ಶ್ರೀ ಗವಿಸಿದ್ಧೇಶ್ವರ ಜಾತ್ರೆ : ಸ್ವಯಂ ಸೇವಕರಾಗಲು ಅವಕಾಶ
ಕೊಪ್ಪಳ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಈ ನಾಡಿನ ಜನರ ಭಕ್ತಿಯ ನಿತ್ಯೋತ್ಸವ. ಜಾತ್ರಾ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ ಪ್ರತಿವರ್ಷ ವಿನೂತನ ಕಾರ್ಯಯೋಜನೆ ರೂಪಿಸಿ ಅದನ್ನು ಅನುಷ್ಠಾನ ಗೂಳಿಸುತ್ತಿರುವುದು ತಮಗೆಲ್ಲ ವೇದ್ಯವಾಗಿದೆ. ಜಾ
ಶ್ರೀ ಗವಿಸಿದ್ಧೇಶ್ವರ ಜಾತ್ರೆ : ಸ್ವಯಂ ಸೇವಕರಾಗಲು ಅವಕಾಶ


ಕೊಪ್ಪಳ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಈ ನಾಡಿನ ಜನರ ಭಕ್ತಿಯ ನಿತ್ಯೋತ್ಸವ. ಜಾತ್ರಾ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ ಪ್ರತಿವರ್ಷ ವಿನೂತನ ಕಾರ್ಯಯೋಜನೆ ರೂಪಿಸಿ ಅದನ್ನು ಅನುಷ್ಠಾನ ಗೂಳಿಸುತ್ತಿರುವುದು ತಮಗೆಲ್ಲ ವೇದ್ಯವಾಗಿದೆ. ಜಾತ್ರಾ ಮಹೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಗಣನೀಯವಾಗುತ್ತಿರುವ ಹಿನ್ನಲೆಯಲ್ಲಿ ಸ್ವ-ಇಚ್ಛೆಯಿಂದ ಸೇವೆಸಲ್ಲಿಸುವ ಆಸಕ್ತ ಭಕ್ತಗಣ ಹೆಸರು ನೊಂದಾಯಿಸಲು ಕೋರಲಾಗಿದೆ.

ನೊಂದಾಯಿಸುವ ಮೊಬೈಲ್ ಸಂಖ್ಯೆ: 9844634990

ಸೇವೆ ಸಲ್ಲಿಸುವ ವಿಭಾಗಗಳು

1) ಸ್ವಚ್ಛತಾ ಸೇವೆ:

1. ಮಹಾರಥೋತ್ಸವದ ಮೈಧಾನ,

2. ಶ್ರೀ ಮಠದ ರಸ್ತೆ

3. ಮಹಾದಾಸೋಹದ ರಸ್ತೆ

4. ಮಠದ ಆವರಣ

5. ಮಹಾದಾಸೋಹ ಆವರಣ

6. ಕೈಲಾಸ ಮಂಟಪ

7. ಪ್ರಸಾದ ತಯಾರಿಸುವ ಸ್ಥಳ

8. ಜಾತ್ರಾ ಅಂಗಡಿ ಸ್ಥಳ

2) ಮಹಾದಾಸೋಹ ಸೇವೆ:

1. ತರಕಾರಿ ಹೆಚ್ಚುವುದು

2. ಪ್ರಸಾದ ತಯಾರಿಸುವುದು

3. ಪ್ರಸಾದ ಬಡಿಸುವುದು

4. ಅಡುಗೆ ಸಾಮಾನು ತೊಳೆಯುವುದು.

5. ರೊಟ್ಟಿ ಸಂಗ್ರಹಿಸುವುದು

6. ಕಟ್ಟಿಗೆ ಹೊರುವುದು(ಪ್ರಸಾದತಯ್ಯಾರಿಸುವ ಸ್ಥಳಕ್ಕೆ ತರುವುದು)

7. ಕಟ್ಟಿಗೆ ಒಡೆಯುವುದು

3) ಶಿಸ್ತು ಕರ್ತವ್ಯ ಸೇವೆ:

1) ಜಾತ್ರ ಆವರಣದಲ್ಲಿ ಶಿಸ್ತು ಕಾಪಾಡುವುದು

2) ಮಹಾದಾಸೋಹದಲ್ಲಿ ಶಿಸ್ತು ಕಾಪಾಡುವುದು

3) ವಾಹನಗಳ ನಿಲುಗಡೆ

4) ಯಾತ್ರಿಗಳಿಗೆ ಸಣ್ಣಪುಟ್ಟ ಅಂಗಡಿಗಳಿಂದ ತೊಂದರೆಯಾಗದಂತೆ ನೋಡುವುದು.

5) ಜಾತ್ರಾ ಅಂಗಡಿಗಳ ಶಿಸ್ತು ಕಾಪಾಡುವುದು.

4) ದಾಸ್ತಾನು ಸಂಗ್ರಹಣೆ ಸೇವೆ:

1) ದವಸದಾನ್ಯ ಸಂಗ್ರಹಿಸುವಲ್ಲಿ ಸಹಾಯ ಮಾಡುವುದು.

5) ಇತರ ಸೇವೆ :

1) ಶ್ರೀಮಠವು ಒಪ್ಪಿಸುವ ಯಾವುದೇ ಸೇವೆಗೆ ಸಿದ್ಧರಿರುವುದು.

ಈ ಮೇಲ್ಕಾಣಿಸಿದ ಸೇವೆಗಳಿಗೆ ಸಿದ್ಧವಿರುವ ಆಸಕ್ತಉರು/ಸಂಘ ಸಂಸ್ಥೆ/ ಇಲಾಖೆಯ ಭಕ್ತರು ಮಾಹಿತಿಯನ್ನು ಕಳುಹಿಸಬೇಕಾಗಿ ಕೋರಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande