ಕನೆಕ್ಟ್-2025' ಕಾರ್ಯಕ್ರಮಕ್ಕೆ ಸಚಿವ ಎಚ್ ಕೆ ಪಾಟೀಲ ಚಾಲನೆ
ಗದಗ, 02 ನವೆಂಬರ್ (ಹಿ.ಸ.) : ಆ್ಯಂಕರ್ : ಪ್ರಸಕ್ತ ಸಾಲಿನ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಕನೆಕ್ಟ್-2025 ರ ಅಂಗವಾಗಿ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದೊಂದಿಗೆ ಗದಗ ಜಿಲ್ಲೆಯ ಮಹಾತ್ಮಗಾಂಧಿ ಆ‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ''ಕನೆಕ್ಟ್-2025ರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ಫೋಟೋ


ಗದಗ, 02 ನವೆಂಬರ್ (ಹಿ.ಸ.) :

ಆ್ಯಂಕರ್ : ಪ್ರಸಕ್ತ ಸಾಲಿನ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಕನೆಕ್ಟ್-2025 ರ ಅಂಗವಾಗಿ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದೊಂದಿಗೆ ಗದಗ ಜಿಲ್ಲೆಯ ಮಹಾತ್ಮಗಾಂಧಿ ಆ‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ 'ಕನೆಕ್ಟ್-2025ರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಬಾಲಕೋಟೆ, ವಿಜಯಪುರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಕನೆಕ್ಟ್-2025 ಕಾರ್ಯಕ್ರಮಕ್ಕೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಕನೆಕ್ಟ್ 2025 ಕ್ಕೆ ಚಾಲನೆ ‎ನೀಡಿ ಮಾತನಾಡಿದರು.

‎ಕರ್ನಾಟಕ ರಾಜ್ಯದಲ್ಲಿಯೇ ಗದಗ ಜಿಲ್ಲೆ ಒಂದು ಉತ್ತಮ ಪ್ರವಾಸಿ ಸ್ಥಾನವಾಗಿದೆ. ಕೃತಪುರ ಎಂಬ ನಗರ ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಕುಮಾರವ್ಯಾಸರ ಕಾಲದಿಂದಲೂ ವೀರನಾರಾಯಣ ದೇವಾಲಯ, ತಿಕುಟೇಶ್ವರ ದೇವಾಲಯ ಕಲೆ, ಶಿಲ್ಪಕಲೆ, ಆರ‍್ಷಿಣಿಯ ಕೆತ್ತನೆಯ ನೋಡುಗರ ಗಮನ ಸೆಳೆಯುತ್ತವೆ. ಅದು ಈಗ ಗದಗ ಎಂಬ ಹೆಸರಿನ ಜಿಲ್ಲೆಯಾಗಿದ್ದು ಇದೊಂದು ಐತಿಹಾಸಿಕ ಸ್ಥಳವಾಗಿದೆ ಎಂದರು.

‎ಲಕ್ಕುಂಡಿ ಗ್ರಾಮದಲ್ಲಿ ಇರುವಂತ ಕಲಾಕೃತಿ, ಐತಿಹಾಸಿಕ 101 ಬಾವಿಗಳು, ವಿಶೇಷ ಕೆತ್ತನೆಯ ಮೂಲಕ ಹಲವಾರು ದೇವಾಲಯಗಳು, ಶಾಸನಗಳು, ಶಿಲಾಶಾಸನಗಳು, ರಾಷ್ಟ್ರಮಟ್ಟದಲ್ಲಿ ಕಣ್ಮನ ಸೆಳೆದ ಸ್ಥಳವಾಗಿದೆ. ಇಂದು ವಿಶ್ವದಲ್ಲಿಯೇ ಗಮನ ಸೆಳೆದ ಐತಿಹಾಸಿಕ ಸ್ಥಳವಾಗಿದೆ ಎಂದು ಅಭಿಪ್ರಾಯ ಪಟ್ಟರು.

‎ರಾಜ್ಯದಲ್ಲಿ 460 ಪ್ರವಾಸಿ ಸ್ಥಾನಗಳಲ್ಲಿ ಗದಗ ಜಿಲ್ಲೆಯಲ್ಲಿಯೆ 48 ಪ್ರವಾಸಿ ಸ್ಥಾನಗಳನ್ನು ಗುರುತಿಸಿರುವುದು ಜಿಲ್ಲೆಯ ಹೆಮ್ಮೆಯಾಗಿದೆ.

ಪ್ರಮುಖವಾಗಿ ಜಿಲ್ಲೆಯಲ್ಲಿ ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಹಣ ಹೂಡಿಕೆ ಮಾಡುವಂತಹ ಸಂಸ್ಥೆಗಳು ಮತ್ತು ಏಜೆನ್ಸಿ ಅವರು ಗದಗ ಜಿಲ್ಲೆಯಲ್ಲಿನ ಕನೆಕ್ಟ್ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವದು ಹೆಮ್ಮೆಯಾಗಿದೆ.

ಪ್ರವಾಸೋದ್ಯಮ ಇಲಾಖೆಗೆ ಇದೊಂದು ಐತಿಹಾಸಿಕ ಮೈಲುಗಲ್ಲು ಎಂದು ಬಣ್ಣಿಸಿದ ಸಚುವ ಎಚ್ ಕೆ ಪಾಟೀಲರು, ಹೂಡಿಕೆಗೆ ಎಲ್ಲ ರೀತಿಯಿಂದಲೂ ಉತ್ತಮ ವಾತಾವರಣ, ಆಕರ್ಷಣೀಯ ಸ್ಥಾನವಾಗಿದೆ ಎಂದರು.

‎ಗದುಗಿನ ಕಪ್ಪತ ಗುಡ್ಡವು ಉತ್ತರ ಕರ್ನಾಟಕದ ಸೈಯಾದ್ರಿ ಸಾಲುಗಳನ್ನು ಹೊಂದಿದ ಅತ್ಯಂತ ಸುಂದರ ಪ್ರೇಕ್ಷಣೀಯ ಸ್ಥಳವಾಗಿದೆ, ಕಪ್ಪತ್ಗಿರಿಯಲ್ಲಿ ಸಫಾರಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಇಲ್ಲಿ ದೊರೆಯುವಂತಹ ಗಿಡಮೂಲಿಕೆಗಳು, ಔಷಧಿಯುಕ್ತ ಸಸ್ಯಗಳು ಹಾಗೂ ಏಷ್ಯಾ ಖಂಡದಲ್ಲಿಯೆ ಕಪ್ಪತ್ಗಿರಿಯಲ್ಲಿ ಅತ್ಯಂತ ಶುದ್ಧ ಗಾಳಿ ಇರುವ ವಾತಾವರಣ ನಮ್ಮ ಜಿಲ್ಲೆಯಾಗಿದೆ ಇದು ನಮ್ಮ ಹೆಮ್ಮೆ ಎಂದರು

‎ಗದಗ ಜಿಲ್ಲೆಯ ಸುತ್ತಮುತ್ತಲಿನ ವಾತಾವರಣದಲ್ಲಿ ಗದಗ ಮಧ್ಯ ಭಾಗದಲ್ಲಿರುವ 108 ಅಡಿಯ ಬಸವಣ್ಣನವರ ಏಕತೆ ಸಾರುವ ಮೂರ್ತಿಯನ್ನು ನೋಡಲು ಸಾವಿರಾರು ಜನರು ಪ್ರತಿದಿನ ಆಗಮಿಸುತ್ತಾರೆ. ಹಾಗೂ ಭೀಷ್ಮ ಕೆರೆಯ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ಸ್ಥಳೀಯರು ಸುತ್ತಮುತ್ತಲಿನ ಜಿಲ್ಲೆಯವರು ಇದರ ಅನುಭವವನ್ನು ಪಡೆಯುತ್ತಿದ್ದಾರೆ. ಐತಿಹಾಸಿಕ ಸ್ಥಳ ಎಲ್ಲವುಗಳನ್ನು ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಡಿಸಲಾಗಿದೆ ಎಂದರು.

‎ಗದಗ ಬಿಂಕದಕಟ್ಟಿಯ ಮೃಗಾಲಯವನ್ನು ವಿಸ್ತರಿಸಿ ಸಾರ್ವಿನಿಕರ ಆಕರ್ಷಣಿವಾಗಿಸಲು ಅಭಿವೃದ್ಧಿ ಮಾಡಲಾಗುತ್ತಿದೆ. ಜೊತೆಗೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಜಿಪ್ ಲೈನ್ ಅಳವಡಿಕೆ ಮಾಡಲಾಗಿದೆ ಎಂದು ಸಚಿವ ಎಚ್ ಕೆ ಪಾಟೀಲ ಹೇಳಿದರು.

‎ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಆಯುಕ್ತ ಅಕ್ರಂ ಪಾಷಾ, ಕೆ, ಎಸ್.ಎ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಿಶ್ರ, ಪ್ರಶಾಂತ್ ಸಂಕಿಣಮಠ, ವಿವಿ ಕುಲಸಚಿವ ಡಾ. ಸುರೇಶ್ ನಾಡಗೌಡರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಎಸ್ ಎನ್ ಬಳ್ಳಾರಿ, ಲಕ್ಕುಂಡಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ, ದಾಸನೂರು, ಉತ್ತರ ಕರ್ನಾಟಕ ಭಾಗದ ಹಲವಾರು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande