
ಬ್ರಸೋವ್, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ರೊಮೇನಿಯಾದ ನಡುವೆ ಹೂಡಿಕೆ, ಕೈಗಾರಿಕಾ ಸಹಕಾರ ಹಾಗೂ ತಾಂತ್ರಿಕ ಪಾಲುದಾರಿಕೆಯನ್ನು ಬಲಪಡಿಸಲು ಕರೆ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರು ಬುಧವಾರ ಬ್ರಸೋವ್ನಲ್ಲಿ ನಡೆದ ಭಾರತ–ರೊಮೇನಿಯಾ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡಿದರು.
ಅವರು ರೊಮೇನಿಯನ್ ಕೈಗಾರಿಕೋದ್ಯಮಿಗಳನ್ನು “ಮೇಕ್ ಇನ್ ಇಂಡಿಯಾ” ಮತ್ತು ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಗಳ ಅಡಿಯಲ್ಲಿ ಭಾರತದ ಉತ್ಪಾದನೆ ಹಾಗೂ ನಾವೀನ್ಯತೆ ವಲಯಗಳಲ್ಲಿ ಸಕ್ರಿಯ ಪಾಲ್ಗೊಳ್ಳಲು ಆಹ್ವಾನಿಸಿದರು.
ಈ ಶೃಂಗಸಭೆಯನ್ನು ಬ್ರಸೋವ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಶ್ರಯದಲ್ಲಿ, ಬುಚಾರೆಸ್ಟ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಕೈಗಾರಿಕಾ ಪ್ರಚಾರ ಮತ್ತು ಆಂತರಿಕ ವ್ಯಾಪಾರ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಆಟೋಮೊಬೈಲ್, ರಕ್ಷಣಾ ಉತ್ಪಾದನೆ, ನವೀಕರಿಸಬಹುದಾದ ಇಂಧನ, ಏರೋಸ್ಪೇಸ್, ಎಂಜಿನಿಯರಿಂಗ್ ಸೇವೆಗಳು ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ವಲಯಗಳ ಉದ್ಯಮ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದರು.
“ಭಾರತದಲ್ಲಿ ವ್ಯಾಪಾರ ಅವಕಾಶಗಳು” ಎಂಬ ವಿಷಯದಡಿ ನಡೆದ ಪ್ರಸ್ತುತಿಗಳಲ್ಲಿ, ಭಾರತದ ನೀತಿ ಸುಧಾರಣೆಗಳು, ಹೂಡಿಕೆ ಪ್ರೋತ್ಸಾಹಗಳು ಮತ್ತು ಕೈಗಾರಿಕಾ ಕಾರಿಡಾರ್ಗಳ ರಾಜ್ಯ ಮಟ್ಟದ ಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.
ಸಮ್ಮೇಳನದ ವೇಳೆ ಭಾರತೀಯ ಮತ್ತು ರೊಮೇನಿಯನ್ ಕಂಪನಿಗಳ ನಡುವೆ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa