ಅವೈಜ್ಞಾನಿಕ ರೈಲ್ವೆ ಅಂಡರ್‌ಪಾಸ್‌ಗಳನ್ನು ದುರಸ್ತಿಗೊಳಿಸಲು ರೈತ ಸಂಘದ ಒತ್ತಾಯ
ಅವೈಜ್ಞಾನಿಕ ರೈಲ್ವೆ ಅಂಡರ್‌ಪಾಸ್‌ಗಳನ್ನು ದುರಸ್ತಿಗೊಳಿಸಲು ರೈತ ಸಂಘದ ಒತ್ತಾಯ
ಅವೈಜ್ಞಾನಿಕ ರೈಲ್ವೆ ಅಂಡರ್ ಪಾಸ್‌ಗಳನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಕೋಲಾರ ಜಿಲ್ಲೆಯ ರೈಲ್ವೆ ಮಂಡಳಿಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.


ಕೋಲಾರ, ೨೪ ಮೇ (ಹಿ.ಸ) :

ಆ್ಯಂಕರ್ : ಅವೈಜ್ಞಾನಿಕ ರೈಲ್ವೇ ಅಂಡರ್ ಪಾಸ್‌ಗಳನ್ನು ದುರಸ್ತಿ ಪಡಿಸುವಂತೆ ಒತ್ತಾಯಿಸಿ ರೈತ ಸಂಘದಿ0ದ ಬಂಗಾರಪೇಟೆಯಲ್ಲಿ ರೈಲ್ವೇ ಮಂಡಳಿಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ರೈತ ಸಂಘದ ಪದಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅವೈಜ್ಞಾನಿಕ ಅಂಡರ್ ಪಾಸ್ ಗಳನ್ನು ಸರಿಪಡಿಸಿ ಎಂದರೆ ನೂರಾರು ಕೋಟಿ ಅನುದಾದಲ್ಲಿ ಗುತ್ತಿಗೆದಾರರನ್ನು ಉದ್ಧಾರ ಮಾಡಲು ಅಂಡರ್ ಪಾಸ್ ಗಳ ಮೇಲೆ ಆಕಾಶಕ್ಕೆ ಚಪ್ಪರ ಹಾಕಿದಂತೆ ಸೀಟ್ ಗಳನ್ನು ಅಳವಡಿಸುವ ಮುಖಾಂತರ ಕೋಟಿಕೋಟಿ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ದಂಧೆಯಾಗಿ ಅಧಿಕಾರಿಗಳು ಮಾಡುತ್ತಿದ್ದಾರೆಂದು ಅವ್ಯವಸ್ಥೆ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ವೇ ಮಂಡಳಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಪ್ರತಿವರ್ಷ ಮುಂಗಾರುಮಳೆ ಆರಂಭವಾದರೆ ಜಿಲ್ಲಾದ್ಯಂತ ಎಲ್ಲಾ ಅಂಡರ್ ಪಾಸ್ ಗಳು ಕೆರೆ, ಕುಂಟೆಗಳಾಗಿ ಮಾರ್ಪಟ್ಟು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ರೈಲ್ವೇ ಅಧಿಕಾರಿಗಳು ವಿಫಲವಾಗಿದ್ದಾರೆಂದು ಕಿಡಿಕಾರಿದರು.

ಪ್ರತಿ ಮುಂಗಾರು ಮಳೆ ಆರಂಭವಾದರೆ ತಿಮ್ಮಾಪುರ, ದೊಡ್ಡಹಸಾಳ, ಖಾದ್ರಿಪುರ, ಶ್ರೀನಿವಾಸಪುರ ಮಾವು ಮಾರುಕಟ್ಟೆ ಸಮೀಪದಲ್ಲಿರುವ ಅಂಡರ್ ಪಾಸ್ ಗಳು ಜನಸಾಮಾನ್ಯರ ಪಾಲಿಗೆ ಯಮಲೋಕ ತೋರಿಸುವ ಜೊತೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ರೈತರ ಬೆಳೆಗಳನ್ನು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸಾಧ್ಯವಾಗದೆ ಹರಾಜಿನಲ್ಲಿ ಬೆಲೆ ಕುಸಿತವಾಗಲು ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಅಸಮಧಾನ ವ್ಯಕ್ತಪಡಿಸಿದರು.

ಒಂದು ಕಡೆ ರೈತರಿಗೆ ಸಮಸ್ಯೆ ಮತ್ತೊಂದು ಕಡೆ ದ್ವಿಚಕ್ರ ವಾಹನ, ಟೆಂಪೋ ಮತ್ತಿತರರ ವಾಹನಗಳ ಸಂಚಾರಕ್ಕೆ ಸಮಸ್ಯೆ. ಇದರ ಮಧ್ಯೆ ಶಾಲಾ ಮಕ್ಕಳು ಶಾಲೆಗೆ ತೆರಳಲು ಅಂಡರ್ ಪಾಸ್ ಗಳಲ್ಲಿ ನಡೆದಾಡಲು ಭಯಭೀತರಾಗಿ ಶಾಲೆಗೆ ಹೋಗಲಾರದ ಪರಿಸ್ಥಿತಿಯನ್ನು ಉಚಿತವಾಗಿ ರೈಲ್ವೇ ಅಧಿಕಾರಿಗಳು ನೀಡಿದ್ದಾರೆಂದು ಕಿಡಿಕಾರಿದರು.

ರೈತಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಜಿಲ್ಲಾದ್ಯಂತ ರೈಲ್ವೇ ಹಳಿಗಳ ಮೇಲೆ ಆಯಾ ತಪ್ಪಿ ರೈತರ ಹಸು, ಎಮ್ಮೆ ಸಂಚರಿಸಿದರೆ ಕೇಸು ದಾಖಲಿಸುವ ರೈಲ್ವೇ ಅಧಿಕಾರಿಗಳು ಯಾವುದೇ ಕಾನೂನಿನ ಭಯವಿಲ್ಲದೆ ರಾತ್ರಿ ವೇಳೆಯಲ್ಲಿ ಹಳಿಗಳ ಮೇಲೆಯೇ ಕೆಲವು ವ್ಯಕ್ತಿಗಳು ಮದ್ಯಪಾನದ ಜೊತೆಗೆ ರೀಲ್ಸ್ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾಗಿದ್ದಾರೆಂದು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.

ಸಾವಿರಾರು ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಿರುವ ಅಂಡರ್ ಪಾಸ್ ಗಳು ಅವೈಜ್ಞಾನಿಕವಾಗಿದ್ದು, ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆಯಿಲ್ಲದೆ ನಿಂತಲ್ಲಿಯೇ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸುತ್ತಮುತ್ತಲ ಗ್ರಾಮಗಳಿಗೆ ಉಚಿತ ಅನಾರೋಗ್ಯವನ್ನು ನೀಡುವ ಜೊತೆಗೆ ರೈಲು ಬರುವ ೧ ಗಂಟೆ ಮುಂಚಿತವಾಗಿಯೇ ಕೆಲವು ಕಡೆ ಗೇಟ್ ಗಳನ್ನು ಬಂದ್ ಮಾಡಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಮಾಡುವ ಅವ್ಯವಸ್ಥೆಯನ್ನು ಸರಿಪಡಿಸಿ ಅವೈಜ್ಞಾನಿಕ ಅಂಡರ್ ಪಾಸ್ ಗಳಿಗೆ ಮುಕ್ತಿ ನೀಡಿ ಮುಂಗಾರು ಮಳೆಯಿಂದ ಜನಸಾಮಾನ್ಯರ ರಕ್ಷಣೆ ಮಾಡಿ ಹಳಿಗಳ ಮೇಲೆ ರೀಲ್ಸ್ ಮತ್ತು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ವಿಶೇಷ ರೈಲ್ವೇ ಅಧಿಕಾರಿಗಳ ತಂಡ ರಚನೆ ಮಾಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ರೈಲ್ವೇ ಅಧಿಕಾರಿಗಳು ಅಂಡರ್ ಪಾಸ್ ಗಳ ಅವ್ಯವಸ್ಥೆ ಬಗ್ಗೆ ಈಗಾಗಲೇ ಕ್ರಮಕೈಗೊಂಡಿದ್ದೇವೆ. ಹಳಿಗಳ ಮೇಲೆ ರೀಲ್ಸ್ ಮತ್ತು ಅನೈತಿಕ ಚಟುವಟಿಕೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಭರಸವೆಯನ್ನು ನೀಡಿದರು.

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕದಿರಿನತ್ತ ಅಪ್ಪೋಜಿರಾವ್, ಲಕ್ಷö್ಮಣ್, ಸುರೇಶ್ ಬಾಬು, ಯಲ್ಲೋಜಿರಾವ್, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಚಾಂದ್‌ಪಾಷ, ಕಿರಣ್, ಬಾಬಾಜಾನ್, ಆರೀಪ್, ಜಾವೇದ್, ಮುನಿಯಪ್ಪ, , ರಾಮಸಾಗರ ವೇಣು, ಕಿರಣ್, ಮುನಿಕೃಷ್ಣ, ಕದರಿನತ್ತ ಅಪ್ಪೋಜಿರಾವ್, ವಿಶ್ವ, ಮುನಿರಾಜು, ಯಲ್ಲಪ್ಪ, ಹರೀಶ್, ಮಂಗಸAದ್ರ ತಿಮ್ಮಣ್ಣ, ಶೈಲಜ, ರತ್ನಮ್ಮ ಭಾಗವಹಿಸಿದ್ದರು.

ಚಿತ್ರ : ಅವೈಜ್ಞಾನಿಕ ರೈಲ್ವೆ ಅಂಡರ್ ಪಾಸ್‌ಗಳನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಕೋಲಾರ ಜಿಲ್ಲೆಯ ರೈಲ್ವೆ ಮಂಡಳಿಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande