ಸಮುದಾಯ ಭವನಗಳಿಂದ ಜಿಲ್ಲೆಯ ಪ್ರತಿಭೆಗಳು ಬೆಳಕಿಗೆ : ಸಚಿವ ಎನ್ಎಸ್ ಬೋಸರಾಜು
ರಾಯಚೂರು, 23 ಮೇ (ಹಿ.ಸ.) : ಆ್ಯಂಕರ್ : ನಾಡು-ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಹಾಗೂ ಶೈಕ್ಷಣಿಕ, ಸಂಘ-ಸಂಸ್ಥೆಗಳ ಜನಪರ ಕಾರ್ಯಕ್ರಮಗಳಿಗಾಗಿ ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ 40 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾ ಸಮುದಾಯ ಕೇಂದ್ರ
ಸಮುದಾಯ ಭವನಗಳಿಂದ ಜಿಲ್ಲೆಯ ಪ್ರತಿಭೆಗಳು ಬೆಳಕಿಗೆ ಬರಲಿವೆ- ಸಚಿವ ಎನ್ಎಸ್ ಬೋಸರಾಜು


ರಾಯಚೂರು, 23 ಮೇ (ಹಿ.ಸ.) :

ಆ್ಯಂಕರ್ : ನಾಡು-ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಹಾಗೂ ಶೈಕ್ಷಣಿಕ, ಸಂಘ-ಸಂಸ್ಥೆಗಳ ಜನಪರ ಕಾರ್ಯಕ್ರಮಗಳಿಗಾಗಿ ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ 40 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾ ಸಮುದಾಯ ಕೇಂದ್ರ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಸಚಿವರಾದ ಎನ್ ಎಸ್ ಬೋಸರಾಜು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅದ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ‌ ಸಚಿವರು ನಾವೆಲ್ಲರು ಬೇಡಿಕೆಯಿಟ್ಟ ಹಿನ್ನಲೆ ರಾಯಚೂರು ಜಿಲ್ಲೆಗೆ 40 ಕೋಟಿ ವೆಚ್ಚದಲ್ಲಿ ಜಿಲ್ಲಾ ಕೇಂದ್ರ ಸಮುದಾಯ ಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಕಲೆ, ಸಾಂಸ್ಕೃತಿಕ‌ ಕಾರ್ಯಕ್ರಮಗಳ ಆಯೋಜಕರು, ಕಲಾಭಿಮಾನಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಬಹುದಿನದ ಬೇಡಿಕೆಯಾಗಿದ್ದ ಜಿಲ್ಲಾ ಸಮುದಾಯ ಭವನದ ಕನಸು ನಮ್ಮ ಸರ್ಕಾರ ನನಸು ಮಾಡಿದೆ ಎಂದರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದರೆ ಕಾರ್ಯಕ್ರಮದ ಆಯೋಜಕರುಗಳಿಗೆ ಬಹಾಳ ತೊಂದರೆಯಾಗುತ್ತಿತ್ತು. ಜಿಲ್ಲೆಯಲ್ಲಿ ದೊಡ್ಡದಾದ ಸರಕಾರಿ ಸಮುದಾಯ ಭವನ ಇಲ್ಲದಿರುವುದರಿಂದ ಹೆಚ್ಚಿನ ವೆಚ್ಚವನ್ನು ಭರಿಸಿ ಖಾಸಗಿ ಭವನಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕಾಗಿತ್ತು. ದುಂದು ವೆಚ್ಚವನ್ನು ತಪ್ಪಿಸಲು ಹಾಗೂ ಜಿಲ್ಲೆಯ ಕಲಾ ಪ್ರತಿಭೆಗಳ ಕಲೆ, ಮನೋರಂಜನೆ, ಸಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಡು-ನುಡಿ ಉಳಿಯುವುದಾಗಿ ಮತ್ತು ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸಲು ನಮ್ಮ ಸರ್ಕಾರ ಜಿಲ್ಲೆಗೆ ಜಿಲ್ಲಾ ಕೇಂದ್ರ ಸಮುದಾಯ ಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande