ವಚನಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಶಕ್ತಿಯನ್ನು ಹೊಂದಿವೆ
ಗದಗ, 14 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಚನಗಳು ಜೀವನದ ಒಳನೋಟ, ಮಕ್ಕಳಿಗೆ ಜ್ಞಾನಪೂರ್ಣ ಸಂವೇದನಾಶೀಲ ವ್ಯಕ್ತಿಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿವೆ. ವಚನಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಎಲ್ಲಾ ಅಂಶಗಳನ್ನು ಕಲಿಸುತ್ತವೆ ಎಂದು ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.
ಫೋಟೋ


ಗದಗ, 14 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಚನಗಳು ಜೀವನದ ಒಳನೋಟ, ಮಕ್ಕಳಿಗೆ ಜ್ಞಾನಪೂರ್ಣ ಸಂವೇದನಾಶೀಲ ವ್ಯಕ್ತಿಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿವೆ. ವಚನಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಎಲ್ಲಾ ಅಂಶಗಳನ್ನು ಕಲಿಸುತ್ತವೆ ಎಂದು ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2775 ಶಿವಾನುಭವದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ತೋಂಟದಾರ್ಯ ಮಠದ ಶಿವಾನುಭವ ವೈಶಿಷ್ಟ್ಯತೆಯಿಂದ ತುಂಬಿದೆ. ಶಿವಾನುಭವ ಸಾಹಿತ್ಯ, ಸಂಗೀತ, ಕಲೆ ಅನೇಕ ಔಚಿತ್ಯಪೂರ್ಣ ಕಾರ್ಯಕ್ರಮಗಳನ್ನು ಊಣಬಡಿಸುತ್ತಿದೆ. ಮಕ್ಕಳು ಜಗ ಬೆಳಗುವ ದೀಪಗಳು. ಇಂದು ಮಕ್ಕಳ ಬಗ್ಗೆ ಶಿವಾನುಭವ ಕಾರ್ಯಕ್ರಮ. ಮಕ್ಕಳು ಬೆಳೆಯುವಾಗಲೇ ಅವರು ಸಿರಿ ಕಾಣಬಹುದು. ಮಕ್ಕಳೆಂದರೆ ತಾಯಿಗೆ ಎಲ್ಲಿಲ್ಲದ ಪ್ರೀತಿ .ಎಂದು ಮಕ್ಕಳು ಮತ್ತು ವಚನಗಳನ್ನು ಉಲ್ಲೇಖಿಸಿ ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ರಾಜೇಂದ್ರ ಗಡಾದ ಮಾತನಾಡಿ, ಮಕ್ಕಳು ಭವಿಷ್ಯದ ಕನಸುಗಳು, ಮಕ್ಕಳನ್ನು ಸರಿದಾರಿಗೆ ತರುವ ಸಂಸ್ಕೃತಿ ಇಂಥ ಶಿವಾನುಭವದಿಂದ ಸಾಧ್ಯ. ಸತ್ಯ ಅಹಿಂಸೆ ನ್ಯಾಯ ಸಮಾನತೆ ನಂಬಿಕೆ ಇವುಗಳನ್ನು ಶರಣರು ಹಾಕಿಕೊಟ್ಟರು. ಈಗಿನ ಮಕ್ಕಳು ವಿದ್ಯಾವಂತರು ಆದರೆ ಅವರು ವಿದೇಶದಲ್ಲಿರುತ್ತಾರೆ. ಇವರ ತಂದೆ ತಾಯಿ ವೃದ್ಧಾಶ್ರಮದಲ್ಲಿರುತ್ತಾರೆ.

ಇಂದಿನ ಮಕ್ಕಳು ಸಾಕಷ್ಟು ವಿದ್ಯಾವಂತರು ಆದರೆ ವಿಚಾರವಂತರಲ್ಲ. ವಚನಗಳಲ್ಲಿರುವ ಮೌಲ್ಯಗಳನ್ನು ಮಕ್ಕಳು ಮನಃಪಟಲದಲ್ಲಿ ಬಿತ್ತಬೇಕು. ಮಕ್ಕಳಿಗೆ ತಿಳಿಯುವಂತ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಹಾಕಬೇಕು.

ಸತ್ಯವೇ ನಮ್ಮ ತಾಯಿ ತಂದೆ ಬಂಧು ಬಳಗ, ಸತ್ಯ ವಾಕ್ಯಕೆ ತಪ್ಪಿ ನಡೆದರೆ, ಮೆಚ್ಚನಾ ಪರಮಾತ್ಮನು. ಜಗತ್ತಿಗೆ ಉತ್ತಮ ನಾಗರಿಕರಿಕರಿಗಿಂತ, ಉತ್ತಮ ಮನುಷ್ಯನ ಅವಶ್ಯಕತೆ ಇದೆ ಎಂದು ತುಂಬಾ ಸುಂದರವಾಗಿ ಮಾತನಾಡಿದರು.

ಡಿ ಎಸ್ ಕರ್ಕಿ ಪ್ರಶಸ್ತಿ ಪಡೆದ ಯುವ ಕವಿ ರಂಗಕರ್ಮಿ ನಟ ನಿರ್ದೇಶಕರಾದ ರಣತೂರಿನ ಸಂತೋಷ ಅಂಗಡಿ ಯವರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಮತ್ತು ಕುಮಾರ ಹಿರೇಮಠ ಇವರು ವಚನ ಸಂಗೀತ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಶ್ರಾವಣಿ ಡಿ ಪಾಟೀಲ ಹಾಗೂ ವಚನಚಿಂತನ ಅದಿತಿ ಕೆ ಇಂಗಳಳ್ಳಿ ಅವರು ಪ್ರಸ್ತುತ ಪಡಿಸಿದರು. ದಾಸೋಹ ಸೇವೆಯನ್ನು ಕೆ ಎಸ್ ನಾಗರಾಜ ಸೊಂಡುರ. ಇವರ ಸಹೋದರಿಯರಾದ ಶ್ರೀಮತಿ ಸಾವಂತ್ರವ್ವ ಪಿಳ್ಳೆ ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಸೋಮಶೇಖರ ಪುರಾಣಿಕ ಸ್ವಾಗತಿಸಿದರು. ಶಿವಾನುಭವ ಸಮಿತಿಯ ಚೇರ್ಮನ್ ಐ ಬಿ ಬೆನಕೊಪ್ಪ ಪರಿಚಯಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande