
ಬೆಂಗಳೂರು, 09 ನವೆಂಬರ್ (ಹಿ.ಸ.) :
ಆ್ಯಂಕರ್ : ಕಲ್ಯಾಣ ಕರ್ನಾಟಕ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕಾಂಗ್ರೆಸ್ ಸರ್ಕಾರ ಸಕಾಲಕ್ಕೆ ಗೇಟ್ ಅಳವಡಿಸದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ 2ನೇ ಬೆಳೆಗೆ ನೀರು ಇಲ್ಲದಂತಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ರೈತರ ಹಿತ ಕಾಪಾಡಬೇಕಾಗಿದ್ದ ಸಿದ್ದರಾಮಯ್ಯ ನವರ ಸರ್ಕಾರ ಗೇಟ್ ದುರಸ್ತಿ ಮಾಡದೆ ಮೂರು ಜಿಲ್ಲೆಗಳ ರೈತರಿಗೆ ದ್ರೋಹ ಬಗೆದಿದೆ.
ಸಿದ್ದರಾಮಯ್ಯನವರೇ, ಅನ್ನದಾತರು ಎಂದರೇ ನಿಮಗ್ಯಾಕೆ ಇಷ್ಟೊಂದು ತಾತ್ಸಾರ ಎಂದು ಬಿಜೆಪಿ ಪ್ರಶ್ನಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa