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.

ವಕ್ಕಲೇರಿ ಗ್ರಾಮ ಪಂಚಾಯಿತಿ ಸದಸ್ಯ ಬೊಟ್ಟು ರಾಜಪ್ಪ ಮಾತನಾಡಿ ಹೂಹಳ್ಲಿ ಪ್ರಕಾಶ್ ಅವರಿಗೆ ಬರೀ ಶಾಸಕರ ವಿರುದ್ದ ಮಾತಾಡುವುದೇ ವೃತ್ತಿಯಾಗಿದೆ ದಲಿತ ಸಂಘಟನೆ ಮುಖಂಡನಾಗಿ ದಲಿತರಿಗೆ ಎಷ್ಟು ನ್ಯಾಯ ಕೊಡಿಸಿದ್ದಾರೆ ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ದಲಿತರ ಪರ ಧ್ವನಿ ಎತ್ತಲಿ ಕೇವಲ ಹೊಟ್ಟೆಪಾಡಿಗೆ ಜೀವನ ನಡೆಸುವವರು ಶಾಸಕರ ವಿರುದ್ದ ಮಾತಾಡುವುದನ್ನು ಬಿಡಬೇಕು ಎಂದು ತಿಳಿಸಿದರು

ದಲಿತ ಮುಖಂಡ ಚಿಕ್ಕಅಯ್ಯೂರು ರವೀಂದ್ರನಾಥ್ ಮಾತನಾಡಿ ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಅವರ ಸ್ಥಾನವನ್ನು ಪ್ರಶ್ನೆ ಮಾಡುವುದಾದರೆ ಸಂವಿಧಾನವನ್ನು ಪ್ರಶ್ನೆ ಮಾಡಿದಂತೆ ಹೂಹಳ್ಳಿ ಪ್ರಕಾಶ್ ಅವರಿಗೆ ಜನ್ಮ ಕೊಟ್ಟ ಊರಿಗೆ ಅಗೌರವ ತಂದಿದ್ದಾರೆ ಅವರಿಗೆ ಸ್ವಾಭಿಮಾನ ಸ್ವಂತಿಕೆ ಗೌರವ ಇದ್ದರೆ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ ಎಂದರು

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ನರಸಾಪುರ ನವೀನ್, ಚಂದ್ರಮೋಹನ್, ಲಕ್ಷ್ಮೀಪುರ ಲೋಕೇಶ್, ರಾಜಣ್ಣ, ಅರುಣ್, ನಾರಾಯಣಪ್ಪ ಉಪಸ್ಥಿತರಿದ್ದರು.

ಚಿತ್ರ : ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೊತ್ತೂರು ಮಂಜುನಾಥ್ ರವರನ್ನು ಸಮರ್ಥಿಸಿಕೊಂಡರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande