ಒಳಮೀಸಲಾತಿ ಸಮೀಕ್ಷೆ ಸ್ವಯಂ ಘೋಷಣೆಗೆ ಅನ್‍ಲೈನ್ ಮೂಲಕ ಅವಕಾಶ
ಹೊಸಪೇಟೆ, 23 ಮೇ (ಹಿ.ಸ.) : ಆ್ಯಂಕರ್ : ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್‍ರವರ ಏಕಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ನಡೆಯತ್ತಿದ್ದು, ಒಂದು ವೇಳೆ ಕೈ ಬಿಟ್ಟು ಹೋದಂತಹ ಕುಟುಂಬದವರು ಆನ್‍ಲೈನ್ ಲಿಂಕ್ ಮೂಲಕ ಸ್ವಯಂ ಘೋಷಣೆ ಮಾಡಿ ಕೊಳ್ಳಲು
ಒಳಮೀಸಲಾತಿ ಸಮೀಕ್ಷೆ ಸ್ವಯಂ ಘೋಷಣೆಗೆ ಅನ್‍ಲೈನ್ ಮೂಲಕ ಅವಕಾಶ


ಹೊಸಪೇಟೆ, 23 ಮೇ (ಹಿ.ಸ.) :

ಆ್ಯಂಕರ್ : ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್‍ರವರ ಏಕಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ನಡೆಯತ್ತಿದ್ದು, ಒಂದು ವೇಳೆ ಕೈ ಬಿಟ್ಟು ಹೋದಂತಹ ಕುಟುಂಬದವರು ಆನ್‍ಲೈನ್ ಲಿಂಕ್ ಮೂಲಕ ಸ್ವಯಂ ಘೋಷಣೆ ಮಾಡಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ ಮನೆ ಮನೆ ಭೇಟಿ ನೀಡಿ ಸಂದರ್ಭದಲ್ಲಿ ತಮ್ಮ ಮಾಹಿತಿಯನ್ನು ನೀಡದವರು ನೇರವಾಗಿ ಆನ್‍ಲೈನ್ ಲಿಂಕ್ https://schedulecatesurvey.karnataka.gov.in/selfdeclaraion ರ ಮೂಲಕ ಮೇ.19 ರಿಂದ ಮೇ.28 ರವರೆಗೆ ಸ್ವಯಂಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆನ್‍ಲೈನ್‍ನಲ್ಲಿ ಸ್ವಯಂಘೋಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ https://youtu.be/VASEcMhL930 ಮೂಲಕ ತಿಳಿದುಕೊಳ್ಳಬಹುದು.

ಪರಿಶಿಷ್ಟಜಾತಿಯ ಬಾಂಧವರು ತಮ್ಮ ಜಾತಿ, ಉಪಜಾತಿ ವಿವರಗಳನ್ನು ದಾಖಲಾತಿಗಳನ್ನು ಉಪಯೋಗಿಸಿಕೊಳ್ಳಲು ಸ್ವಯಂ ದೃಢೀಕರಣ ಮಾಡಿಕೊಳ್ಳಬಹುದು. ಪರಿಶಿಷ್ಟ ಜಾತಿಗೆ ಸೇರಿದ ಜನಾಂಗದವರು ತಮ್ಮ ಮೂಲ ಜಾತಿಯನ್ನು ತಪ್ಪದೇ ಆನ್‍ಲೈನ್ ಮುಖಾಂತರ ಸ್ವಯಂ ಘೋಷಣೆ ಮಾಡಿಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande