ಬಳ್ಳಾರಿ : ವೀಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿ ಗೆ ನುಡಿ ನಮನ
ಬಳ್ಳಾರಿ, 23 ಮೇ (ಹಿ.ಸ.) : ಆ್ಯಂಕರ್ : ವೀಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿ ಅವರ ಆತ್ಮಕ್ಕೆ ಶಾಂತಿಕೋರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಭೆಯನ್ನು ನಡೆಸಿ, ನುಡಿ ನಮನ ಸಲ್ಲಿಸಲಾ
ಬಳ್ಳಾರಿ : ವೀಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿ ಆತ್ಮಕ್ಕೆ ನುಡಿ ನಮನ


ಬಳ್ಳಾರಿ : ವೀಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿ ಆತ್ಮಕ್ಕೆ ನುಡಿ ನಮನ


ಬಳ್ಳಾರಿ, 23 ಮೇ (ಹಿ.ಸ.) :

ಆ್ಯಂಕರ್ : ವೀಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿ ಅವರ ಆತ್ಮಕ್ಕೆ ಶಾಂತಿಕೋರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಭೆಯನ್ನು ನಡೆಸಿ, ನುಡಿ ನಮನ ಸಲ್ಲಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ವಾರ್ತಾ ಇಲಾಖೆಯ ಅಧಿಕಾರಿ ವಿ.ಸಿ. ಗುರುರಾಜ್ ಅವರು, ವೀಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿ ಅವರ ಕರ್ತವ್ಯಪ್ರಜ್ಞೆ, ಶಾಂತ ಚಿತ್ತತೆ ಮತ್ತು ಪ್ರಶಾಂತವಾದ ಸ್ವಭಾವಗಳ ಕುರಿತು ಮಾತನಾಡಿ, ಪತ್ರಕರ್ತರು ಕರ್ತವ್ಯದ ಒತ್ತಡದ ಜೊತೆಯಲ್ಲಿ ವೈಯಕ್ತಿಕ ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ಕಡೆ ಕಾಳಜಿ ತೋರಿಸಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್. ವೀರಭದ್ರಗೌಡ ಅವರು ಸಭೆಯ ಅಧ್ಯಕ್ಷತೆವಹಿಸಿ, ವೀಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿ ಮತ್ತು ವೀರೇಶ್ ಕಟ್ಟೆಮ್ಯಾಗಳ ಅವರ ಅಕಾಲಿಕ ನಿಧನ ಅನೇಕರಲ್ಲಿ ಆತಂಕ ಮೂಡಿಸಿದೆ. ಪ್ರತಿಯೊಬ್ಬರೂ ಆರೋಗ್ಯದ ಕಾಳಜಿವಹಿಸಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ವೆಂಕೋಬಿ ಸಂಗನಕಲ್ಲು, ನರಸಿಂಹಮೂರ್ತಿ ಕುಲಕರ್ಣಿ, ಹಂದ್ಯಾಳ ಪುರುಷೋತ್ತಮ, ಎಚ್.ಎಂ. ಮಹೇಂದ್ರಕುಮಾರ್, ಎಂ. ಕಿನ್ನೂರೇಶ್ವರ, ಹರಿಕೃಷ್ಣ ಇನ್ನಿತರರು, ವೀಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿಯ ಪ್ರಶಾಂತ ಸ್ವಭಾವ, ಕರ್ತವ್ಯಪ್ರಜ್ಞೆ, ಕುಟುಂಬದ ಕಾಳಜಿ ಮತ್ತು ಹಿರಿಯರ ಕುರಿತಾದ ಅಭಿಮಾನಗಳ ಕುರಿತು ಮಾನತಾಡಿ, ನುಡಿ ನಮನ ಸಲ್ಲಿಸಿದರು.

ಪತ್ರಕರ್ತರಾದ ಮಾರುತಿ ಸುಣಗಾರ, ಗುರುಶಾಂತ, ರೇಣುಕಾರಾಧ್ಯ, ವೆಂಕಟೇಶ್ ಕುಲಕರ್ಣಿ, ಅಂಬರೀಶ್, ಶಿವಾನಂದ, ಸಿದ್ದು, ಶ್ರೀನಿವಾಸ್ ಶೆಟ್ಟಿ, ಮುರುಳಿಕಾಂತ ರಾವ್, ಭರತ್, ನಂದೀಶ್, ಹನುಮೇಶ್ ರಾವ್, ಸಿದ್ದಿಕಿ, ಈ. ಗೋವರ್ಧನ ರೆಡ್ಡಿ, ವಿಜಯಕುಮಾರ್, ರಾಧಾಕೃಷ್ಣ, ನಂದೀಶ್, ಪೀರಸಾಬ್, ಸುನೀಲ್, ವಾರ್ತಾ ಇಲಾಖೆಯ ಸಿಬ್ಬಂದಿ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೃತರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನಾಚರಣೆ ಆಚರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande