ಕೃಷಿ ಚಟುವಟಿಕೆಯಲ್ಲಿ ತರುವ ಬದಲಾವಣೆ ಜಗದ ದಿಕ್ಕು ಬದಲಿಸುತ್ತದೆ : ಸಜ್ಜನ್
ಕೊಪ್ಪಳ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಕೃಷಿ ಚಟುವಟಿಕೆ ವಾಸ್ತವಾಗಿ ಬಹಳ ಸರಳವಾಗಿದೆ ಆದರೆ ನಾವು ಅದನ್ನು ದೊಡ್ಡ ವಿಜ್ಞಾನವಾಗಿಸಲು ಹೊರಟಿದ್ದೇವೆ, ಯಾವಾಗ ನಾವು ರಸಾಯನ ಬಿಡುತ್ತೇವೆ ಆಗ ಬದಲಾವಣೆ ಬರುತ್ತದೆ ಎಂದು ಗಿಡ ಮರ ಆಧಾರಿತ ಕೃಷಿ ಪಂಡಿತ ಹುಲಿಕೆರೆ ವಿಶ್ವೇಶ್ವರ ಸಜ್ಜನ ಹೇಳಿದರು. ಅವರು
ಕೃಷಿ ಚಟುವಟಿಕೆಯಲ್ಲಿ ತರುವ ಬದಲಾವಣೆ ಜಗದ ದಿಕ್ಕು ಬದಲಿಸುತ್ತದೆ : ಸಜ್ಜನ್


ಕೃಷಿ ಚಟುವಟಿಕೆಯಲ್ಲಿ ತರುವ ಬದಲಾವಣೆ ಜಗದ ದಿಕ್ಕು ಬದಲಿಸುತ್ತದೆ : ಸಜ್ಜನ್


ಕೃಷಿ ಚಟುವಟಿಕೆಯಲ್ಲಿ ತರುವ ಬದಲಾವಣೆ ಜಗದ ದಿಕ್ಕು ಬದಲಿಸುತ್ತದೆ : ಸಜ್ಜನ್


ಕೃಷಿ ಚಟುವಟಿಕೆಯಲ್ಲಿ ತರುವ ಬದಲಾವಣೆ ಜಗದ ದಿಕ್ಕು ಬದಲಿಸುತ್ತದೆ : ಸಜ್ಜನ್


ಕೃಷಿ ಚಟುವಟಿಕೆಯಲ್ಲಿ ತರುವ ಬದಲಾವಣೆ ಜಗದ ದಿಕ್ಕು ಬದಲಿಸುತ್ತದೆ : ಸಜ್ಜನ್


ಕೊಪ್ಪಳ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಕೃಷಿ ಚಟುವಟಿಕೆ ವಾಸ್ತವಾಗಿ ಬಹಳ ಸರಳವಾಗಿದೆ ಆದರೆ ನಾವು ಅದನ್ನು ದೊಡ್ಡ ವಿಜ್ಞಾನವಾಗಿಸಲು ಹೊರಟಿದ್ದೇವೆ, ಯಾವಾಗ ನಾವು ರಸಾಯನ ಬಿಡುತ್ತೇವೆ ಆಗ ಬದಲಾವಣೆ ಬರುತ್ತದೆ ಎಂದು ಗಿಡ ಮರ ಆಧಾರಿತ ಕೃಷಿ ಪಂಡಿತ ಹುಲಿಕೆರೆ ವಿಶ್ವೇಶ್ವರ ಸಜ್ಜನ ಹೇಳಿದರು. ಅವರು ತಾಲೂಕಿನ ಕಾತರಕಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ದೇವತೆ ಶ್ರೀ ದ್ಯಾಮಮ್ಮದೇವಿಯ ಜಾತ್ರಾ ಮಹೋತ್ಸವದ ಎರಡನೇ ದಿನ ಶನಿವಾರ ಸಂಜೆ ನಡೆದ ಧಾರ್ಮಿಕ ಮತ್ತು ಕೃಷಿ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಲೆನಾಡಲ್ಲಿ ಕೇವಲ 20ರಷ್ಟಿರುವ ಸಾರ್ವಜನಿಕ ಖಾಸಗಿ ಜಮೀನಲ್ಲಿ ಬೆಳೆದ ಬೆಳೆ ಕಟಾವಿಗೆ ಉತ್ತರ ಕರ್ನಾಟಕ ಭಾಗದ 80ರಷ್ಟು ಖಾಸಗಿ ಜಮೀನು ಹೊಂದಿರುವ ಜನ ಕೂಲಿಗಾಗಿ ಗುಳೆ ಹೋಗುವುದನ್ನು ನೋಡಿ ನನಗೆ ದಿಗ್ಭ್ರಮೆಯಾಗಿದೆ, ಕಾರಣ ನಮ್ಮ ಕೃಷಿಯ ಪದ್ಧತಿಯಲ್ಲಿರುವಂತಹ ವ್ಯತ್ಯಾಸ ಹಾಗೂ ಅವಲಂಬನೆ ಪದ್ದತಿ, ನೆರಳೆ, ಬೆಟ್ಟದ ನೆಲ್ಲಿಕಾಯಿ ಮತ್ತು ಪೇರಲ ಹಣ್ಣುಗಳನ್ನು ಬೆಳೆದರೆ ಏನೂ ಮಾಡದೇ ಹಣಗಳಿಸಿಕೊಡುವ ಮತ್ತು ಅತ್ಯಂತ ಪೌಷ್ಟಿಕಾಂಶ ಇರುವ ಹಣ್ಣುಗಳಾಗಿವೆ, ಆದ್ದರಿಂದ ನಾನು ಹೊಸ ಕೃಷಿ ಪದ್ಧತಿ ಅಂದ್ರೆ ಹಳೆಯದನ್ನು ಮತ್ತೆ ಪಾಲಿಸಿ ಕೆಲಸ ಕಡಿಮೆ ಮಾಡುವದು, ಅಂದ್ರೆ ಮಾಡುವ ಬದಲು ಮಾಡದಿರುವ ಕಡೆಗೆ ಕೃಷಿ ಎಂಬ ಘೋಷವ್ಯಾಖ್ಯೆ ದೊಂದಿಗೆ ಸರಕಾರದ ಹಲವು ಯೋಜನೆಗಳ ಸದುಪಯೋಗ ಪಡೆದುಕೊಂಡು ರೈತರು ಉದ್ಧಾರ ಆಗಬೇಕು. ನಾವು ಕಾರ್ಪೋರೆಟ್ ಜಗತ್ತಿನ ಬಲೆಗೆ ಬಿದ್ದಿದ್ದೇವೆ, ನನ್ನ ಬೆಳೆ, ನನ್ನ ಬೆಲೆ ನನ್ನದೇ ಮಾರಾಟ ಎಂದು ಮಾಡಿಕೊಂಡಾಗ ನಿಶ್ಚಿತವಾಗಿ ಶ್ರೀಮಂತರಾಗುತ್ತೇವೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸೋಮರಡ್ಡಿ ಅಳವಂಡಿ ಮಾತನಾಡಿ, ಜಾತ್ರೆಯ ಬದಲು ಇದೊಂದು ಸಾಹಿತ್ಯ ಸಮ್ಮೇಳನ ನೋಡಿದ ಭಾಸವಾಗುತ್ತಿದೆ ವೇದಿಕೆಯಲ್ಲಿರುವಂತಹ ಎಲ್ಲಾ ಸ್ಥರದ ಜನ ಬಂದು ಇಲ್ಲಿನ ಜನರಿಗೆ ಅದ್ಭುತವಾದ ಮಾಹಿತಿ ಕೊಟ್ಟಿದ್ದಾರೆ. ಇಂತಹ ವೇದಿಕೆ ನಿರ್ಮಾಣ ಮಾಡಲು ಎಷ್ಟು ಸಮಯ ತೆಗೆದುಕೊಂಡಿದ್ದಾರೆ ಎಷ್ಟು ಕಷ್ಟಪಟ್ಟಿದ್ದಾರೆ ಅದಕ್ಕಾಗಿ ಅವರಿಗೊಂದು ಅಭಿನಂದನೆ ಸಲ್ಲಿಸುತ್ತಾ. ಜಗತ್ತು ಕೆಟ್ಟಿದೆ ಅಂತ ಭಾವಿಸಿದರೆ ಅದಕ್ಕೆ ಕಾರಣ ಕೇವಲ ಮನುಷ್ಯ ಮಾತ್ರ. ಈಗಲೂ ಸಹ ಪರಿಸರ, ಸೃಷ್ಟಿ, ಪಕ್ಷಿ ಪ್ರಾಣಿ ಪ್ರಪಂಚ ಅತ್ಯಂತ ನಿಷ್ಕಲ್ಮಶ ಲವಾಗಿ ಉಳಿದು ಸಹಜವಾಗಿ ಬದುಕುತ್ತಿರುವದರಿಂದ ಈಗಲೂ ಪ್ರಪಂಚ ಉಳಿದಿದೆ, ಅದೇ ಮನುಷ್ಯನ ರೀತಿ ಅವು ಆಗಿದ್ದರೆ ಇಂದು ಪ್ರಪಂಚವೇ ಎರಡು ಮೂರು ಬಾರಿ ಪ್ರಳಯ ಆಗಿರುತ್ತಿತ್ತು. ನಾವು ಆಧುನಿಕ ಜೀವನಶೈಲಿಗೆ ಬಿದ್ದು ಕೃಷಿಗೆ ಮತ್ತು ಬೆಳೆಗೆ ಬರೀ ರಸಾಯನಿಕ ಸಿಂಪರಣೆ ಮಾಡಿ ಬದುಕು, ಭೂಮಿ ಎರಡಕ್ಕೂ ವಿಷ ಹಾಕಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮುಂಡರಗಿ ಅನ್ನದಾನೇಶ್ವರ ಮಠದ ನಾಡೋಜ ಡಾಕ್ಟರ್ ಅನುದಾನ ಸ್ವಾಮಿಗಳು ಮಹಾರಾಷ್ಟ್ರದ ಸಾಂಗ್ಲಿಯ ಜತ್ತ ಬಾಲಗಾವ್ ಗುರುದೇವ ಆಶ್ರಮದ ಪೂಜ್ಯ ಅಮೃತಾನಂದ ಮಹಾಸ್ವಾಮಿಗಳು ಇದೇ ಸಿಂದಗಿ ಕಪ್ಪತಮಠದ ಪೂಜ್ಯ ಚಿದಾನಂದ ಮಹಾಸ್ವಾಮಿಗಳು ಮೈನಳ್ಳಿ ಬಿಕನಹಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಚೈತನ್ಯಾನಂದ ಮಹಾಸ್ವಾಮಿಗಳು ಶ್ರೀ ಶಂಕಚರಾಚಾರ್ಯ ಮಠದ ಶ್ರೀ ಶಿವರಾಮ ಕೃಷ್ಣಾನಂದರು ಹುಬ್ಬಳ್ಳಿಯ ಶ್ರೀನಿವಾಸ್ ಶ್ರೀಪಾದ ಭಟ್ ಜೋಶಿ ಖಾತರಿಕೀಯ ಶ್ರೀ ಮೋಹನ್ ಪುರೋಹಿತ ಶ್ರೀ ಗವಿಸಿದ್ದಯ್ಯ ಹಿರೇಮಠ ಪೂಜ್ಯರು ಸಾನಿಧ್ಯ ವಹಿಸಿ ಅನೇಕ ವಿಷಯಗಳ ಕುರಿತು ಬೆಳಕು ಚೆಲ್ಲಿದರು‌. ಈ ಸಂದರ್ಭದಲ್ಲಿ ಮಾಜಿ ಜಿ. ಪಂ. ಅಧ್ಯಕ್ಷ ಹೆಚ್. ಎಲ್. ಹಿರೇಗೌಡ್ರ, ಡಾ. ಶ್ರೀನಿವಾಸ್ ಹ್ಯಾಟಿ, ರಾಬಕೊವಿ ಮಾಜಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಸುರೇಶ್ ಮಾದಿನೂರ್ ಶಂಕ್ರಯ್ಯ ಅಬ್ಬಿಗೇರಿಮಠ, ಅಶೋಕ್ ಬಳ್ಳಾರಿ, ಕೊಟ್ರಯ್ಯ ಅಬ್ಬಿಗೇರಿ, ಶಂಕ್ರಗೌಡ್ರ ಹಿರೇಗೌಡ್ರ, ಮಲ್ಲಣ್ಣ ಗುಗ್ರಿ, ಕೃಷ್ಣಪ್ಪ ಬಟಗೇರಿ, ಡಾ. ಸುರೇಶ ಹುರಕಡ್ಲಿ, ವಿಶ್ವನಾಥ ಕಂಪ್ಲಿ, ಮಂಜುನಾಥ ಮೇಟಿ, ನಾಗರಾಜ ಹುರಕಡ್ಲಿ, ಈಶ್ವರಗೌಡ್ರ ನಾಗನಗೌಡ್ರ, ಬಸವರಾಜ ಹಿರೇಮಠ, ಸುಭಾಸ ಬೈರಣ್ಣ, ಈಶಪ್ಪ ಹೊಳೆಯಪ್ಪನವರ, ನಾಯಕಪ್ಪ ತಳವಾರ, ತಿಪ್ಪಣ್ಣ ವಡ್ಡಿನ, ಸಿದ್ರಾಮಪ್ಪ ಗೊಶನಗೌಡ್ರ, ಜಗದೀಶ ಪೋಲಿಸಪಾಟೀಲ್, ಬಸವರಾಜ ಹುಬ್ಬಳ್ಳಿ, ಯೊಗಾನಂದ ಹೊಳೆಯಪ್ಪನವರ, ವೆಂಕಪ್ಪ ಕೊರಗಲ್, ಸುರೇಶ ತಳವಾರ, ಗವಿಸಿದ್ಧಪ್ಪ ಅರಿಕೇರಿ, ಸಂಗಪ್ಪ ಕನಕಲ, ಯರಿಯಪ್ಪಗೌಡ, ರಾಜು ಬೈರಣ್ಣ, ಶಂಕ್ರಪ್ಪ ಹುರಕಡ್ಲಿ , ಸಂಜೀವರೆಡ್ಡಿ ಮೇಟಿ, ಯರಿಯಪ್ಪ ವಾಲಿ, ಮೈಲಪ್ಪ ದೇವರಮನಿ, ಮಲ್ಲಪ್ಪ ಮ್ಯಾಗಳಮನಿ ಸೇರಿದಂತೆ ಅನೇಕರು ಇದ್ದರು. ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಸದಾ ಸಂಚಾರ ಕಲಾತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.

ಮೆರವಣಿಗೆಯ ಸೊಬಗು: ಎರಡನೇ ದಿನ ಸೋಮವಾರ ಬೆಳಿಗ್ಗೆ ದ್ಯಾಮಮ್ಮ ದೇವಿ ಮೂರ್ತಿಯನ್ನು ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಉತ್ಸವ ಹೊರಡಿಸಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕೀಲು ಕುದುರೆ ಗೊಂಬೆಗಳು, ಕರಡಿ ಮಜಲು, ಬಾಜಾ ಭಜಂತ್ರಿ, ಬ್ರಾಸ್ ಬ್ಯಾಂಡ್, ಡೊಳ್ಳು ವಾದ್ಯ ಮೇಳಗಳೊಂದಿಗೆ ಸಂಭ್ರಮದಿಂದ ಮೆರವಣಿಗೆ ನಡೆಯಿತು. ಉತ್ಸವ ಹೊರಡುವಾಗ ತಮ್ಮ ಮನೆಯ ಮುಂದೆ ಬರುವ ದೇವಿಯನ್ನು ಮನೆಯ ಹೆಣ್ಣು ಮಕ್ಕಳು ಸೇರಿ ಎಲ್ಲರೂ ನೀರು ಹಾಕಿ ಸ್ವಾಗತಿಸಿ ಆರತಿ ಎತ್ತಿ ಭಕ್ತಿಯಿಂದ ನಮಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande