ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಸಚಿವ ಶರಣ ಪ್ರಕಾಶ ಪಾಟೀಲ್ ತಿರುಗೇಟು
ಗದಗ, 23 ಮೇ (ಹಿ.ಸ.) : ಆ್ಯಂಕರ್ : ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಂಬಂಧಿತ ಶಿಕ್ಷಣ ಸಂಸ್ಥೆಗಳ ಮೇಲೆ ಇತ್ತೀಚೆಗೆ ನಡೆದ ಇಡಿ ದಾಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪ ಮುಂದುವರೆದಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯ ಹೇಳಿಕೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್
ಪೋಟೋ


ಗದಗ, 23 ಮೇ (ಹಿ.ಸ.) :

ಆ್ಯಂಕರ್ : ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಂಬಂಧಿತ ಶಿಕ್ಷಣ ಸಂಸ್ಥೆಗಳ ಮೇಲೆ ಇತ್ತೀಚೆಗೆ ನಡೆದ ಇಡಿ ದಾಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪ ಮುಂದುವರೆದಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯ ಹೇಳಿಕೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ.

ಇಡಿ ದಾಳಿ ಯಾರೋ ದೂರು ನೀಡಿದ ಕಾರಣಕ್ಕೆ ನಡೆದಿದೆ ಎನ್ನುತ್ತಿರುವ ಪ್ರಹ್ಲಾದ್ ಜೋಶಿಯವರ ಹೇಳಿಕೆಯನ್ನು ನಾವೇನು ನಂಬಬೇಕು? ಯಾರು ದೂರು ನೀಡಿದರೂ ಅವರು ಜೋಶಿಯವರಿಗೆ ಪೂರ್ವ ಮಾಹಿತಿ ನೀಡುತ್ತಾರಾ? ಎಂಬ ಕುತೂಹಲಭರಿತ ಪ್ರಶ್ನೆಯನ್ನು ಪಾಟೀಲ್ ಎಳೆದಿದ್ದಾರೆ.

ಇಡಿಗೆ ಬಿಜೆಪಿಯ ಆಪ್ತ ಸಂಬಂಧವಿದೆ ಎಂಬ ಆರೋಪವನ್ನು ಎತ್ತಿ ಹಿಡಿದ ಪಾಟೀಲ್, ಇಡಿ ಈವರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದಿಯಾ? ದಾಳಿ ಜೋಶಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆಯಾ ಎನ್ನುವ ಪ್ರಶ್ನೇ ಮುಡುತ್ತಿದೆ ಎಂದರು.

ಮೋದಿ ಸರ್ಕಾರದ ಅವಧಿಯಲ್ಲಿ ಸ್ವತಂತ್ರ ತನಿಖಾ ಸಂಸ್ಥೆಗಳು ಕೈಗೊಂಬೆಗಳಾಗಿ ಕೆಲಸ ಮಾಡುತ್ತಿರುವುದನ್ನು ಈ ಘಟನೆ ಮತ್ತೊಮ್ಮೆ ದೃಢಪಡಿಸುತ್ತದೆ ಎಂಬ ಗಂಭೀರ ಆರೋಪವನ್ನೂ ಅವರು ಮುಂದಿಟ್ಟರು. ಇಡಿ ಅವರಿಗೆ ಜೋಶಿ ರಿಪೋರ್ಟ್ ಮಾಡುತ್ತಿದೆಯಾ ಎಂಬ ಶಂಕೆ ಜನತೆಯಲ್ಲಿದೆ, ಎಂದು ಹೇಳಿದ್ದಾರೆ.

ಜನಔಷಧಿ ಕೇಂದ್ರಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಈ ನಿರ್ಧಾರದಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದರು.

ನಾನು ಹಿಂದೆಯೂ ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ಹೇಳಿದ್ದೆ. ಜನಔಷಧಿ ಕೇಂದ್ರಗಳು ಬೇಡವೆಂಬುದು ನನ್ನ ನಿಲುವು. ನಾವು ಸರ್ಕಾರದ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಉಚಿತವಾಗಿ ಒದಗಿಸುತ್ತಿದ್ದಾಗ, ಅದೇ ಆಸ್ಪತ್ರೆಯ ಒಳಗಡೆ ಔಷಧಿ ಮಾರಾಟ ಮಳಿಗೆ ಏಕೆ ಬೇಕು? ಎಂದು ಸಚಿವರು ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.

ಉದ್ದೇಶ ಒಳ್ಳೆಯದು, ಆದರೆ ಪ್ರಕ್ರಿಯೆ ಸಮರ್ಥವಲ್ಲ ಜನಔಷಧಿ ಕೇಂದ್ರಗಳ ಉದ್ದೇಶ ಒಳ್ಳೆಯದು, ಕಡಿಮೆ ದರದಲ್ಲಿ ಔಷಧಿ ದೊರಕುವಂತೆ ಮಾಡುವದು. ಆದರೆ ಇದು ಖಾಸಗಿ ಔಷಧಿ ಮಳಿಗೆಗಳಿಗೆ ಪೈಪೋಟಿ ನೀಡಬೇಕು,

.ಇದರಿಂದ ಜನರಿಗೆ ಉಪಯೋಗವಾಗಬಹುದು. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಔಷಧಿ ಸಿಗುತ್ತಿದ್ದರೆ, ಈ ಪೈಪೋಟಿಯ ಅಗತ್ಯವೇನು? ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಔಷಧಿ ಇಲ್ಲದಿರುವದನ್ನು ಒಪ್ಪಿಕೊಂಡ ಸಚಿವರು

ನಮ್ಮಲ್ಲಿ ಯಾವುದೇ ವ್ಯವಸ್ಥೆ ಸಂಪೂರ್ಣ ಪರ್ಪೆಕ್ಟ್ ಆಗಿಲ್ಲ ಅನ್ನುವುದು ಸತ್ಯ. ಆದರೆ ಅದನ್ನು ಸುಧಾರಿಸಬೇಕು ಎಂಬ ನಿಲುವು ಇದೆ. ಔಷಧಿ ಸಿಗದೆ ಜನರು ಖರ್ಚು ಮಾಡಿ ಖರೀದಿ ಮಾಡಬೇಕಾದ ಪರಿಸ್ಥಿತಿ ಉಂಟಾಗಬಾರದು, ಎಂದು ಸಚಿವರು ಹೇಳಿದರು.

ಔಷಧಿ ಸಿಗದಿದ್ದರೆ ಸರಕಾರದ ಗಮನಕ್ಕೆ ತರುವ ಜವಾಬ್ದಾರಿ ಸಾರ್ವಜನಿಕರದ್ದಾಗಿದೆ. ಆದರೆ ಇದಕ್ಕೆ ಪರಿಹಾರವಾಗಿ ಆಸ್ಪತ್ರೆಯ ಒಳಗೆ ಔಷಧಿ ಮಳಿಗೆ ತೆರೆಯುವುದು ಸರಿಯಾದ ಮಾರ್ಗವಲ್ಲ. ಬಯಲಿನಲ್ಲಿ, ಆಸ್ಪತ್ರೆ ಕಾಂಪೌಂಡ್ ಹೊರಗಡೆ ಇಂತಹ ಮಳಿಗೆ ಇರಬಹುದಾಗಿದೆ, ಎಂದು ಅವರು ಸಲಹೆ ನೀಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಈ ಕೇಂದ್ರಗಳನ್ನು ತಂದು ಸ್ಥಾಪಿಸಲಾಯಿತು. ಆದರೆ ಈಗಿನ ನಿರ್ಧಾರದ ಹಿಂದೆ ರಾಜಕೀಯ ದುರುದ್ದೇಶ ಇಲ್ಲ, ಎಂದು ಸಚಿವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande