ಧಾರವಾಡ ರೇಲ್ವೆ ನಿಲ್ದಾಣ ಉದ್ಘಾಟನೆ : ರಾಜ್ಯಪಾಲರು ಭಾಗಿ
ಧಾರವಾಡ, 22 ಮೇ (ಹಿ.ಸ.) : ಆ್ಯಂಕರ್ : ಧಾರವಾಡದಲ್ಲಿ ಅಮೃತ ಯೋಜನೆಯಡಿ ನವೀಕರಿಸಿದ ರೈಲು ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದರು. ಈ ಸಂದರ್ಭ ಅವರು, “ದೇಶದ ನಿರಂತರ ಅಭಿವೃದ್ಧಿಗೆ ಸುಗಮ ಹಾಗೂ ಸಂಘಟಿತ ರೈಲು ವ್ಯವಸ್ಥೆ ಅಗತ್ಯ” ಎಂದು ಹೇಳಿದರು.
Inauguration


ಧಾರವಾಡ, 22 ಮೇ (ಹಿ.ಸ.) :

ಆ್ಯಂಕರ್ : ಧಾರವಾಡದಲ್ಲಿ ಅಮೃತ ಯೋಜನೆಯಡಿ ನವೀಕರಿಸಿದ ರೈಲು ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದರು.

ಈ ಸಂದರ್ಭ ಅವರು, “ದೇಶದ ನಿರಂತರ ಅಭಿವೃದ್ಧಿಗೆ ಸುಗಮ ಹಾಗೂ ಸಂಘಟಿತ ರೈಲು ವ್ಯವಸ್ಥೆ ಅಗತ್ಯ” ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಧಾರವಾಡ ಸೇರಿದಂತೆ 103 ರೇಲ್ವೆ ನಿಲ್ದಾಣಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.

ಕರ್ನಾಟಕದ ಧಾರವಾಡ, ಬಾಗಲಕೋಟೆ, ಮುನಿರಾಬಾದ್, ಗದಗ ಮತ್ತು ಗೋಕಾಕ್ ರಸ್ತೆಯ ನಿಲ್ದಾಣಗಳು ಇದರಲ್ಲಿ ಸೇರಿವೆ.

ಭಾರತೀಯ ರೈಲ್ವೆ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬು. ರೈಲ್ವೆ ಇಲಾಖೆಯು ಮಾಲಿನ್ಯ ಮುಕ್ತ, ಆಧುನಿಕ ಸೇವೆಗಳನ್ನು ಒದಗಿಸುವತ್ತ ಹೆಜ್ಜೆ ಇಡುತ್ತಿದೆ ಎಂದು ರಾಜ್ಯಪಾಲರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಹುಬ್ಬಳ್ಳಿ-ಧಾರವಾಡ ಮಹಾಪೌರ ರಾಮಪ್ಪ ಬಡಿಗೇರ, ರೈಲ್ವೆ ಐಜಿಪಿ ಆರ್.ಎಸ್.ಪಿ. ಸಿಂಗ್, ನೈಋತ್ಯ ರೈಲ್ವೆ ವಲಯದ ವ್ಯವಸ್ಥಾಪಕ ಮುಕುಲ ಸರಣ ಮಾತುರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande