ನವದೆಹಲಿ, 23 ಮೇ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆಪರೇಷನ್ ಸಿಂಧೂರಿನಲ್ಲಿ ಭಾರತೀಯ ವಾಯುಪಡೆಯ ವಿಮಾನ ನಷ್ಟದ ಬಗ್ಗೆ ಕೇಳಿದ ಪ್ರಶ್ನೆ ದೇಶದ ಭದ್ರತೆಗೂ, ಸಶಸ್ತ್ರ ಪಡೆಗಳ ನೈತಿಕತೆಗೆ ಅಪಾಯಕಾರಿಯಾಗಿದೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುದ್ಧದ ಸಂದರ್ಭದಲ್ಲಿನ ಇಂತಹ ಪ್ರಶ್ನೆಗಳು ಶತ್ರು ರಾಷ್ಟ್ರಗಳ ಹಿತಾಸಕ್ತಿಗೆ ಸಹಾಯವಾಗಬಹುದೆಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ನಾಯಕನ ಹೇಳಿಕೆ ಜವಾಬ್ದಾರಿಯಿಲ್ಲದ ಮತ್ತು ಅಸಂವೇದನಾಶೀಲವಾಗಿದೆ ಎಂದರು. ಜೊತೆಗೆ, ಪಾಕಿಸ್ತಾನದ ನಾಯಕರು ಕೂಡ ಭಾರತ ನಡೆಸಿದ ಆಪರೇಷನ್ನ ಪರಿಣಾಮವನ್ನು ಒಪ್ಪಿಕೊಂಡಿದ್ದಾರೆಂಬುದನ್ನು ನೆನಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa