
ಬೆಂಗಳೂರು, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಬಿಜೆಪಿ ನಾಯಕರ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರು ಆರ್ಎಸ್ಎಸ್ನ ಗುಲಾಮರು ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಿನಿಂದ ಪಥಸಂಚಲನದ ಬಗ್ಗೆ ಜಟಾಪಟಿ ನಡೆಯುತ್ತಿದೆ. ನಿನ್ನೆ ಮಾತ್ರ ಆರ್ಎಸ್ಎಸ್ ಮುಖ್ಯಸ್ಥರು ಮಾತನಾಡಿದ್ದಾರೆ, ಆದರೆ ಬಿಜೆಪಿಯವರು ಒಂದು ತಿಂಗಳಿಂದಲೇ ಬೀದಿಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಆರ್ಎಸ್ಎಸ್ ಪರ ಮಾತನಾಡದಿದ್ದರೆ ಅವರಿಗೆ ಟಿಕೆಟ್ ಸಿಗಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ನೇಮಕ ಇನ್ನೂ ಆಗಿಲ್ಲ, ಯಾಕೆ ಗೊತ್ತಾ? ಆರ್ಎಸ್ಎಸ್ ಅನುಮತಿ ಕೊಟ್ಟಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಆರ್ಎಸ್ಎಸ್ ಅನ್ನು ಇಡೀ ಸಮಾಜ ಒಪ್ಪಿಕೊಂಡಿದೆ ಎನ್ನುವ ಭಾವನೆ ತಪ್ಪು. ಸರ್ಕಾರಿ ಜಾಗದಲ್ಲಿ ಚಟುವಟಿಕೆ ನಡೆಸಲು ಅನುಮತಿ ಬೇಕು. ನಾವು ಆರ್ಎಸ್ಎಸ್ನ ಆಳು ಮಕ್ಕಳು ಅಲ್ಲ. ದೊಡ್ಡ ಸಂಘಟನೆ ಅಂತಾರೆ, ಆದರೆ ಇನ್ನೂ ನೋಂದಣಿ ಆಗಿಲ್ಲ. ಪಥಸಂಚಲನ ಮಾಡಲು ಅನುಮತಿ ಪಡೆಯಬೇಕು, ನೋಂದಣಿ ಇಲ್ಲದೆ ಸಂಸ್ಥೆಗೆ ಅನುಮತಿ ಹೇಗೆ ನೀಡಲಾಗುವುದು ಎಂದು ಕಿಡಿಕಾರಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa